6:21 PM Friday26 - June 2026
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;…

ಇತ್ತೀಚಿನ ಸುದ್ದಿ

ಹೇಸಿಗೆ ಹುಟ್ಟಿಸುವ ಪಕ್ಷಾಂತರ ರಾಜಕೀಯ: ಅಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ; ಇಲ್ಲಿ ಕಾಂಗ್ರೆಸ್ ಬಿಟ್ಟು ಜನತಾದಳಕ್ಕೆ!!

20/04/2023, 23:09

ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com

ಉತ್ತರ ಕರ್ನಾಟಕದಲ್ಲಿ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕಾಂಗ್ರೆಸ್ ಸೇರಿದ್ದಾರೆ. ಕರಾವಳಿಯಲ್ಲಿ ಟಿಕೆಟ್ ಮಿಸ್ ಆಗಿರುವುದಕ್ಕೆ ಮಾಜಿ ಶಾಸಕರೊಬ್ಬರು ಅತ್ತು ರಂಪ ಮಾಡಿ ಕಾಂಗ್ರೆಸ್ ಬಿಟ್ಟು ಜನತಾದಳ ಸೇರ್ಕೊಂಡಿದ್ದಾರೆ. ಇವರಿಗೂ ಬೆಂಬಲಿಗರಿದ್ದಾರೆ. ಬಹು ಪರಾಕ್ ಹೇಳುವವರಿದ್ದಾರೆ.!

ಹುಬ್ಬಳ್ಳಿಯಲ್ಲಿ ಟಿಕೆಟ್ ಮಿಸ್ ಆಗಿರುವುದಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಡರ್ , ಅಥಣಿಯಲ್ಲಿ ಟಿಕೆಟ್ ಕೈಗೆಟಕದಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಶೆಟ್ಟರ್ ಅವರು ಬಿಜೆಪಿ ಮೂಲ ನಿವಾಸಿ. ಅವರೇನು ವಲಸಿಗ ಬಿಜೆಪಿಗನಲ್ಲ. ಆರೆಸ್ಸೆಸ್ ಮೂಲದಿಂದ ಬಂದ ಕಟ್ಟಾ ಬಿಜೆಪಿಗ. ಸುಮಾರು 40 ವರ್ಷಗಳ ಬಿಜೆಪಿಯೊಂದಿಗಿನ ಕರುಳು ಬಳ್ಳಿ ಸಂಬಂಧವನ್ನು ಕಡಿದು ಅವರು ಹೊರಗೆ ಬಂದಿದ್ದಾರೆ.
ಶೆಟ್ಟರ್ ವೈಯಕ್ತಿಕವಾಗಿ ತುಂಬಾ ಒಳ್ಳೆಯ ಮನುಷ್ಯ, ಸಜ್ಜನ ರಾಜಕಾರಣಿ. ಯಾವುದೇ ಹಗರಣ, ವಿವಾದದಲ್ಲಿ ಸಿಲುಕಿಹಾಕಿಕೊಂಡವರಲ್ಲ. ಆದರೆ ಮೇಲಿನಿಂದ ಹೇರುವ ಬಿಜೆಪಿಯ ಹೈಕಮಾಂಡ್ ಸಂಸ್ಕೃತಿ ವಿರುದ್ಧ ಶೆಟ್ಟರ್ ಬಂಡಾಯವೆದ್ದಿದ್ದಾರೆ.

ಮೃದು ಸ್ವಭಾವದ ಶೆಟ್ಟರ್ ಅವರು ಯಾವತ್ತೂ ಪಕ್ಷದ ಸಿದ್ದಾಂತದ ವಿರುದ್ಧ ಹೋದವರಲ್ಲ ಆದರೆ ಈ ಬಾರಿ ಅವರ ಸ್ವಾಭಿಮಾನಕ್ಕೆ ಸಿಕ್ಕಾಪಟ್ಟೆ ಘಾಸಿಯಾಗಿರುವುದು ಅವರು ಬಂಡಾಯ ಏಳಲು ಕಾರಣವಾಗಿದೆ. ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಶೆಟ್ಟರ್ ಬಿಜೆಪಿಯಿಂದ ಹೊರ ಬಂದರೂ ಅವರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದಿತ್ತು. ಆದರೆ ಶೆಟ್ಟರ್ ತನ್ನ ರಾಜಕೀಯ ಜೀವನದುದ್ದಕ್ಕೂ ವಿರೋಧಿಸುತ್ತಲೇ ಬಂದ ಕಾಂಗ್ರೆಸ್ ಸೇರಿದರು. ಇನ್ನು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಆರೋಪಕ್ಕೊಳಗಾದವರು. ವಿಶೇಷವೆಂದರೆ ಕಾಂಗ್ರೆಸಿಗರು ಮೊನ್ನೆ ಮೊನ್ನೆಯವರೆಗೂ ಸವದಿ ಅವರಿಗೆ ಬ್ಲೂಫಿಲಂ ನೋಡಿದವರು ಎಂದು ಹಂಗಿಸುತ್ತಲೇ ಇದ್ದರು. ರಾಜಕೀಯದಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎಂಬಂತೆ ಇದೀಗ ಲಕ್ಷ್ಮಣ ಸವದಿ ಕಾಂಗ್ರೆಸಿಗರಿಗೆ ಬಹಳ ನೆಂಟಸ್ಥರಾಗಿದ್ದಾರೆ. ಅದೇ ರೀತಿ ಬಿಜೆಪಿ ಕೂಡ ಕಾಂಗ್ರೆಸ್ ಮತ್ತು ಜನತಾ ದಳ ಶಾಸಕರನ್ನು ಆಪರೇಶನ್ ಕಮಲಕ್ಕೊಳಪಡಿಸಿ ಅಧಿಕಾರಕ್ಕೆ ಬಂದಿದೆ. ಜನಸಂಘದಿಂದ ರೂಪಾಂತರಗೊಂಡ ಬಿಜೆಪಿ ಈ ಹಿಂದಿನ ಜನಸಂಘದ ಹಾದಿಯಲ್ಲೇ ಸಾಗುತ್ತಿದ್ದರೆ ಖಂಡಿತವಾಗಿಯೂ ರಾಜ್ಯದಲ್ಲಿ ಆಪರೇಶನ್ ಕಮಲಕ್ಕೆ ಜಾಗ ಇರುತ್ತಿರಲಿಲ್ಲ.

ಇದೀಗ ಉತ್ತರ ಕರ್ನಾಟಕದ ಪಕ್ಷಾಂತರದ
ಕಥೆ ಈ ರೀತಿಯಾದರೆ ಕರಾವಳಿ ಕರ್ನಾಟಕದ ಮಂಗಳೂರು ಉತ್ತರ ಕ್ಷೇತ್ರದ ಕಥೆ ಕೂಡ ಒಂದು ರೀತಿಯಲ್ಲಿ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ತರಹವೇ ಇದೆ. ಇಲ್ಲಿ ಪಕ್ಷಾಂತರಕ್ಕೆ ಟಿಕೆಟ್ ಒಂದೇ ಕಾರಣ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ 11 ಮಂದಿ ಆಕಾಂಕ್ಷಿಗಳಿದ್ದರು. ಅವರಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವಾ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಈ ಜಿದ್ದಾಜಿದ್ದಿನಲ್ಲಿ ಮೊಯ್ದೀನ್ ಬಾವಾ ಸೋಲು ಅನುಭವಿಸಿದ್ದಾರೆ. ಟಿಕೆಟ್ ಸಿಗದ ಜಿದ್ದಿನಲ್ಲಿ ಬಾವಾ ಅವರು ಮರುಕ್ಷಣವೇ ಜನತಾದಳ ಸೇರಿ ನಾಮಪತ್ರ ಸಲ್ಲಿಸಿದ್ದಾರೆ. ಬಾವಾ ಅವರ ಸಹೋದರ ಬಿ.ಎಂ. ಫಾರೂಕ್ ಅವರು ಜನತಾದಳದಿಂದ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅಣ್ಣ- ತಮ್ಮ ಒಂದೇ ಪಕ್ಷದಡಿಗೆ ಬಂದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು