3:42 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಹೆಚ್ಚುತ್ತಿರುವ ಹೃದ್ರೋಗ: ಆತಂಕ ರಹಿತ ಸಹಜ ಜೀವನಕ್ಕೆ ಏನೆಲ್ಲ ಮಾಡಬೇಕು?; ಡಾ. ಭವ್ಯ ಶೆಟ್ಟಿ ಬರೆಯುತ್ತಾರೆ

12/02/2022, 11:39

ಹೃದ್ರೋಗ ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಆಘಾತಕಾರಿ ಪ್ರಮಾಣದಲ್ಲಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಯುವಕರು ಹಾಗೂ ಮದ್ಯವಯಸ್ಕರು ಬಲಿಯಾಗುತ್ತಿರುವುದನ್ನು ಗಮನಿಸಿರಬಹುದು. ಇನ್ನೂ ಹಲವರು ಕೊರೊನರಿ ಆಂಜಿಯೋಗ್ರಾಫಿ, ಆಂಜಿಯೋಪ್ಲಾಸ್ಟಿ ಅಥವಾ ಬೈಪಾಸ್ ಸರ್ಜರಿಗೆ ಒಳಗಾಗಿ ಔಷಧಿಯನ್ನು ತೆಗೆದುಕೊಳ್ಳುತ್ತಾ ಇರುವವರನ್ನು ಕಾಣಬಹುದು. ಇಂತಹವರು ಹೆಚ್ಚಿನ ಜಾಗರೂಕತೆ ವಹಿಸುವುದು ಅಗತ್ಯ. ತಮ್ಮ ಜೀವನ ಶೈಲಿ ಹಾಗೂ ಆಹಾರದಲ್ಲಿ ಈ  ಕೆಳಗೆ ತಿಳಿಸಿದ ನಾಲ್ಕು ಅಂಶಗಳನ್ನು ಪಾಲಿಸಿಕೊಂಡು ಬಂದಲ್ಲಿ ಎಲ್ಲರಂತೆ ಆತಂಕ ರಹಿತ  ಸಹಜ ಜೀವನ ನಡೆಸುವುದರಲ್ಲಿ ಸಂಶಯವಿಲ್ಲ.

1)ವ್ಯಾಯಾಮ

*ಪ್ರತೀದಿನ 30 ನಿಮಿಷ  ಸಮತಟ್ಟು ಜಾಗದಲ್ಲಿ  ಚುರುಕಾಗಿ ನಡೆಯುವುದು ಹೃದ್ರೋಗಕ್ಕೆ ಅತ್ಯುತ್ತಮ ವ್ಯಾಯಾಮವಾಗಿದೆ.

*ಮಾಂಸಖಂಡದ ಸ್ಟ್ರಚಿಂಗ್, ರಿಲಾಕ್ಸಿಂಗ್ ಮಾಡುವ ಕೆಲವೊಂದು  ಯೋಗಸನಗಳನ್ನು  ನುರಿತ ಯೋಗ ಶಿಕ್ಷಕರು ಹಾಗು ವೈದ್ಯರ ಸಲಹೆ ಪಡೆದು ಅಭ್ಯಾಸಿಸುವುದು.

*ಪ್ರಾಣಯಾಮ -5 ಸೆಕೆಂಡ್  ಉಶ್ವಾಸ  8 ಸೆಕೆಂಡ್ಗಳ ಕಾಲ ನಿಶ್ವಾಸ, ಪ್ರತೀದಿನ 10ನಿಮಿಷಗಳವರೆಗೆ ಮಾಡುವುದು.

2)ಒತ್ತಡ ನಿರ್ವಹಣೆ

* ಪ್ರತೀ ದಿನ 15 ನಿಮಿಷ ಧ್ಯಾನ ಮಾಡುವುದು ಒತ್ತಡ ನಿರ್ವಹಣೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಧನಾತ್ಮಕ ಚಿಂತನೆಯನ್ನು ವೃದ್ಧಿಸುತ್ತದೆ.

3)ಆಹಾರ

ಕೊಬ್ಬಿನಾಂಶವನ್ನು ನಿಯಂತ್ರಣದಲ್ಲಿ ಇಡುವುದು.

LDL 130mg% ಗಿಂತ ಕಡಿಮೆ ಹಾಗು HDL ನ ಪ್ರಮಾಣ ಶೇಕಡಾ 45 mg ಗಿಂತ ಜಾಸ್ತಿ ಇರುವಂತೆ ನೋಡಿಕೊಳ್ಳುವುದು ಉತ್ತಮ.

*ಡಾಲ್ದಾ, ವನಸ್ಪತಿ,ಎಣ್ಣೆಯಲ್ಲಿ ಕರಿದ ಆಹಾರ, ಚಿಪ್ಸ್, ಕೆಂಪು ಮಾಂಸಹಾರ ಸೇವನೆ ತ್ಯಜಿಸಬೇಕು.

 *ಬಳಸಿದ ಎಣ್ಣೆಯನ್ನು ಮತ್ತೊಮ್ಮೆ ಬಳಸಬಾರದು.

*ಅತಿಯಾದ ಟೀ – ಕಾಫಿ ಸೇವನೆ ಒಳ್ಳೆಯದಲ್ಲ.

*ಹೆಚ್ಚಿನ ಪ್ರಮಾಣದಲ್ಲಿ ನಾರಿನಾಂಶ ಹೊಂದಿರುವ ಆಹಾರ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಹೆಚ್ಚಿಸಬಹುದು.

*ಹಸಿರು ತರಕಾರಿ, ಹಣ್ಣು , ಸಲಾಡ್,  ಹಸಿಮೊಳಕೆ ಬರಿಸಿದ ಕಾಳು, ದ್ವಿದಳ ಧಾನ್ಯ, ಸಿಹಿಗುಂಬಳಕಾಯಿ, ಸ್ಪೀನಾಚ್, ಮೂಲಂಗಿ, ರೋಟಿ, ಕೆನೆ ತೆಗೆದ ಹಾಲು, ಮೊಟ್ಟೆಯ ಬಿಳಿಭಾಗ ಸೇವನೆ ಉತ್ತಮ.

*ಈರುಳ್ಳಿ, ಬೆಳ್ಳುಳ್ಳಿ, ಆಪಲ್ನ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟಿರೋಲ್ ಕಡಿಮೆಯಾಗುತ್ತದೆ.

4)ಕೆಟ್ಟ ಹವ್ಯಾಸಗಳಾದ ಮಧ್ಯಾಪಾನ, ಧೂಮಪಾನ ಹಾಗು ತಂಬಾಕು ಸೇವನೆ ತ್ಯಜಿಸುವುದು.

ಇದರೊಂದಿಗೆ ದೇಹದ ತೂಕವನ್ನು, ಮಧುಮೇಹ, ರಕ್ತದೋತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು.

ಇಂತಹ  ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರಿಂದ ಹೃದಯದ ತೊಂದರೆಯಿಂದ ದೂರವಿರಿಸುವುದಲ್ಲದೆ, ಮಾನಸಿಕ ಹಾಗು ಶಾರೀರಿಕ ಆರೋಗ್ಯನ್ನು ಕಾಪಾಡಿ ನೆಮ್ಮದಿಯ ಜೀವನ ನಡೆಸಬಹುದು.

ಡಾ. ಭವ್ಯ ಶೆಟ್ಟಿ

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163

ಇತ್ತೀಚಿನ ಸುದ್ದಿ

ಜಾಹೀರಾತು