4:51 AM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ದಿನವಿಡೀ ಕೈಕೊಟ್ಟ ಕರ್ಣಾಟಕ ಬ್ಯಾಂಕ್ ಸರ್ವರ್: ಸಿಬ್ಬಂದಿಗಳ ಪರದಾಟ; ಗ್ರಾಹಕರಿಗೆ ಪ್ರಾಣ ಸಂಕಟ

21/02/2023, 19:15

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ದೇಶದ ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕ್ ಆದ ಕರ್ಣಾಟಕ ಬ್ಯಾಂಕ್ ನ ಸರ್ವರ್ ಸಂಬಂಧಿಸಿದ ತಾಂತ್ರಿಕ ದೋಷದಿಂದ ಲಕ್ಷಗಟ್ಟಲೆ ಗ್ರಾಹಕರು ಇಂದು ತೊಂದರೆ ಅನುಭವಿಸಬೇಕಾಯಿತು.

ಬುಧವಾರ ಬೆಳಗ್ಗಿನಿಂದಲೇ ಕರ್ಣಾಟಕ ಬ್ಯಾಂಕ್ ನ ಸರ್ವರ್ ಕೈಕೊಟ್ಟಿತು. ಗೂಗಲ್ ಪೇ ಹಾಗೂ ಇತರ ರೀತಿಯಲ್ಲಿ ಆನ್ ಲೈನ್ ಹಣ ವರ್ಗಾವಣೆ ಮಾಡುವವರಿಗೆ ‘ನಿಮ್ಮ ಬ್ಯಾಂಕಿನ ಸರ್ವರ್ ಡೌನ್ ಆಗಿದೆ’ ಎಂಬ ಸಂದೇಶ ಬರುತ್ತಿತ್ತು. ಇದರ ಜತೆಗೆ ಎಟಿಎಂನಲ್ಲಿಯೂ ನಗದು ವಿತ್ ಡ್ರಾ ಮಾಡುವಾಗಲೂ ಇದೇ ಸಮಸ್ಯೆ ಗ್ರಾಹಕರಿಗೆ ಎದುರಾಯಿತು.

ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕಿದವರು ಗೂಗಲ್ ಪೇ, ಫೋನ್ ಪೇ ಹಾಗೂ ಇತರ ರೀತಿಯಲ್ಲಿ ಆನ್ ಲೈನ್ ಮೂಲಕ ನಗದು ವರ್ಗಾಯಿಸಲಾಗದೆ ಪೇಚಿಗೆ ಸಿಲುಕಬೇಕಾಯಿತು. ‘ಇವತ್ತು ಹಣ ಪಾವತಿಸುತ್ತೇನೆ’ ಅಂತ ಪ್ರಾಮಿಸ್ ಮಾಡಿದವರು ಮುಜಗರಕ್ಕೊಳಗಾಗಬೇಕಾಯಿತು. ಇಎಂಐ ಕಟ್ಟುವವರು ಕೂಡ ತೊಂದರೆಗೆ ಸಿಲುಕಿದರು.

ಈ ಮಧ್ಯೆ ಕರ್ಣಾಟಕ ಬ್ಯಾಂಕ್ ಶಾಖೆಗಳಲ್ಲಿ ಇವತ್ತು ಮಾಮೂಲಿಗಿಂತ ಹೆಚ್ಚು ಗ್ರಾಹಕರಿದ್ದರು. ಆನ್ ಲೈನ್ ಟ್ರಾನ್ಸ್ ಫರ್ ಹಾಗೂ ಎಟಿಎಂ ನಂಬಿ ಚೆಕ್ ಮನೆಯಲ್ಲಿಟ್ಟು ಬಂದವರು ಸಮೀಪದ ಬ್ಯಾಂಕ್ ಶಾಖೆಗೆ ತೆರಳಿ ವಿತ್ ಡ್ರಾವಲ್ ಸ್ಲಿಪ್ ಮೂಲಕ ಕ್ಯೂ ನಿಂತು ನಗದು ಪಡೆದರು. ಆದರೆ ಕರೆಂಟ್ ಅಕೌಂಟ್ ನವರಿಗೆ ವಿತ್ ಡ್ರಾವಲ್ ಸ್ಲಿಪ್ ಮೂಲಕ ನಗದು ಪಡೆಯಲು ಸಾಧ್ಯವಾಗಲಿಲ್ಲ. ಕರೆಂಟ್ ಅಕೌಂಟ್ ಗೆ ಚೆಕ್ ನಂಬರ್ ಕಡ್ಡಾಯ ಬೇಕಾಗಿರುವುದರಿಂದ ಅವರು ಮತ್ತೆ ಮನೆ ಕಡೆ ಮುಖ ಮಾಡುವುದು ಅನಿವಾರ್ಯವಾಗಿತ್ತು. ವಿಶೇಷವೆಂದರೆ ಸಂಜೆ ವರೆಗೂ ಕರ್ಣಾಟಕ ಬ್ಯಾಂಕ್ ತಾಂತ್ರಿಕ ಸಮಸ್ಯೆ ಪರಿಹಾರವಾಗಿಲ್ಲ‌.

ಇತ್ತೀಚಿನ ಸುದ್ದಿ

ಜಾಹೀರಾತು