5:15 AM Thursday23 - April 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ…

ಇತ್ತೀಚಿನ ಸುದ್ದಿ

ದಿನವಿಡೀ ಕೈಕೊಟ್ಟ ಕರ್ಣಾಟಕ ಬ್ಯಾಂಕ್ ಸರ್ವರ್: ಸಿಬ್ಬಂದಿಗಳ ಪರದಾಟ; ಗ್ರಾಹಕರಿಗೆ ಪ್ರಾಣ ಸಂಕಟ

21/02/2023, 19:15

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ದೇಶದ ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕ್ ಆದ ಕರ್ಣಾಟಕ ಬ್ಯಾಂಕ್ ನ ಸರ್ವರ್ ಸಂಬಂಧಿಸಿದ ತಾಂತ್ರಿಕ ದೋಷದಿಂದ ಲಕ್ಷಗಟ್ಟಲೆ ಗ್ರಾಹಕರು ಇಂದು ತೊಂದರೆ ಅನುಭವಿಸಬೇಕಾಯಿತು.

ಬುಧವಾರ ಬೆಳಗ್ಗಿನಿಂದಲೇ ಕರ್ಣಾಟಕ ಬ್ಯಾಂಕ್ ನ ಸರ್ವರ್ ಕೈಕೊಟ್ಟಿತು. ಗೂಗಲ್ ಪೇ ಹಾಗೂ ಇತರ ರೀತಿಯಲ್ಲಿ ಆನ್ ಲೈನ್ ಹಣ ವರ್ಗಾವಣೆ ಮಾಡುವವರಿಗೆ ‘ನಿಮ್ಮ ಬ್ಯಾಂಕಿನ ಸರ್ವರ್ ಡೌನ್ ಆಗಿದೆ’ ಎಂಬ ಸಂದೇಶ ಬರುತ್ತಿತ್ತು. ಇದರ ಜತೆಗೆ ಎಟಿಎಂನಲ್ಲಿಯೂ ನಗದು ವಿತ್ ಡ್ರಾ ಮಾಡುವಾಗಲೂ ಇದೇ ಸಮಸ್ಯೆ ಗ್ರಾಹಕರಿಗೆ ಎದುರಾಯಿತು.

ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕಿದವರು ಗೂಗಲ್ ಪೇ, ಫೋನ್ ಪೇ ಹಾಗೂ ಇತರ ರೀತಿಯಲ್ಲಿ ಆನ್ ಲೈನ್ ಮೂಲಕ ನಗದು ವರ್ಗಾಯಿಸಲಾಗದೆ ಪೇಚಿಗೆ ಸಿಲುಕಬೇಕಾಯಿತು. ‘ಇವತ್ತು ಹಣ ಪಾವತಿಸುತ್ತೇನೆ’ ಅಂತ ಪ್ರಾಮಿಸ್ ಮಾಡಿದವರು ಮುಜಗರಕ್ಕೊಳಗಾಗಬೇಕಾಯಿತು. ಇಎಂಐ ಕಟ್ಟುವವರು ಕೂಡ ತೊಂದರೆಗೆ ಸಿಲುಕಿದರು.

ಈ ಮಧ್ಯೆ ಕರ್ಣಾಟಕ ಬ್ಯಾಂಕ್ ಶಾಖೆಗಳಲ್ಲಿ ಇವತ್ತು ಮಾಮೂಲಿಗಿಂತ ಹೆಚ್ಚು ಗ್ರಾಹಕರಿದ್ದರು. ಆನ್ ಲೈನ್ ಟ್ರಾನ್ಸ್ ಫರ್ ಹಾಗೂ ಎಟಿಎಂ ನಂಬಿ ಚೆಕ್ ಮನೆಯಲ್ಲಿಟ್ಟು ಬಂದವರು ಸಮೀಪದ ಬ್ಯಾಂಕ್ ಶಾಖೆಗೆ ತೆರಳಿ ವಿತ್ ಡ್ರಾವಲ್ ಸ್ಲಿಪ್ ಮೂಲಕ ಕ್ಯೂ ನಿಂತು ನಗದು ಪಡೆದರು. ಆದರೆ ಕರೆಂಟ್ ಅಕೌಂಟ್ ನವರಿಗೆ ವಿತ್ ಡ್ರಾವಲ್ ಸ್ಲಿಪ್ ಮೂಲಕ ನಗದು ಪಡೆಯಲು ಸಾಧ್ಯವಾಗಲಿಲ್ಲ. ಕರೆಂಟ್ ಅಕೌಂಟ್ ಗೆ ಚೆಕ್ ನಂಬರ್ ಕಡ್ಡಾಯ ಬೇಕಾಗಿರುವುದರಿಂದ ಅವರು ಮತ್ತೆ ಮನೆ ಕಡೆ ಮುಖ ಮಾಡುವುದು ಅನಿವಾರ್ಯವಾಗಿತ್ತು. ವಿಶೇಷವೆಂದರೆ ಸಂಜೆ ವರೆಗೂ ಕರ್ಣಾಟಕ ಬ್ಯಾಂಕ್ ತಾಂತ್ರಿಕ ಸಮಸ್ಯೆ ಪರಿಹಾರವಾಗಿಲ್ಲ‌.

ಇತ್ತೀಚಿನ ಸುದ್ದಿ

ಜಾಹೀರಾತು