9:50 AM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಕ್ಲಬ್ ಹೌಸ್ ನಲ್ಲಿ ಇಂದು ಮೊದಲ ಬಾರಿಗೆ ಪೇಜಾವರ ಶ್ರೀ, ಡಾ. ಕೆ. ಕೆ. ಮುಹಮದ್ ಅವರ ಉಪನ್ಯಾಸ; ಅಯೋಧ್ಯೆಯ ಕುರಿತು ವಿಚಾರ ಮಂಥನ

06/09/2021, 11:06

ಮಂಗಳೂರು(reporterkarnataka.com): ‘ಅಯೋಧ್ಯೆ – ರಾಷ್ಟ್ರಜಾಗೃತಿಯ ಅಸ್ಮಿತೆ’ ವಿಷಯದ ಕುರಿತು ವಿಚಾರ ಮಂಥನ ವಿಶೇಷ ಕಾರ್ಯಕ್ರಮ ಸೆಪ್ಟೆಂಬರ್ 6ರಂದು(ಸೋಮವಾರ)ರಂದು ರಾತ್ರಿ 8 ಗಂಟೆಗೆ ಕ್ಲಬ್ ಹೌಸ್ ನಲ್ಲಿ ನಡೆಯಲಿದೆ.

ಶ್ರೀರಾಮಚಂದ್ರನ ಮಂದಿರ ನಿರ್ಮಾಣವಾಗುತ್ತಿರುವ ಈ ಹೊತ್ತಿನಲ್ಲಿ, ಇಡಿಯ ಹೋರಾಟ ರೂಪುಗೊಂಡ ಬಗೆ, ವಿವಾದ ಪರಿಹಾರವಾದ ರೀತಿ, ಪುರಾತತ್ವ ದಾಖಲೆಗಳ ವಿವರಗಳು, ದೇಶದ ಪ್ರತಿಯೊಬ್ಬರಲ್ಲೂ ರಾಷ್ಟ್ರಾಭಿಮಾನ ಜಾಗೃತವಾದ ಬಗೆ.. ಇವೆಲ್ಲವನ್ನೂ ಮೆಲುಕು ಹಾಕುವ ಒಂದು ವಿಶೇಷ ಕಾರ್ಯಕ್ರಮ ದಿನಾಂಕ 6 ಸೆಪ್ಟೆಂಬರ್ 2021 (ಸೋಮವಾರ)ರಂದು ರಾತ್ರಿ 8 ಗಂಟೆಗೆ ಕ್ಲಬ್ ಹೌಸ್ ನಲ್ಲಿ ನಡೆಯಲಿದೆ. 

ಕಾರ್ಯಕ್ರಮದ ವಿವರ ಹೀಗಿದೆ:

ಶೀರ್ಷಿಕೆ: ‘ಅಯೋಧ್ಯೆ – ರಾಷ್ಟ್ರಜಾಗೃತಿಯ ಅಸ್ಮಿತೆ’

ಉಪಸ್ಥಿತಿ ಮತ್ತು ಮುಖ್ಯ ಉಪನ್ಯಾಸ: 

 ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು

(ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಹಾಗೂ ವಿಶ್ವಸ್ಥರು, ಶ್ರೀರಾಮಜನ್ಮಭೂಮಿ ತೀರ್ಥ ಟ್ರಸ್ಟ್, ಅಯೋಧ್ಯಾ)

ಉಪಸ್ಥಿತಿ: ಶ್ರೀ ರಾಜಶೇಖರಾನಂದ ಶ್ರೀಪಾದಂಗಳವರು

(ಗುರುಪುರ ಶ್ರೀ ವಿದ್ಯಾಮಾನ್ಯ ತೀರ್ಥ ಸಂಸ್ಥಾನಮ್, ವಜ್ರದೇಹಿ ಮಠ)

ವಿಶೇಷ ಆಮಂತ್ರಿತರು: ಪದ್ಮಶ್ರೀ ಪುರಸ್ಕೃತ ಡಾ. ಕೆ. ಕೆ. ಮುಹಮದ್

(ನಿವೃತ್ತ ಅಧಿಕಾರಿಗಳು, ಪ್ರಾಚ್ಯ ಮತ್ತು ಪುರಾತತ್ವ ಇಲಾಖೆ, ಭಾರತ ಸರಕಾರ)

ವಿಶೇಷ ಆಮಂತ್ರಿತರು: ಶ್ರೀ ಎನ್. ರವಿಕುಮಾರ್

(ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರಕಾರ)

ಕಾರ್ಯಕ್ರಮವನ್ನು ಅಂಕಣಕಾರ ರೋಹಿತ್ ಚಕ್ರತೀರ್ಥ  ನಡೆಸಿಕೊಡಲಿದ್ದಾರೆ. ಗಾಯಕಿ

ರಮ್ಯಾ ವಾಸಿಷ್ಠ ಪ್ರಾರ್ಥನೆ ಹಾಡಲಿದ್ದಾರೆ. ಸಮಾಜದ ಹತ್ತುಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು