3:16 PM Saturday20 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

Chamarajanagara | ರಾಜೀವ್ ದೀಕ್ಷಿತ್ ಭಾರತದ ಆಧುನಿಕ ಸ್ವದೇಶಿ ಹರಿಕಾರ: ಸುರೇಶ್ ಋಗ್ವೇದಿ

03/12/2025, 20:52

ಚಾಮರಾಜನಗರ(reporterkarnataka.com): ಸ್ವದೇಶಿ ಚಿಂತಕ, ಸ್ವದೇಶಿ ಬಂಧು, ರಾಜೀವ್ ದೀಕ್ಷಿತ್ ಭಾರತದ ಆಧುನಿಕ ಸ್ವದೇಶಿ ಹರಿಕಾರರು. ಭಾರತದ ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ರಾಸಾಯನಿಕಗಳು ಹಾಗೂ ವಸ್ತುಗಳ ಅಡ್ಡ ಪರಿಣಾಮಗಳ ಬಗ್ಗೆ ಸಮಗ್ರ ಜಾಗೃತಿ ಮೂಡಿಸಿದವರು ರಾಜೀವ್ ದೀಕ್ಷಿತ್ ಎಂದು ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ಹೇಳಿದರು.
ಅವರು ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸ್ವದೇಶಿ ಪ್ರೇಮಿ ರಾಜೀವ್ ದೀಕ್ಷಿತ್ ರವರ ಕೊಡುಗೆಗಳು ಕುರಿತ ಕಾರ್ಯಕ್ರಮದಲ್ಲಿ ಮಾತನಾಡುತ್ತ, ವಿಶ್ವದ ಶ್ರೇಷ್ಠ ವಿಜ್ಞಾನಿ, ಐಐಟಿ ಪದವಿ ಪಡೆದು ಭಾರತದ ಕೋಟಿ ಕೋಟಿ ಭಾರತೀಯರಲ್ಲಿ ಸ್ವದೇಶಿ ಪ್ರಜ್ಞೆ ಜಾಗೃತಿ ಗೊಳಿಸಿ ಯುವಕರ ಆದರ್ಶರಾದರು. ರೈತರು, ಆಹಾರ ಉತ್ಪಾದನೆ, ವಿದೇಶಿಯ ವ್ಯಾಪಾರದ ಮೋಸದ ಜಾಲವನ್ನು ಎಳೆ ಎಳೆ ಯಾಗಿ ವಿವರಿಸಿ, ಆಧಾರ ಸಮೇತ ಜಗತ್ತಿಗೆ ತಿಳಿಸಿದರು. ಚಾಮರಾಜನಗರಕ್ಕೆ 3 ಬಾರಿ ಭೇಟಿ ನೀಡಿ ಜೈಹಿಂದ್ ಕಟ್ಟೆಯಲ್ಲಿ ಶುಭಕೋರಿದ ದೀಕ್ಷಿತ್ ಅತ್ಯಂತ ಸರಳ ವ್ಯಕ್ತಿ. ಎಂಟೆಕ್ ಪದವಿ ಪಡೆದು ಭಾರತೀಯ ಸಂಸ್ಕೃತಿ, ಪರಂಪರೆ, ಸ್ವದೇಶಿ ಚಳುವಳಿ, ರಾಷ್ಟ್ರಧರ್ಮ,ಸ್ವಾಭಿಮಾನದ ಯಾತ್ರೆಯ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಜಾಗೃತಿ ಅಭಿಯಾನವನ್ನು ನಡೆಸಿ ರೈತರು ಯುವಕರು ಹಾಗೂ ದೇಶಿಯ ಜನರಲ್ಲಿ ಸ್ವದೇಶಿಯ ಜಾಗೃತಿಯನ್ನು ಮೂಡಿಸಿದೆ ಮಹಾನ್ ವ್ಯಕ್ತಿ. ಬಾಲ್ಯದಲ್ಲಿಯೇ ಚಂದ್ರಶೇಖರ್ ಆಜಾದ್ ,ಭಗತ್ ಸಿಂಗ್ ,ಉದಂ ಸಿಂಗ್ ಮುಂತಾದ ಕ್ರಾಂತಿಕಾರರ ಪ್ರಭಾವಕ್ಕೆ ಒಳಗಾಗಿದ್ದರು .ಅತ್ಯಂತ ಸರಳ ವ್ಯಕ್ತಿಯಾಗಿ ಬದುಕಿ ಆದರ್ಶವಾಗಿದ್ದಾರೆ ಎಂದರು.
ರಾಜೀವ್ ದೀಕ್ಷಿತ್ ಭಾವಚಿತ್ರಕ್ಕೆ ಪುಷ್ಪವನ್ನು ಸಲ್ಲಿಸಿ ಉದ್ಘಾಟನೆ ನೆರೆವೇರಿಸಿದ ಹಸಿರುಪಡೆಯ ಸಂಚಾಲಕ ಸತೀಶ್ ರವರು ಮಾತನಾಡಿ ನಮ್ಮೆಲ್ಲರಿಗೂ ಪರಿಸರ ಸಂರಕ್ಷಣೆ ,ಕ್ರಿಮಿ ನಾಶಕಗಳ ಬಳಕೆಯ ಅಪಾಯ, ಆಹಾರ ಉತ್ಪಾದನೆ ಯಲ್ಲಿ ರಾಸಾಯನಿಕಗಳ ಬಳಕೆಯ ಪರಿಣಾಮ ಮುಂತಾದ ವಿಚಾರಗಳ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನು ನೀಡಿದ ಮಹಾನ್ ವ್ಯಕ್ತಿ. ಅವರ ಆಹಾರ ಸೂತ್ರಗಳು ವಿಶ್ವ ಖ್ಯಾತಿಯನ್ನು ಪಡೆದಿದೆ. ಭಾರತೀಯರಾದ ಪ್ರತಿಯೊಬ್ಬರು ಗೋ ಸಂಪತ್ತನ್ನು ಉಳಿಸಿ ಬೆಳೆಸುವ ಜೊತೆಗೆ ಪರಿಸರ ಸಂರಕ್ಷಣೆ, ಸ್ವದೇಶಿ ಜಾಗೃತಿ ,ಪ್ಲಾಸ್ಟಿಕ್ ನಿರ್ಮೂಲನೆಯ ಬಗ್ಗೆ ಸದಾ ಕಾಲ ಜಾಗೃತಿ ಆಗಬೇಕು ಎಂದರು.


ಓಂ ಶಾಂತಿ ನ್ಯೂಸ್ ಬಿಕೆ ಆರಾಧ್ಯ ಮಾತನಾಡಿ ಆಜಾದಿ ಬಚಾವೋ ಆಂದೋಲನದ ದೀಕ್ಷಿತ್ 1967 ನವಂಬರ್ 30ರಂದು ಜನಿಸಿದರು ಉದಾರಿಕರಣ ,ಜಗತೀಕರಣ ಖಾಸಗಿಕರಣದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಚಿಕ್ಕವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿದವರು , ನಗರದ ಋಗ್ವೇದಿ ಕುಟೀರಕ್ಕೆ ಭೇಟಿ ನೀಡಿದ ಸವಿನೆನಪಿನಲ್ಲಿ ಪ್ರತಿವರ್ಷ ಅವರ ಕುರಿತು ಕಾರ್ಯಕ್ರಮ ರೂಪಿಸುತ್ತಿರುವ ಜೈ ಹಿಂದ್ ಪ್ರತಿಷ್ಠಾನ ಮಾದರಿಯಾದದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಮ್ ಪ್ರಸಾದ್, ಮಹೇಶ್, ಜೀವನ್ , ಶ್ರಾವ್ಯ ಋಗ್ವೇದಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು