9:23 AM Thursday10 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಚಳ್ಳಕೆರೆ: ಶೂನ್ಯದ ಮಾರಮ್ಮ ದೇವರಿಗೆ ಅದ್ದೂರಿಯ ಎತ್ತಿನ ಗೂಡು ಕಾರ್ಯಕ್ರಮ

27/01/2022, 13:13

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com

ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ತೋಡ್ಲರಹಟ್ಟಿ ಬಳಿ ದೇವರ ಎತ್ತುಗಳನ್ನು ಮೆರೆಸುವ ಮೂಲಕ ಶ್ರೀ ಶೂನ್ಯದ ಮಾರಮ್ಮ ದೇವರ ಎತ್ತಿನ ಗೂಡು ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಬುಡಕಟ್ಟು ಮ್ಯಾಸನಾಯಕರ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಶೂನ್ಯ ಮಾರಮ್ಮ ದೇವರ ಎತ್ತಿನಗೂಡು ಕಾರ್ಯಕ್ರವು ಮಂಗಳವಾರ ತೋಡ್ಲರಹಟ್ಟಿ ಬಳಿ ದೇವರ ಪದಿಗಳನ್ನು ತಂಗಟೆ, ಪುವಲಿ, ಬಂದರಕಳ್ಳೆಗಳಿಂದ ದೇವರ ಪದಿಗಳ ನಿರ್ಮಾಣ ಮಾಡುವ ಮೂಲಕ ಆರಂಭವಾಗುತ್ತದೆ. ಅಂದು ಸಂಜೆ ನೂರಾರು ಭಕ್ತಾಧಿಗಳು ದೇವರ ಪದಿಗಳ ಬಳಿ ದೇವರ ಎತ್ತುಗಳ ಜೊತೆಯಲ್ಲಿ ವಾಸ್ತವ್ಯ ಮಾಡುತ್ತಾರೆ. ಭಕ್ತಾಧಿಗಳು ತಂದಂತ ರೊಟ್ಟಿಯನ್ನು ಎತ್ತುಗಳಿಗೆ ನೀಡಿ ಭಕ್ತಿಯನ್ನು ಸಮರ್ಪಣೆ ಮಾಡುತ್ತಾರೆ.

ಇನ್ನು ಮಂಗಳಾವರ ರಾತ್ರಿ ಶೂನ್ಯದ ಮಾರಮ್ಮ ದೇವಿಯನ್ನು ಕಿಲಾರಿಗಳು ಕಟ್ಟಿದ ಹುಲ್ಲಿನ ಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು.

 ಇನ್ನು ಬುಧವಾರ ಬೆಳಿಗ್ಗೆಯಿಂದ ಶೂನ್ಯದ ಮಾರಮ್ಮ ದೇವಿ ಗುಡಿಯಲ್ಲಿ ಪ್ರತಿಷ್ಠಾಪಿಸಿದ್ದ ಮಾರಮ್ಮ ಮೂರ್ತಿಗೆ ಭಕ್ತಾಧಿಗಳು ಹೂ ಹಣ್ಣು ಕಾಯಿ ಇಟ್ಟು ಪೂಜೆ ಸಲ್ಲಿಸಲಾಯಿತು.

ನಂತರ ಸೂರ್ಯನು ಸ್ವಲ್ಪ ಇಳಿಮುಖವಾದಗ ಮೇಯಲು ಹೋದ ದೇವರ ಎತ್ತುಗಳನ್ನು ಹೊಡೆದಂದು ದೇವರ ಪದಿಗಳ ಮುಂದೆ ಅಯಾ ಬೆಡಿಗಿನವರು ಎತ್ತುಗಳನ್ನು ಪ್ರತ್ಯೇಕ ಮಾಡಿಕೊಂಡು ಮೂರು ಬಾರಿ ಮರೆಸಿ, ಆಯಾ ದೇವರ ಪದಿಗಗಳ ಹಮುಂದೆ ಭಕ್ತಾಧಿಗಳ ತಮ್ಮ ಮನೆಯ ದೇವರ ಎತ್ತುಗಳಿಗೆ ಮಂಡಕ್ಕಿ ತೂರಿ ಹಾರಕುತ್ತಾರೆ.

ಎತ್ತುಗಳಿಗೆ, ತದನಂತರ ಕಿಲಾರಿಗಳು ತಮ್ಮ ಪದಿಗಳ ಮುಂದೆ ಕರಿ ಕಂಬಳಿ ಹಾಕಿದಾಗ ಭಕ್ತಾದಿಗಳು ಹೂವು, ಹಣ್ಣು, ಕಾಯಿ ಕಾಸು ಇಟ್ಟು ಪೂಜೆ ಸಲ್ಲಿಸುತ್ತಾರೆ.

ದೇವರ ಎತ್ತುಗಳ ಗೂಡಿನ ಸನ್ನಿಧಿಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಜೃಂಭಣೆಯಿಂದ ಜಾತ್ರೆ ಆಚರಿಸುತ್ತಾರೆ. ಇತ್ತೀಚೆಗೆ ನಮ್ಮ ಮ್ಯಾಸ ಬೇಡರ ಸಂಪ್ರದಾಯ ನಶಿಸಿ ಹೋಗ್ತಿದೆ. ಅಂತದ್ರಲ್ಲಿ ನಮ್ಮ ಸಮುದಾಯದವರು ಕೆಲವು ಕಡೆ ಈ ರೀತಿಯ ಹಬ್ಬ ಆಚರಣೆಗಳನ್ನು ಮಾಡೋದ್ರಿಂದ ನಮ್ಮ ಮ್ಯಾಸ ನಾಯಕರ ಸಂಪ್ರದಾಯ ಉಳಿಯಲಿದೆ.

ವಿಶೇಷ ಪೂಜೆನಂತರ ದಾಸಯ್ಯರಿಂದ ಮಣೇವು ಕಾರ್ಯಕ್ರಮ ಜರುಗುತ್ತದೆ, ನಂತರ ಶೂನ್ಯದ ಮಾರಮ್ಮ ದೇವಿಯ ಮೂರ್ತಿಯನ್ನು ಸೂರ್ಯ ಉದಯಿಸುವ ಕಡೆ ಸಾಗಿಹಾಕಿದ ನಂತರ ಅನ್ನದಾಸೋಹ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

.

ಇತ್ತೀಚಿನ ಸುದ್ದಿ

ಜಾಹೀರಾತು