5:14 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಚಳ್ಳಕೆರೆ: ಅಕ್ರಮ ಮಣ್ಣು ಸಾಗಾಟ; ಗೋಪಾನಹಳ್ಳಿ ಹಳ್ಳಕ್ಕೆ ದಿಕ್ಕು ಬದಲಾಯಿಸುವ ಭೀತಿ 

13/02/2022, 09:43

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ಹಳ್ಳದ ತಟದಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಸಾಗಾಟದಿಂದ ಹಳ್ಳ ಹರಿಯುವ ದಿಕ್ಕು ಬದಲಾವಣೆಯಾಗುವ ಭೀತಿ ಎದುರಾಗಿದೆ.


ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಸಮೀಪದ ರಾಷ್ಟ್ರೀಹ ಹೆದ್ದಾರಿಗೆ ಹೊಂದಿಕೊಂಡ ಗರಣಿ(ಗೋಪನಹಳ್ಳಿ)  ಹಳ್ಳದಲ್ಲಿನ ದಡದ ಮಣ್ಣನ್ನು ಸಮೀಪದ ಜಮೀನಿಗೆ ಸಾಗಾಟ ಮಾಡಿದ್ದು ಮಳೆಗಾದಲ್ಲಿ ಹಳ್ಳದ ನೀರು ಪಕ್ಕದ ಜಮೀನುಗಳು ಜಲಾವೃತಗೊಳ್ಳುವ ಭೀತಿ ರೈತರಲ್ಲಿ ಆತಂಕ ಮಾಡಿದೆ.


ಹಳ್ಳದ ಎರಡು ಬದಿಯಲ್ಲಿ ಏರಿ ನಿರ್ಮಿಸಿದ್ದು ಎರಡು ಏರಿಯ ಮಣ್ಣು ಅಕ್ರಮವಾಗಿ ಪಕ್ಕದ ಜಮೀನಿಗೆ ಸಾಕಾಟ ಮಾಡಿದ್ದು ಹೆದ್ದಾರಿ ರಸ್ತೆಯ ಅಭಿವೃದ್ಧಿಗೂ ಸಹ ಹಳ್ಳದ ಏರಿಯ ದಡದ ಮಣ್ಣನ್ನು ಬಳಸಿಕೊಂಡು ಸುತ್ತಮುತ್ತಲಿನ ಫಲವತ್ತಾದ ಮಣ್ಣನ್ನು ಬಗೆದು ಟಿಪ್ಪರ್‍ಗಳ ಮೂಲಕ ಸಾಗಾಟ ಮಾಡಲಾಗಿದ್ದು ಹಳ್ಳದ ಚಿತ್ರಣವನ್ನೇ ಬದಲಾಯಿಸಿದ್ದಾರೆ.

by
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಹಳ್ಳದಲ್ಲಿ ಅಕ್ರಮವಾಗಿ ಹಗಲು ರಾತ್ರಿ ಜೆಸಿಬಿ ಹಾಗೂ ಬೃಹತ್ ಟಿಪ್ಪರ್ ವಾಹನಗಳ ಮೂಲಕ  ಮಣ್ಣು ತೆಗೆದಿರುವ ಸ್ಥಳಗಳಲ್ಲಿ ಹತ್ತಾರು ಅಡಿಗಳಷ್ಟು ಆಳದ ಗುಂಡಿಗಳು ಸೃಷ್ಟಿಯಾಗಿದ್ದು,  ನೈಸರ್ಗಿಕ ಸಂಪನ್ಮೂಲವನ್ನು ಕಾಪಾಡಲು ಸಂಬಂಧಿಸಿದ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶನ ಮಾಡಲಾಗಿದೆ ಎಂದು ಸಾರ್ವಜನಿಕ ಆರೋಪಿಸಿದ್ದಾರೆ.ಎಲ್ಲಿಂದ ಎಲ್ಲಿಗೆ ಹರಿತ್ತದೆ.


ಚಿತ್ರದುರ್ಗ ತಾಲ್ಲೂಕಿನ ಗೋನೂರು ಕೆರೆ ಕೋಡಿ ಬಿದ್ದು ದ್ಯಾಮವ್ವನಹಳ್ಳಿ ಕೆರೆಗೆ ಸೇರಿ ಕೋಡಿ ಬಿದ್ದ ನಂತರ ಬೊಮ್ಮೇನಹಳ್ಳಿ, ಹಂಪಯ್ಯನ ಮಾಳಿಗೆ ಗೊಲ್ಲರಹಟ್ಟಿ ಮೂಲಕ ದ್ಯಾಮವ್ವನಹಳ್ಳಿ ಕೆರೆ, ಕಲ್ಲಳ್ಳಿ, ಚಿಕ್ಕಮಧುರೆ ಕೆರೆಗಳು ತುಂಬಿ ಗಂಜಿಕುಂಟೆ, ಸಾಣೀಕೆರೆ, ಕೆರೆಗಳು ಕೋಡಿ ಬಿದ್ದ ನೀರು ಕಮ್ಮತ್ ಮರಿಕುಂಟೆ , ಗೋಪನಹಳ್ಳಿ ಮಾರ್ಗವಾಗಿ ಗರಣಿ ಸೇತುವೆ ಬಳಿಗೆ ದೊಡ್ಡೇರಿ ಕೆರೆ ಹಾಗೂ ರಾಣಿಕೆರೆಗೆ ಎರಡು ಕೆರೆಗಳಿಗೆ ನೀರು ಹರಿಯುವ ಬೃಹತ್ ಹಳ್ಳವಾಗಿದ್ದು ಹಳ್ಳದ ಎರಡು ದಡವನ್ನು ಅಕ್ರಮ ಮಣ್ಣು ದಂದೆಕೋರರಿಗೆ ಸಿಲುಕಿ ಹಳ್ಳ ನಲುಗಿ ಹೋಗಿದ್ದು ಮಳೆ ಬಂದಾಗ ಹಳ್ಳ ತುಂಬಿ ಹರಿದರೆ ಅಕ್ಕ ಪಕ್ಕದ ರೈತರ ಜಮೀನುಗಳು ನೀರಿನಲ್ಲಿ ಮುಳುಗಡೆಯಾಗುವ ಬೀತಿ ಎದುರಾಗಿದ್ದು  ಅಕ್ರಮ ಮಣ್ಣು ಸಾಗಾಟದ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆಯವರು ಕಂದಾಯ ಇಲಾಖೆ ಒಬ್ಬರ ಮೇಲೆ ಒಬ್ಬರು ಹೇಳುತ್ತಾರೆ  ಆದರೆ ಅಪ್ಪ ಅಮ್ಮನ ಜಗಳದ ನಡುವೆ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ ಅಧಿಕಾರಿಗಳ ನಿರ್ಲಕ್ಷೆ ಸಿಲುಕಿ ಹಳ್ಳದ ಏರಿಗಳು ಮಾಯವಾಗುತ್ತಿರುವುದು ಸತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು