9:46 AM Sunday7 - June 2026
ಬ್ರೇಕಿಂಗ್ ನ್ಯೂಸ್
Belagavi | ಅಥಣಿ: ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೃಹತ್‌ ಕಟ್ಟಡ; ತಪ್ಪಿದ ಭಾರೀ… ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಆನೆ ತುಳಿತಕ್ಕೆ ಪತ್ನಿ ಬಲಿ: ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯಗೆ ಸಿಎಂ ಡಿ… ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:… ಆರೋಗ್ಯ ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಹೊಸ ಮೈಲಿಗಲ್ಲು: ವೈದ್ಯರ ನೇರ ನೇಮಕಾತಿಗೆ… ಹೊಸ ರಾಜಕೀಯ ಹಾದಿಯತ್ತ ಅಣ್ಣಾಮಲೈ: ಕರ್ನಾಟಕದ ಸಿಂಗಂನಿಂದ ಹೊಸ ಪಕ್ಷ ಘೋಷಣೆ ತಿತಿಮತಿ | ಕಾಡಾನೆ ದಾಳಿ: ಕಾಫಿ ತೋಟ ವೀಕ್ಷಿಸಲು ಹೋಗಿದ್ದ ಐಜಿ ಪತ್ನಿ… ಚಿಕ್ಕಮಗಳೂರು: ಕರೆದ ಕೂಡಲೇ ಬರಲಿಲ್ಲವೆಂದು ಕೆಫೆ ಕಾರ್ಮಿಕನ ಮೇಲೆ ಹಲ್ಲೆ ಡಿಕೆಶಿ ಸಂಪುಟದ ಖಾತೆ ಹಂಚಿಕೆ: ಖಾದರ್ ಗೆ ಆರೋಗ್ಯ; ಉಳಿದಂತೆ ಯಾರು ಯಾರಿಗೆ…

ಇತ್ತೀಚಿನ ಸುದ್ದಿ

ಬೆಳ್ವೆ ಚರ್ಚ್ ಫಾದರ್ ವಿರುದ್ಧ ಅನುಯಾಯಿಗಳಿಂದ ಪ್ರತಿಭಟನೆ: ಕ್ರೈಸ್ತ ಧರ್ಮದಿಂದ ಮತಾಂತರ ಎಚ್ಚರಿಕೆ

25/10/2021, 08:34

ಕುಂದಾಪುರ(reporterkarnataka.com): ಬೆಳ್ವೆಯ ಚರ್ಚ್ ನ ಫಾದರ್ ವಿರುದ್ದ ಚರ್ಚ್ ಅನುಯಾಯಿಗಳು ಅಸಮಾಧಾನ ಹೊರ ಹಾಕಿ ಭಾನುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರುಣಾಕರ್ ಶೆಟ್ಟಿ, ಇದು ಕೇವಲ ಒಂದು ಧರ್ಮದ ವಿಚಾರವಲ್ಲ. ಸಾಮರಸ್ಯದಿಂದ ಇರುವ ಚರ್ಚಿನ ಅನುಯಾಯಿಗಳಿಗೆ ತೊಂದರೆ ಆದರೆ ಬೆಳ್ವೆ ಗ್ರಾಮದ ಪ್ರತಿಯೊಬ್ಬರು ಇವರ ಪರ ನಿಲ್ಲುತ್ತಾರೆ. ಇವರಿಗೆ ತೊಂದರೆ ನೀಡುತ್ತಿರುವ ಫಾದರ್ ಅಲೆಕ್ಸಾಂಡರ್ ಲೂವೀಸ್ ಈ ಹಿಂದೆ ತಲ್ಲೂರಿನಲ್ಲಿ ಗಲಾಟೆ ಮಾಡಿಕೊಂಡು ಬಂದು ಇಲ್ಲಿಗೆ ವರ್ಗಾವಣೆಗೊಂಡವರು. ಇಲ್ಲಿಯೂ ಅದೇ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ ಎಂದರು.

ಚರ್ಚ್ ನ ಅನುಯಾಯಿ ಪ್ರವೀಣಾ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ಇಲ್ಲಿ ಅಶಾಂತಿ ನೆಲೆಸಿದೆ. ಫಾದರ್ ಅಲೆಗ್ಸಾಂಡರ್ ಲೂವಿಸ್ ನಮಗೆ ಚರ್ಚ್ ನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡುತ್ತಿಲ್ಲ. ನಾವು ಕಟ್ಟಿದ ಚರ್ಚ್ ನ ಕಟ್ಟಡಕ್ಕೆ ಹಾನಿ ಮಾಡುತ್ತಿದ್ದಾರೆ. ಉಡುಪಿ ಧರ್ಮಾಧ್ಯಕ್ಷರಿಗೆ ಮನವಿ ಮಾಡಿದರೇ ನಮಗೆ ನ್ಯಾಯ ದೊರಕಿಸಿ ಕೊಡಲಿಲ್ಲ. ಒಂದು ವೇಳೆ ವಾರದೊಳಗೆ ಅಲೆಗ್ಸಾಂಡರ್ ಅನ್ನು ವರ್ಗಾವಣೆ ಮಾಡದೇ ಇದ್ದರೇ ನಾವು ಕ್ರಿಶ್ಚಿಯನ್ ಧರ್ಮವನ್ನು ಬಿಟ್ಟು ಹೋಗುತ್ತೇವೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು