3:27 AM Friday24 - April 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್…

ಇತ್ತೀಚಿನ ಸುದ್ದಿ

ಬಸವಣ್ಣ ತಪೋಭೂಮಿ ಕೂಡಲ ಸಂಗಮದಲ್ಲಿ 2023ರ ಶರಣು ಮೇಳ: ಪ್ರಚಾರಕ್ಕೆ ಮಾತೆ ಗಂಗಾದೇವಿ ಆಗಮನ

20/12/2022, 18:40

ರಾಹುಲ್ ಅಥಣಿ ಬೆಳಗಾವಿ

info.reporterkarnataka.com

ದಯವಿಲ್ಲದ ಧರ್ಮವಾವುದಯ್ಯಾ..?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ..!
ದಯವೇ ಧರ್ಮದ ಮೂಲವಯ್ಯಾ..!

ಜಾತಿ,ಮತ,ಪಂಥ ಭೇದವಿಲ್ಲದೆ ಸರ್ವ ಧರ್ಮ ಸಮಾನತೆ ಸಾರುವ ವಿಶ್ವಗುರು ಬಸವಣ್ಣನವರ ತಪೋಭೂಮಿ ಐಕ್ಯಕ್ಷೇತ್ರ ಕೂಡಲಸಂಗಮದಲ್ಲಿ ಲಿಂಗಾಯತ ಧರ್ಮಿಯರ ವಾರ್ಷಿಕ ಪವಿತ್ರ ಸಮಾವೇಶ ಶರಣುಮೇಳ 2023 ಜನವರಿ 12ರಿಂದ14ರ ವರೆಗೆ ಜರುಗಲಿದೆ.


ಈ ಕಾರ್ಯಕ್ರಮದ ಪ್ರಯುಕ್ತ ಶರಣು ಮೇಳ ಸಮಿತಿಯ ಕಾರ್ಯದ್ಯಕ್ಷಿ ಪರಮಪೂಜ್ಯ ಶ್ರೀಮನ್ನಿರಂಜನ್ ಮಹಾಜಗದ್ಗುರು ಡಾ. ಮಾತೇ ಗಂಗಾದೇವಿಯವರು, ಮಾತೆ ಬಸವರತ್ನ ಮಾತಾಜಿ (ಸುಕ್ಷೇತ್ರ ಕೂಡಲಸಂಗಮ ಶರಣುಮೇಳ ಸಮಿತಿ ತಂಡ) ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಧರ್ಮ ಪ್ರಚಾರ ಹಾಗೂ ಬಸವೇಶ್ವರ ವೃತ್ತದ ಬಳಿ ಷಠಸ್ಥಲ ಧ್ವಜಾರೋಹಣ ನೆರವೇರಿಸಿ ಜಾಹೀರಾತು ನೀಡಿ ಶರಣುಮೇಳಕ್ಕೆ ಆಹ್ವಾನ ನೀಡುತ್ತಿದ್ದಾರೆ.

ಪ್ರಚಾರದ ಅಂಗವಾಗಿ ಇಂದು ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಪ್ರಚಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ತಾಂವಶಿ ಗ್ರಾಮದ ತಾಯಂದಿರು ಶರಣು ಬಂದುಗಳು ಬರುವಂತೆ ಆಮಂತ್ರಣ ನೀಡಿದರು.
ಡಾ. ಮಾತೆ ಗಂಗಾದೇವಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಂವಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಶಿಕ್ಷಕರು ಊರಿನ ಶರಣು ಬಂದುಗಳು ತಾಯಂದಿರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು