10:11 PM Thursday23 - April 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ…

ಇತ್ತೀಚಿನ ಸುದ್ದಿ

ಬಂಜಾರ ಸಮಾಜದ ಸಂಸ್ಕೃತಿ, ಪರಂಪರೆ ಉಳಿಸಿ: ಜೈರಾಮ್ ಹರವತ್

19/08/2024, 22:28

ಶಿವು ರಾಠೋಡ ಯಾದಗಿರಿ

info.reporterkarnataka@gmail.com

ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಅರಿತು ಆತ್ಮಗೌರವವನ್ನು ಹೆಚ್ಚಿಸಿಕೊಂಡಾಗ ಮಾತ್ರ ಸ್ವಾಭಿಮಾನದ ಬದುಕು ಸಾಧ್ಯ ಎಂದು ಗೋರ್ ಸೇನಾ ಕುರೇಕನಾಳ ತಾಂಡಾ ಅಧ್ಯಕ್ಷರ ಜೈರಾಮ್ ಹರವತ್ . ಹೇಳಿದರು.


ಸದ್ಗುರು ಸೇವಾಲಾಲರ ಮಾಹರಾಜರು ಬಂಜಾರ ಸಾಂಸ್ಕೃತಿಕ ಜಾಗೃತಿ ಬಗ್ಗೆ ಮಾತನಾಡಿದರು.
ಬಂಜಾರ ಸಮಾಜದ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಹೊಂದಿದೆ. ಪ್ರತಿಯೊಬ್ಬ ಬಂಜಾರ ಗೋರ್ ಸೇನಾ ಗೋರ್ ಸಿಕವಾಡಿ ಸಂಘಟನೆಯಲ್ಲಿ ಬಂಜಾರ ಸಮಾಜದ ವಿದ್ಯಾವಂತ ಯುವಕರು ಈ ಸಂಘಟನೆಯ ಮೂಲಕ ನಮ್ಮ ಸಮಾಜದಲ್ಲಿ ನಡೆದುಬಂದ ಹಾದಿ, ಸಂಸ್ಕೃತಿ, ಪರಂಪರೆ ಅರಿವು ತಿಳಿಯುವಂತಾಗುತ್ತದೆ. ಹಾಗೆ ಗೋರ್ ಬಂಜಾರ ಸಮಾಜದ ಪ್ರತಿಯೊಬ್ಬರೂ ವಿದ್ಯಾವಂತರಾಗುವ ಮೂಲಕ ಸಮಾಜವನ್ನು ಉನ್ನತಿಗೆ ಕೊಂಡೊಯ್ಯಬೇಕು ಎಂದು ಅವರು ಹೇಳಿದರು.
ಶ್ರವಣ ಮಾಸದ 30 ದಿನ ಮನೆ ಮನೆಯಲ್ಲಿ ಸತಗರು ಸೇವಾಲಾಲ್ ಮಹಾರಾಜರ ಭೋಗ್ ಕಾರ್ಯಕ್ರಮ ನಡೆಯುತ್ತಿರುವುದರಿಂದ ಶ್ರವಣ ಮಾಸದ 17/08/2024ರಂದು ಶನಿವಾರದಂದು ಜೈರಾಮ್ ಹರವತ್ ಮನೆಯ ಆವರಣದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಬಂಜಾರ ಸಮಾಜದ ಅನೇಕ ಲೇಖಕರು, ಬರಹಗಾರರು, ಅಂಕಣಕಾರರು, ಸಾಹಿತಿಗಳಿದ್ದರೂ ಅವರುಗಳನ್ನು ಕಡೆಗಣಿಸಲಾಗುತ್ತಿದೆ. ಅವರಿಗೆ ಸಿಗಬೇಕಾದ ಯೋಗ್ಯ ಸ್ಥಾನಮಾನಗಳು, ಗೌರವ ಪ್ರತಿಷ್ಟೆಗಳು ಸಿಗುತ್ತಿಲ್ಲ. ಬಂಜಾರ ಸಮುದಾಯಕ್ಕೆ ಸೇರಿದ ಶಾಸಕರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅವರನ್ನು ನೇರವಾಗಿ ನೀವು ಸಮಾಜಕ್ಕೆ ಯಾವ ಕೊಡುಗೆ ನೀಡಿದ್ದೀರಿ ಎಂದು ಪ್ರಶ್ನಿಸುವಂತಾಗಿದೆ ಎಂದರು.
ಚಂದು ಹರಾವತ್ ಅವರು ಬಂಜಾರ ಸಂಸ್ಕೃತಿ ಕುರಿತು ಮಾತನಾಡಿದರು. ನಮ್ಮ ತಾಯಂದಿರು ಮೊದಲು ನಮ್ಮ ಸಮಾಜದ ಬಗ್ಗೆ ಅರಿತರೆ ಸಾಕು ಸಮಾಜ ಬೆಳೆಯಲ್ಲೂ ಅಸಾಧ್ಯವಾಗುತ್ತದೆ ಇದು ತಿಳ್ಳಿಸಿದರು .
ಇದೆ ಸಂದರ್ಭದಲ್ಲಿ ಹರಿಕೃಷ್ಣ ಮೂಡ್, ಜೈರಾಮ್ ಹರವತ್, ಕೃಷ್ಣ್ ಜಾಧವ, ವಿನೋದ ಪವಾರ್, ಸೋಮಲಪ್ಪ ಪವಾರ್, ಸೀತಾಬಾಯಿ, ಪವಾರ್, ಬಾಲಚಂದ್ರ ಮೋತಿಲಾಲ್ ನಾಯಕ್, ಗೋಪಾಲ ಹರಾವತ್, ಸಂತೋಷ ಪವಾರ್ , ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು