3:28 AM Friday24 - April 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್…

ಇತ್ತೀಚಿನ ಸುದ್ದಿ

ಅನಾಥ ಅಂಧ ಅಜ್ಜಿಗೆ ಆಶ್ರಯ: ಅನಾಥಾಶ್ರಮ ಸೇರಿಸಿದ ಕರವೇ ಫ್ರಾನ್ಸಿಸ್ ಡಿಸೋಜ

22/12/2022, 21:33

ಮಡಿಕೇರಿ(reporterkarnataka.com): ಕರ್ನಾಟಕ ರಕ್ಷಣಾ ವೇದಿಕೆಯ ಫ್ರಾನ್ಸಿಸ್ ಡಿಸೋಜ ಅವರು ಸೋಮವಾರಪೇಟೆಯ ಹಾನಗಲ್ ಗ್ರಾಮದಲ್ಲಿ ಇದ್ದ ಅಂಧ ಅನಾಥ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಫ್ರಾನ್ಸಿಸ್ ಡಿಸೋಜ ಅವರು ಮರ್ವಿನ್ ಡಿಸೋಜ ಹಾಗೂ ಮನೋಜ್ ಭಟ್ ಅವರಿಗೆ ನೆರವಿನಿಂದ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಿದ್ದಾರೆ. ಆಟೋ ರಾಜ ಸಂಸ್ಥೆಗೆ ಕರವೇ ಕಾರ್ಯಕರ್ತರು ಹೃದಯಪೂರ್ವಕ ಧನ್ಯವಾದಗಳು ಅರ್ಪಿಸಿದ್ದಾರೆ.

ಕರವೇ ಫ್ರಾನ್ಸಿಸ್ ಡಿಸೋಜ ರವರ ಮಾತು ನಾವು ದೇವರನ್ನು ಕಂಡಿಲ್ಲ. ಇಂಥ ಅನಾಥರ ಕೆಲಸ ಮಾಡಿ ನಾವು ದೇವರನ್ನು ಕಾಣುತ್ತಿದ್ದೇವೆ. ಹಾಗಾಗಿ ಇಂಥ ಕೆಲಸಗಳನ್ನು ನಾನು ಮುಂದೆಯೂ ಸಹ ಮಾಡುತ್ತಲೇ ಇರುತ್ತೇನೆ ಎಂದು ಫ್ರಾನ್ಸಿಸ್ ನುಡಿದರು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೇಲೂರು ಗ್ರಾಮ ಪಂಚಾಯಿತಿಗೆ ಸೇರಿದ ಹಾನಗಲ್ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಕಣ್ಣು ಕಾಣದ 75 ವರ್ಷದ ಕಣ್ಣು ಕಾಣದ ಅಜ್ಜಿ ತಿರುಗಾಡುತ್ತಿದ್ದರು. ಅವರು ಜನರು ಕೊಡುವ ಆಹಾರವನ್ನು ಊಟ ಮಾಡುತ್ತಾ ಚಳಿ ಗಾಳಿ ಮಳೆಯಲ್ಲಿ ಸುತ್ತಾಡಿಕೊಂಡು ಒಂದು ಹಾಳು ಬಿದ್ದಿರುವ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಇದನ್ನೆಲ್ಲ ಗಮನಿಸಿದ ಹಾನಗಲ್ ಗ್ರಾಮಸ್ಥರು ಮಾರ್ವಿನ್ ಡಿಸೋಜ ಅವರಿಗೆ ತಿಳಿಸಿದ್ದರು.


ಹಾಗಾಗಿ ಮಾರ್ವಿನ್ ಡಿಸೋಜರವರು ಕರವೇ ಕಾರ್ಯಕರ್ತರಿಗೆ ತಿಳಿಸಿದ ಮೇರೆಗೆ ಅಜ್ಜಿಯನ್ನು ಕರೆದುಕೊಂಡು ಬಂದು ಮಾರ್ವೀನ್ ಡಿಸೋಜರವರ ಮನೆಯಲ್ಲಿ ಸಂಪೂರ್ಣವಾಗಿ ಸ್ನಾನ ಮಾಡಿಸಿ ಸಂಪೂರ್ಣವಾಗಿ ಸ್ವಚ್ಛಪಡಿಸಿ ಕೈಯಲ್ಲಿದ್ದ ಉಗುರುಗಳನ್ನು ಮತ್ತು ಕಾಲಲ್ಲಿದ್ದ ಉಗುರುಗಳನ್ನು ತೆಗೆದು ಹಾಗೂ ಕೂದಲನ್ನು ಕಟ್ ಮಾಡಿ ಹೊಸ ಬಟ್ಟೆಗಳನ್ನು ತೊಡಸಿ ಈ ಅನಾಥ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಲು ಖುದ್ದಾಗಿ ಕಾರಿನಲ್ಲಿ ಹೋಗಿ ಸೇರಿಸಿ ಮಾನವೀಯತೆ ಮೆರೆದಿದ್ದೇವೆ. ಅಜ್ಜಿಯನ್ನು ಸಾಗಿಸಲು ಮರ್ವಿನ್ ಕಾರಿನ ವ್ಯವಸ್ಥೆ ಮಾಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು