1:42 AM Sunday22 - June 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರದಲ್ಲಿ ಕಮೀಶನ್ ದಂಧೆ 224 ಶಾಸಕರಿಗೂ ಗೊತ್ತಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಅಜಾಗರೂಕತೆಯಿಂದ ಚಾಲನೆ ಮಾಡಿದರೆ ಚಾಲಕರ ವಿರುದ್ಧ ಕಠಿಣ ಕ್ರಮ: ಸಾರಿಗೆ ಸಚಿವ ರಾಮಲಿಂಗಾ… Bagalkote | ಪಟ್ಟದಕಲ್ಲು ವಿಶ್ವ ಪರಂಪರೆ ತಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… Udupi | ನೈತಿಕ ಪಾಠ ಶಾಸಕ ಸುನಿಲ್ ಕುಮಾರ್ ಹೇಳಿ ಕೊಡಬೇಕಿಲ್ಲ: ಸಚಿವೆ… ಜಿಲ್ಲಾಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ಯೋಗ ಮಂದಿರ ಸ್ಥಾಪನೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ: ಕಂದಾಯ, ಆರೋಗ್ಯ ಹಾಗೂ ಎಂಜಿನಿಯರಿಂಗ್ ವಿಭಾಗಗಳ ತೀವ್ರ… Bangalore | ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ: ರಾಜ್ಯಾದ್ಯಂತ ಪರಿಸರ… Power Minister | ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ; ನೌಕರರ ಬೇಡಿಕೆಗಳಿಗೆ ಸ್ಪಂದನೆ:… ವಿದ್ಯುತ್ ಪ್ರಸರಣ ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆ ಕಾಯಂ: ಮುಖ್ಯಮಂತ್ರಿ… ಎಂಜಿಎನ್ ವಿವೈ ಕ್ರಿಯಾ ಯೋಜನೆ ಸಿದ್ಧಪಡಿಸದ ಅಧಿಕಾರಿಗಳ ವಿರುದ್ಧ ಕ್ರಮ: ನಗರಾಭಿವೃದ್ಧಿ ಸಚಿವ…

ಇತ್ತೀಚಿನ ಸುದ್ದಿ

ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ, ಬಯೋಮೆಟ್ರಿಕ್ ಅಳವಡಿಕೆಗೆ ಜಿಲ್ಲಾಧಿಕಾರಿಗೆ ಮನವಿ

13/07/2024, 16:52

*ಪೊಲೀಸ್ ಠಾಣೆಗಳಲ್ಲಿ ಅಕ್ರಮ ತಡೆಯಲು ಉಮೇಶ್ ಮುದ್ನಾಳ್ ಡಿಸಿಗೆ ದೂರು*

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ಯಾದಗಿರಿ ಗ್ರಾಮೀಣ ಹಾಗೂ ವಡಗೇರಾ ಪೊಲೀಸ್ ಠಾಣೆಯಲ್ಲಿ ಸಿಸಿ ಕ್ಯಾಮೆರಾ ಹಾಗೂ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮೀಣ ಹಾಗೂ ವಡಗೇರಾ ಪೊಲೀಸ್ ಠಾಣೆಯಲ್ಲಿ ಅಕ್ರಮ ಹೆಚ್ಚಾಗಿವೆ ಎಂಬ ಆರೋಪ ನಿತ್ಯ ಕೇಳಿ ಬರುತ್ತಿವೆ. ಈ ಎರಡು ಠಾಣೆಗೆ ದೂರು ಕೊಡಲು ಬರುವ ಗ್ರಾಮೀಣ ಮುಗ್ದ ಜನರಿಗೆ ಪೊಲೀಸರು ಶೋಷಣೆ ಮಾಡ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ದೂರು ನೀಡಲು ಹೋದ ಸಾರ್ವಜನಿಕರಿಗೆ ಮೊಬೈಲ್ ಒಳಗಡೆ ತರುವಂತಿಲ್ಲ ಎಂವ ಅಲಿಖಿತ ಹೇರುತ್ತಿದ್ದಾರೆ. ದೂರು ನೀಡಲು ಹೋದವರ ಬಳಿಯೇ ಹಣ ಪಡೆಯಿತ್ತಿದ್ದಾರೆ. ಆರೋಪಿಗಳೇ ಪೊಲೀಸರ ಪಾಲಿನ ಪಿರ್ಯಾಧಿದಾರರಾಗಿದ್ದಾರೆ. ಎರಡು ಠಾಣೆಯಲ್ಲಿ ರೌಡಿ ಶೀಟರ್ ಪರೆಡ್ ನಡೆಸಿಲ್ಲ. ಜೊತೆಗೆ ರೌಡಿಗಳ ನಾಮಫಲಕ, ಛಾಯಾಚಿತ್ರ ಫಲಕ ಅಳವಡಿಸಿಲ್ಲ. ಇಂತಹ ಸಮಾಜ ಘಾತುಕರಿಗೆ ಪೊಲೀಸರು ಠಾಣೆಗಳಲ್ಲಿ ರಾಜ ಮರ್ಯಾದೆ ಕೊಡುತ್ತಿದ್ದಾರೆ. ಹೀಗಾಗಿ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ ಠಾಣೆಗೆ ಬಂದು ಹೋಗುವವರ ಮೇಲೆ ಮೇಕಾಧಿಕಾರಿಗಳು ನಿಗಾ ಇಡುವಂತೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ವೀರಣ್ಣಗೌಡ್, ಶಾಂತಪ್ಪ ಗೌಡ, ತಿಪ್ಪಣ್ಣ ಕಮದಲ್, ಶರಣು ಅಂಗಡಿ, ಗೋವಿಂದ ಮರಾಠ, ಅಯ್ಯಣ್ಣ ನಟೇಕರ್, ಶೇಖಪ್ಪಮಡಿವಾಳ, ದುರ್ಗಪ್ಪ ತಾತ, ಮಲ್ಲಪ್ಪ ಮೂಸಿ, ನಿಂಗಪ್ಪ ಮೂಸಿ, ಅಯ್ಯಪ್ಪ ನತೀಕರ್, ಪರಶುರಾಮ್ ಛಲವಾದಿ, ಪ್ರಭು, ತಾರಾಸಿಂಗ ಯಲ್ಲಪ್ಪ, ರಾಜು, ಹಣಮಂತ, ಶಿವು, ಸಾಬಣ್ಣ ಮರೆಪ್ಪ, ವಿಶ್ವ ನಾಥ, ಮಹೇಂದ್ರ, ಮರಲಿಂಗ, ಸಿದ್ದುನಾನೇಕ ಸೇರಿದಂತೆ ಅನೇಕರು ಭಾಗವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು