7:47 PM Sunday29 - March 2026
ಬ್ರೇಕಿಂಗ್ ನ್ಯೂಸ್
ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌

ಇತ್ತೀಚಿನ ಸುದ್ದಿ

ಹಲವು ಜೀವ ಬಲಿಗೆ ಕಾರಣವಾದ ಕೊಟ್ಟಿಗೆಹಾರ ಬಳಿಯ ಅಪಘಾತ ವಲಯದ 2 ತಿರುವುಗಳನ್ನು ನೇರ ಮಾಡುವಂತೆ ಸಾರ್ವಜನಿಕರ ಆಗ್ರಹ

18/10/2023, 15:47

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟ್ ಗೆ ಹೋಗುವ ಅಜಾದ್ ನಗರದ ಕೊಗಳತೆಯ ಅಂತರದಲ್ಲಿ ಎರಡು ಅಪಘಾತ ಸಂಭವಿಸುವ ತಿರುವುಗಳಿದ್ದು ಅಲ್ಲಿ ಅನೇಕ ವಾಹನ ಅಪಘಾತಗಳು ನಡೆದಿದ್ದು ಹಲವರು ಗಾಯಗೊಂಡಿದ್ದಾರೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಚಾರ್ಮಾಡಿ ಘಾಟ್ ಭಾಗದಿಂದ ಕೊಟ್ಟಿಗೆಹಾರಕ್ಕೆ ಬರುವಾಗ ನೇರ ಇಳಿಜಾರು ರಸ್ತೆಯಿದ್ದು ಬರುವ ವಾಹನಗಳು ಹೋಟೆಲ್ ಬಳಿ ತಿರುವಿನಲ್ಲಿ ಮುಗ್ಗರಿಸಿ ಪಲ್ಟಿ ಹೊಡೆಯುತ್ತಿವೆ. ಇದರಿಂದ ಅನೇಕ ಪ್ರವಾಸಿಗರು ಅಪಘಾತಕ್ಕೀಡಾಗಿದ್ದಾರೆ. ಕೊಟ್ಟಿಗೆಹಾರದಿಂದ 50 ಮೀ ಅಂತರದ ಎರಡು ತಿರುವುಗಳು ಜನರ ಪಾಲಿನ ಮೃತ್ಯುಕೂಪಗಳಾಗಿವೆ. ಇತ್ತೀಚೆಗೆ ಗ್ಯಾಸ್ ಲಾರಿ ಹಾಗೂ ಎಳನೀರು ಲಾರಿ ಅಪಘಾತವಾಗಿತ್ತು. ಈ ಹಿಂದೆ ಹಲವು ದ್ವಿಚಕ್ರ ಸವಾರರು, ಹಲವು ಪ್ರವಾಸಿಗರು ಈ ನೇರ ರಸ್ತೆಯಲ್ಲಿ ವೇಗವಾಗಿ ಬಂದು ರಸ್ತೆಯ ಕೊನೆಯಲ್ಲಿ ಹಿಮ್ಮರಿ ತಿರುವು ತರಹ ತಿರುವು ಇರುವುದರಿಂದ ದರ್ಬಾರ್ ಹೋಟೆಲ್ ಬಳಿ ಹಾಗೂ ತರುವೆ ಗ್ರಾಮಕ್ಕೆ ತಿರುಗುವ ರಸ್ತೆ ಬಳಿ ತಿರುವುಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಿರುವುಗಳನ್ನು ನೇರ ಮಾಡಿ ಅಪಘಾತ ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ‘ಕೊಟ್ಟಿಗೆಹಾರದ ಬಳಿ ಎರಡು ಅಪಾಯದ ತಿರುವುಗಳಿದ್ದು ಅನೇಕ ಅಪಘಾತ ಸಂಭವಿಸಿವೆ. ಕೊಟ್ಟಿಗೆಹಾರ ತಲುಪುವ ಮುನ್ನವೇ ಜನರು ಪ್ರಾಣಾಪಾಯ ಸಂಭವಿಸುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಿರುವುಗಳ ಬಗ್ಗೆ ಸೂಕ್ತ ಗಮನ ಹರಿಸಬೇಕೆಂದು ಕೊಟ್ಟಿಗೆಹಾರ
ಸಮಾಜ ಸೇವಕ ಸಂಜಯ್ ಗೌಡ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು