4:32 AM Friday8 - May 2026
ಬ್ರೇಕಿಂಗ್ ನ್ಯೂಸ್
ಚಾಲಕನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು: ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿದ ಖಾಸಗಿ… ಮೂಡಿಗೆರೆ: ಬಾಳೂರು ಪೊಲೀಸರ 12 ತಾಸುಗಳ ಕಾರ್ಯಾಚರಣೆ ಬಳಿಕ ಪತ್ತೆಯಾದ ಒಂದೂವರೆ ವರ್ಷದ… Shivamogga | ತೀರ್ಥಹಳ್ಳಿ: ವಾಹನದಲ್ಲಿ ಅಕ್ರಮ ಗೋ ಸಾಗಾಟ; ಮೂವರು ವಶಕ್ಕೆ ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್ ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು

ಇತ್ತೀಚಿನ ಸುದ್ದಿ

ಬೆಂಗಳೂರು ಕಾಶಿ ಮಠ ಗಣೇಶೋತ್ಸವ: ವೈಭವದ ಶೋಭಾಯಾತ್ರೆ; ಮಂಗಳಮೂರ್ತಿಯ ವಿಸರ್ಜನೆ

04/09/2022, 22:13

ಬೆಂಗಳೂರು(reporterkarnataka.com): ನಗರದ ಮಲ್ಲೇಶ್ವರಂನಲ್ಲಿರುವ ಬೆಂಗಳೂರು ಶ್ರೀ ಕಾಶಿ ಮಠ ವ್ಯವಸ್ಥಾಪಕ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಗಣೇಶೋತ್ಸವದ ಶೋಭಾಯಾತ್ರೆ ಹಾಗೂ ಮಂಗಳಮೂರ್ತಿಯ ವಿಸರ್ಜನೆ ಭಾನುವಾರ ಮಠದ ಕಲ್ಯಾಣಿಯಲ್ಲಿ ಭಕ್ತಿ ಸಂಭ್ರಮದಿಂದ ನಡೆಯಿತು.

ಸಂಜೆ 5.30ಕ್ಕೆ ಗಣೇಶ ಮೂರ್ತಿಯ ವೈಭವದ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಮಠದ ಹೊರಗಡೆ ಸುಮಾರು 1.5 ಕಿಮೀ ನಷ್ಟು ಶೋಭಾಯಾತ್ರೆಯ ಮೆರವಣಿಗೆ ನಡೆಸಲಾಯಿತು. ನಂತರ ರಾತ್ರಿ ಸುಮಾರು 7.00ರ ವೇಳೆಗೆ ಮಂಗಳಮೂರ್ತಿಯ ವಿಸರ್ಜನೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ನೆರವೇರಿತು. ಪೀಠ ಪೂಜೆ ನೆರವೇರಿಸಲಾಯಿತು. ಪಾರ್ಥಸಾರಥಿ ದೇವರಿಗೆ ಮಹಾ ಮಂಗಳಾರತಿ ಬೆಳಗಲಾಯಿತು.

ಇದಕ್ಕೆ ಮುನ್ನ. ಬೆಳಗ್ಗೆ 8.30ಕ್ಕೆ ಸಿದ್ಧಿ ವಿನಾಯಕನಿಗೆ ಪ್ರಾತಃ ಪೂಜೆ ನೆರವೇರಿತು. 9.30ಕ್ಕೆ ಗಣಹೋಮ, ಸಹಸ್ರ ಮೋದಕ ಹವನ ನೆರವೇರಿತು. 10.30ಕ್ಕೆ ಕೃಷ್ಣಪ್ರಿಯ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಮೇಳೈಸಿತು. 12.30ಕ್ಕೆ ಪಾರ್ಥಸಾರಥಿ ದೇವರಿಗೆ ಮಧ್ಯಾಹ್ನದ ಪೂಜೆ, ಸಿದ್ಧಿ ವಿನಾಯಕ ದೇವರಿಗೆ ಮಧ್ಯಾಹ್ನದ ಪೂಜೆ, ಮಹಾಸಮರಾಧನೆ, ಮಧ್ಯಾಹ್ನ 2 ಗಂಟೆಗೆ ಸೇವಾ ಸಂಕಲ್ಪ ನಡೆಯಿತು. 3 ಗಂಟೆಗೆ ದೇವಕಿಕೃಷ್ಣ ಭಜನಾ ಮಂಡಳಿಯಿಂದ ಭಜನೆ, 4.30ಕ್ಕೆ ಸಿದ್ಧಿ ವಿನಾಯಕ ವಿಸರ್ಜನೆ ಮುನ್ನದ ರಾತ್ರಿ ಪೂಜೆ, 5.30ಕ್ಕೆ ಪಾರ್ಥ ಸಾರಥಿ ದೇವರ ವಿಸರ್ಜನೆ ಮುನ್ನದ ರಾತ್ರಿ ಪೂಜೆ ಹಾಗೂ ರಾತ್ರಿ 7.00ಕ್ಕೆ ಮಠದಲ್ಲಿ ವಿಸರ್ಜನೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು