ಇತ್ತೀಚಿನ ಸುದ್ದಿ
ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ: ಚಂಡಮಾರುತದ ಭೀತಿ; ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ
07/08/2022, 21:44
ಮಂಗಳೂರು/ಬೆಂಗಳೂರು(reporterkarnataka.com):
ಬಂಗಾಳಕೊಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಮೀನುಗಾರಿಕೆಗೆ ಕಡಲಿಗೆ ಇಳಿಯದಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಪುತ್ತೂರು,ಉಪ್ಪಿನಂಗಡಿ, ಕಡಬ ಸುಬ್ರಹ್ಮಣ್ಯ, ಸುಳ್ಳ,ಹರಿಹರ ಬೆಳ್ತಂಗಡಿ, ಧರ್ಮಸ್ಥಳ, ನಾರಾವಿ ಬಂಟ್ವಾಳ, ಸುರತ್ಕಲ್, ಮೂಡಬಿದಿರೆ ಪ್ರದೇಶದಲ್ಲಿ ಶನಿವಾರವು ಉತ್ತಮ ಮಳೆಯಾಗಿದೆ.
ಕರಾವಳಿಗೆ ಇಂದು” ರೆಡ್ ಅಲರ್ಟ್” ಘೋಷಣೆಯಾಗಿದ್ದು 8 ಮತ್ತು 9ರಂದು “ಆರೆಂಜ್ ಅಲರ್ಟ್” ಘೋಷಣೆಯಾಗಿದೆ.














