ಇತ್ತೀಚಿನ ಸುದ್ದಿ
ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ
25/08/2026, 10:01
ಮಂಗಳೂರು(reporterkarnataka.com):ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಸರ್ಪ ದೋಷ ನಿವಾರಣೆಗೆ ಹಾಗೂ ನಾಗಾರಾಧನೆಗೆ ವಿಶ್ವವಿಖ್ಯಾತವಾದ ಅತ್ಯಂತ ಪವಿತ್ರ ಪುಣ್ಯಕ್ಷೇತ್ರವಾಗಿದೆ. ಈ ಶ್ರೀಕ್ಷೇತ್ರಕ್ಕೆ ಅಪಾರ ಭಕ್ತರು ಭೇಟಿ ನೀಡಿ ಹರಕೆ ತೀರಿಸ್ತಾರೆ. ಇದೀಗ ದೇಗುಲದ ಆಡಳಿತ ಮಂಡಳಿಯವರು ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಈ 4 ದಿನ ಸರ್ಪ ಸಂಸ್ಕಾರ ಸೇವೆ ಇರೋದಿಲ್ಲ ಎಂದು ತಿಳಿಸಿದೆ.
*ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರ ಗಮನಕ್ಕೆ*
ಪ್ರಸಿದ್ದ ನಾಗಾರಾಧನೆಯ ತಾಣ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹಲವು ಭಾಗಗಳಿಂದ ಭಕ್ತರು ಆಗಮಿಸ್ತಾರೆ. ಸರ್ಪಸಂಸ್ಕಾರ ಸೇವೆಗೆಂದು ಆಗಮಿಸುವ ಜನರಿಗೆ ದೇವಸ್ಥಾನದ ಆಡಳಿತ ಮಂಡಳಿ ಮಹತ್ವದ ಅಪ್ಡೇಟ್ ನೀಡಿದೆ. ಸೆಪ್ಟೆಂಬರ್ ತಿಂಗಳ ಈ 4 ದಿನಗಳಲ್ಲಿ ಶ್ರೀಕ್ಷೇತ್ರದಲ್ಲಿ ಸರ್ಪಸಂಸ್ಕಾರ ಸೇವೆ ಇರುವುದಿಲ್ಲ. ಯಾವ ದಿನಗಳು? ಕಾರಣ ಏನು ಅಂತ ತಿಳಿದುಕೊಳ್ಳಿ.
*ಸರ್ಪಸಂಸ್ಕಾರ ಸೇವೆ ಇರುವುದಿಲ್ಲ*
ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ, ದಶಮಿ, ಏಕಾದಶಿ ಪ್ರಯುಕ್ತ ಸೆಪ್ಟೆಂಬರ್ 3, 4, 6, 7 ರಂದು ಸರ್ಪಸಂಸ್ಕಾರ ಸೇವೆ ಇರುವುದಿಲ್ಲ. ಸೆಪ್ಟೆಂಬರ್ 4 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಹಾಗೂ ಸೆ.7 ರಂದು ಏಕಾದಶಿ ದಿನದಂದು ಆಶ್ಲೇಷ ಬಲಿ, ನಾಗ ಪ್ರತಿಷ್ಠೆ, ಮಹಾಭಿಷೇಕಗಳು ಸಹ ನೆರವೇರುವುದಿಲ್ಲ.












