ಇತ್ತೀಚಿನ ಸುದ್ದಿ
ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ ವಶ
01/05/2026, 17:50
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರೈತರು ಯೂರಿಯಾ ಗೊಬ್ಬರ ಸಿಗದೆ ಪರದಾಡುತ್ತಿದ್ದು,
ಮಧ್ಯವರ್ತಿಗಳು ಕೋಳಿ ಫಾರಂನಲ್ಲಿ ನೂರಾರು ಮೂಟೆ ಸ್ಟಾಕ್ ಇಟ್ಟಿದ್ದಾರೆ. ಈ ನಡುವೆ ಕೃಷಿ ಬಳಕೆಯ ರಸಗೊಬ್ಬರವನ್ನ ಅಕ್ರಮವಾಗಿ ಸ್ಟಾಕ್ ಮಾಡಿದವರಿಗೆ ಶಾಕ್ ನೀಡಲಾಗಿದೆ.
ಚಿಕ್ಕಮಗಳೂರಿನಲ್ಲಿ ಅಕ್ರಮ ಯೂರಿಯಾ ಗೊಬ್ಬರ ದಾಸ್ತಾನು ಪತ್ತೆಯಾಗಿದೆ.
ತಾಲೂಕಿನ ಕೆಸವಿನಮನೆ ಗ್ರಾಮದಲ್ಲಿ ಕೋಳಿ ಫಾರ್ಮ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಳಿ ಫಾರಂ ಮಾಲೀಕ ರಾಜೇಶ್ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಕೃಷಿ ಇಲಾಖೆ ಅಧಿಕಾರಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಕೈಗಾರಿಕಾ ಉದ್ದೇಶಕ್ಕೆ ಯೂರಿಯಾ ರೀಪ್ಯಾಕಿಂಗ್ ಆರೋಪ ಕೇಳಿ ಬರುತ್ತಿದೆ.
181 ಚೀಲ ಯೂರಿಯಾ,218 ರೀಪ್ಯಾಕ್ ಮಾಡಿದ ಯೂರಿಯಾ ಚೀಲಗಳು ವಶಪಡಿಸಿಕೊಳ್ಳಲಾಗಿದೆ.
ಒಟ್ಟು 399 ಯೂರಿಯಾ ಚೀಲಗಳನ್ನ ಕೃಷಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ.ಬಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












