10:05 AM Saturday19 - September 2026
ಬ್ರೇಕಿಂಗ್ ನ್ಯೂಸ್
ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:…

ಇತ್ತೀಚಿನ ಸುದ್ದಿ

ಮೇ 15ರಂದು ರಾಜ್ಯಾದ್ಯಂತ ಕನ್ನಡ ಚಲನಚಿತ್ರ “ಶಿಖಂಡಿ” ಬಿಡುಗಡೆ

29/04/2026, 18:17

ಗಣೇಶ್ ಇನಾಂದಾರ್ ಬಳ್ಳಾರಿ

info.reporterkaerk@gmail
com

ಕನ್ನಡ ಚಲನಚಿತ್ರ ಶಿಖಂಡಿ ಮೇ 15ರಂದು ರಾಜ್ಯಾದ್ಯಂತ ನೂರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕರಾದ ಪೊಲಾ ಪ್ರವೀಣ್ ತಿಳಿಸಿದರು.
ಬುಧವಾರ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಈ ಚಿತ್ರದಲ್ಲಿ ಕಥಾವಸ್ತುವಿನ ಉತ್ತಮ ಸಂದೇಶವಿದೆ,ಒಳ್ಳೆಯ ಹಾಡುಗಳು ಎಲ್ಲರೂ ನೋಡಿ ಆನಂದಿಸಿ ತಾಯಿ ಪ್ರೀತಿಸುವ ವಸ್ತು, ಹಾಡು ಪ್ರೇಕ್ಷಕರ ಮನ ಕರಗಸುವಂತೆ ಮೂಡಿದೆ ಸದ್ಯದಲ್ಲಿ ಟ್ರೇಲರ್
ಬಿಡುಗಡೆ ಮಾಡಲಿದೆ ಎಂದು ತಿಳಿದರು.
ಇಂದಿನ ಸಮಾಜದಲ್ಲಿ ಮಂಗಳಮುಖಿಯರ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಅಳಿಸು ಹಾಕುವ ಹಾಗೂ ಸಮಾಜದ ಆಚರಣೆಗೆ ದೈವತ್ವದ ಕಲ್ಪನೆಯ ತುಂಬುವ ಪ್ರಯತ್ನ ಈ ಚಿತ್ರದಲ್ಲಿ ಪ್ರಯತ್ನಮಾಡಲಾಗಿದೆ ಎಂದು ವಿವರಿಸಿದರು. ಚಿತ್ರ ಲಾಭಗಳಿಸಿದರೆ ಮಂಗಳಮುಖಿ ಸಮಾಜದ ಜನರಿಗೆ ಹೊಲಿಗೆ ಯಂತ್ರ ಕೊಡಿಸಿ ಅವರು ಭಿಕ್ಷಾಟನೆಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಗುರುಮೂರ್ತಿ ಮಾತನಾಡಿ,ಮಹಾಭಾರತದ ಶಿಖಂಡಿ ಪಾತ್ರವನ್ನು ಚಿತ್ರದ ಮೂಲ ವಸ್ತುವಾಗಿಟ್ಟುಕೊಂಡು ರಚಿಸಿದೆ.
ಮೊದಲಿಗೆ ರಾಜ್ಯದ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದೆ, ನಂತರ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲಿ ಬಳ್ಳಾರಿಯ 22 ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ.
ಬಳ್ಳಾರಿ, ಮೈಸೂರು, ಬಿಡದಿ,ಮಾಗಡಿ,ಬೆಂಗಳೂರು, ಮೊದಲಾದ ಕಡೆ ಚಿತ್ರೀ ಕರಿಸಲಾಗಿದೆ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ ಚಿತದ್ರ ಒಟ್ಟು ಸಮಯವು 2.20 ಗಂಟೆಗಳ ಕಾಲ ವಾಗಿರುತ್ತದೆ ಚಿತ್ರದ ಹಾಡುಗಳನ್ನು ಚಿನ್ನಸ್ವಾಮಿ ಹಾಡು ಬರೆದಿದ್ದಾರೆ ಎಂದು ವಿವರಿಸಿದರು.
ಚಿತ್ರದ ನಾಯಕಿ ಖ್ಯಾತಿ ಹಾಗೂ ನಾಯಕ ನಟ ಯುವರಾಜ್ ಗೌಡ ಮಾತನಾಡಿದರು, ನಿಖಿಲ್ ಮಾಳೇಕರ್,ಸ್ವಾಮಿ,ಚಾಂದಿನಿ,ಆನಂದ್ ಹೂಗಾರ್,ಸಹ ನಿರ್ದೇಶಕ ಉಮೇಶ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು