ಇತ್ತೀಚಿನ ಸುದ್ದಿ
ಚಿಕ್ಕಮಗಳೂರು | ಅಪ್ರಾಪ್ತ ಪುತ್ರನ ಎದುರೇ ಅಪ್ಪ- ಅಮ್ಮನ ಭೀಕರ ಹತ್ಯೆಗೈದ ಆರೋಪಿಗೆ ಗಲ್ಲು
13/03/2026, 16:05
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnata@gmail.com
8 ವರ್ಷದ ಮಗನ ಎದುರೇ ಮಲಗಿದ್ದ ದಂಪತಿಯ ಅಮಾನುಷವಾಗಿ ಕಡಿದು ಕೊಲೆ ಮಾಡಿದ ಆರೋಪಿಗೆ
ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದೆ.
ಎನ್.ಆರ್.ಪುರದ ಕುಸುಬೂರಿನಲ್ಲಿ 2019ರಲ್ಲಿ ಈ ಭೀಕರ ಕೊಲೆ ನಡೆದಿತ್ತು.
8 ವರ್ಷದ ಮಗನ ಎದುರೇ ಆತನ ಅಪ್ಪ-ಅಮ್ಮನನ್ನು ಗೋವಿಂದಪ್ಪ ಎಂಬಾತ ಭೀಕರವಾಗಿ ಕಡಿದು ಕೊಲೆ ಮಾಡಿದ್ದ. ಕೊಲೆ ಬಳಿಕ ಮಚ್ಚನ್ನ ತೆಂಗಿನಮರದ ಸುಳಿಯಲ್ಲಿ ಆರೋಪಿ ಬಚ್ಚಿಟ್ಟಿದ್ದ. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು.
ಆರೋಪಿ ಗೋವಿಂದಪ್ಪನಿಗೆ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆಯ ತೀರ್ಪು ನೀಡಿತ್ತು. ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಗಲ್ಲು ಶಿಕ್ಷೆ, 20 ಸಾವಿರ ದಂಡ ವಿಧಿಸಲಾಗಿದೆ. ಮನೆಗೆ ನುಗ್ಗಿದ ಪ್ರಕರಣಕ್ಕೆ ಸಂಬಂಧ ಐಪಿಸಿ 448 ಅಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ತೀರ್ಪು ನೀಡಿದ್ದಾರೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ವಿರುದ್ಧ ಸರ್ಕಾರಿ ಅಭಿಯೋಜಕಿ ಪಿ.ವೀಣಾ ವಾದ ಮಂಡನೆ ಮಾಡಿದ್ದರು.













