8:05 PM Thursday18 - June 2026
ಬ್ರೇಕಿಂಗ್ ನ್ಯೂಸ್
ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು

ಇತ್ತೀಚಿನ ಸುದ್ದಿ

30 ವರ್ಷಗಳ ಹಿಂದಿನ ಸಹಪಾಠಿಗೆ ಬಣಕಲ್ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳಿಂದ ಆರ್ಥಿಕ ನೆರವು: ವಾಟ್ಸಾಪ್ ಗ್ರೂಪ್ ರಚಿಸಿ ಕಾರ್ಯಪ್ರವೃತ್ತಿ

24/02/2024, 10:45

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬಣಕಲ್ ಪ್ರೌಢಶಾಲೆಯ 1989-90 ಬ್ಯಾಚಿನ ವಿದ್ಯಾರ್ಥಿಗಳು ಸೊಂಟದ ಬಲ ಕಳೆದುಕೊಂಡು ಮೂಲೆಗುಂಪಾಗಿರುವ ಸಹಪಾಠಿ ಅಚ್ಯುತ ಪೂಜಾರಿ ಅವರಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ವಿದ್ಯಾರ್ಥಿ ಸೈಯದ್ ನವೀದ್ ಮಾತನಾಡಿ’ ಬಣಕಲ್ ಪ್ರೌಡ ಶಾಲೆಯ ಹಳೇ ವಿದ್ಯಾರ್ಥಿಗಳಾದ ನಾವು ನಮ್ಮ ಸ್ನೇಹಿತ ಸ್ಟ್ಯಾನಿ ಲೋಬೊ ಮುಖಾಂತರ ಮೂವತ್ತಮೂರು ವರ್ಷದ ನಂತರ ವಾಟ್ಸಾಪ್ ಗ್ರೂಪ್ ರಚಿಸಿ ಸ್ನೇಹಿತರ ಯೋಗಕ್ಷೇಮ ವಿಚಾರಿಸುತ್ತಿದ್ದೇವು. ಡಿಸೆಂಬರ್ ತಿಂಗಳಿನಲ್ಲಿ ಈ ಗ್ರೂಪ್ ರಚಿಸಿ ಕಷ್ಟದಲ್ಲಿರುವ ನಮ್ಮ ಸಹಪಾಠಿಗಳಿಗೆ ನೆರವಾಗುವ ಉದ್ದೇಶದಿಂದ ಈ ಗ್ರೂಪ್ ರಚಿಸಲಾಯಿತು’ಎಂದರು. ಸಹಪಾಠಿ ವಸಂತ್ ಎಸ್. ಪೂಜಾರಿ ಮಾತನಾಡಿ’ ನಮ್ಮ ಸಹಪಾಠಿ ಅಚ್ಯುತ ಪೂಜಾರಿ 28 ವರ್ಷದಿಂದ ಸೊಂಟದ ಬಲ ಕಳೆದು ಕೊಂಡು ದುಡಿಯಲಾಗದೇ ಮನೆಯ ಹಾಸಿಗೆ ಹಿಡಿದಿದ್ದರು. ಅವರ ಅಣ್ಣ ಅತ್ತಿಗೆ ಮಗನಂತೆ ಅವರ ಸೇವೆ ಮಾಡುತ್ತಿದ್ದಾರೆ ಎಂದು ವಿಷಯ ಕೇಳಿ ನಮಗೆ ಸಂತೋಷವಾಯಿತು. ಆದರೂ ಸ್ನೇಹಿತರ ಸಹಕಾರದಿಂದ ನಮ್ಮ ತಂಡದಿಂದ 1ಲಕ್ಷ 20 ಸಾವಿರ ಹಣವನ್ನು ಅಚ್ಯುತ ಪೂಜಾರಿ ಅವರಿಗೆ ಚೆಕ್ ಮೂಲಕ ನಾವು ವಿತರಿಸಿದೆವು. ಅಚ್ಯುತ ನಮ್ಮೆಲ್ಲರ ಸಹಪಾಠಿಗಳ ಗುರುತು ಹಚ್ಚಿ ಆನಂದ ಬಾಷ್ಪ ಸುರಿಸಿದರು. ಅವರ ಅಣ್ಣ ಅತ್ತಿಗೆಯವರ ಕಣ್ಣುಗಳು ಕೂಡ ತೇವವಾದವು. ಇದರಿಂದ ಬೇರೆ ವಿದ್ಯಾರ್ಥಿಗಳು ಕೂಡ ಶಾಲೆ ಸ್ನೇಹಿತರನ್ನು ಮರೆಯದೇ ಇತರರಿಗೂ ಇಂತಹ ಕಾರ್ಯಗಳು ಮಾದರಿಯಾಗಬೇಕು ಎಂಬುದು ನಮ್ಮ ತಂಡದ ಮೂಲ ಉದ್ದೇಶವಾಗಿದೆ’ಎಂದರು.ಈ ಸಂದರ್ಭದಲ್ಲಿ ಸ್ನೇಹಿತ ಸಹಪಾಠಿಗಳಾದ ಸ್ಟ್ಯಾನಿ ಲೋಬೊ,ಅಬ್ದುಲ್ ಸಲಾಂ, ಬಿ.ಜಿ.ಪ್ರಕಾಶ್, ವಿನಯ ಪ್ರಭು, ಮುನೀರ್,ಅನಿಲ್ ಮೊಂತೆರೊ, ನಾರಾಯಣ್,ಸುಕೇಶ್,ಬಿ.ಎಸ್.ಕಲ್ಲೇಶ್, ಎಸ್.ಎನ್.ರವಿ, ಸುವರ್ಣಲತ,ಕೆ.ಎಲ್.ರಘು, ರಿಯಾಜುದ್ದೀನ್,ಶಾರದಾ,ಟಿ.ಎಸ್.ಗಣೇಶ್,ಟಿ.ಎಸ್. ಪ್ರಸನ್ನ,ಗಣೇಶ್ ಸಬ್ಬೇನಹಳ್ಳಿ,ಹರೀಶ್ ಸುಭಾಷನಗರ, ಬಿ.ಸಿ.ಉಮೇಶ್,ಎಂ.ಎಸ್.ಪ್ರವೀಣ್, ಆಲ್ವಿನ್ ತೋಮಸ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು