3:04 AM Wednesday17 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಎಣ್ಣೆ ಕುಡಿದು ಟೈಟಾಗಿ ಎಟಿಎಂ ನಲ್ಲಿ ಕಾರ್ಡ್ ಬಿಟ್ಟು ಹೋಗುವ ಕುಡುಕರು: ಒಂದೇ ದಿನ 14 ಕಾರ್ಡ್ ಪತ್ತೆ!!

27/01/2024, 11:18

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮದ್ಯದ ಮತ್ತಲ್ಲಿ ಎಟಿಎಂ ನಲ್ಲಿ ಹಣ ತೆಗೆಯೋ ಜನರು ಕುಡಿಯೋ ಆತುರದಲ್ಲಿ ಎಟಿಎಂ ನಲ್ಲಿ ಕಾರ್ಡ್ ಬಿಟ್ಟು ಹೋಗುವ ಖಯಾಲಿ ಶುರು ಮಾಡಿಕೊಂಡಿದ್ದಾರೆ. ಕೈಗೆ ಹಣ ಬಂದ ತಕ್ಷಣ ಎಣ್ಣೆ ಕುಡಿಯೋ ಆತುರದಲ್ಲಿ ಎಟಿಎಂ ಮೆಷಿನ್ ನಲ್ಲೇ ಕಾರ್ಡ್ ಬಿಟ್ಟು ಹೋಗುತ್ತಿದ್ದಾರೆ‌. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಕೇಂದ್ರದಲ್ಲಿ ನಿನ್ನೆ ಒಂದೇ ದಿನ ಸುಮಾರು 14 ಕಾರ್ಡ್ ಬಿಟ್ಟು ಹೋಗಿದ್ದಾರೆ. ಅದರಲ್ಲಿ ಸಂಜೆ ವೇಳೆಯೇ ಹೆಚ್ಚು. ಬಣಕಲ್ ಗ್ರಾಮದ ಕರ್ನಾಟಕ ಬ್ಯಾಂಕ್ ಎಟಿಎಂ ಮುಂಭಾಗವೇ ಬಾರ್ ಅಂಡ್ ರೆಸ್ಟೋರೆಂಟ್ ಇದೆ. ಬಾರ್ ಗೆ ಬರುವ ಮದ್ಯಪ್ರಿಯರು ಕುಡಿದು ಟೈಟಾದ ಬಳಿಕ ಮತ್ತಷ್ಟು ಎಣ್ಣೆ ಬೇಕು ಅಂತ ಎಟಿಎಂ ಹೋಗಿ ಹಣ ತೆಗೆದುಕೊಂಡು ಕಾರ್ಡ್ ಅಲ್ಲೇ ಬಿಟ್ಟು ಮತ್ತೆ ಬಾರ್ ನತ್ತ ಮುಖ ಮಾಡುತ್ತಿದ್ದಾರೆ. ಎಟಿಎಂ ಗೆ ಹೋಗುವ ಇತರೇ ಜನ ಎಟಿಎಂ ತೆಗೆದು ಅಲ್ಲೇ ಇಟ್ಟು ಅವರು ಹಣ ತೆಗೆದುಕೊಂಡು ಹೋಗುತ್ತಿದ್ದಾರೆ. ಹೀಗೆ ಎಟಿಎಂ ಕೇಂದ್ರದ ರ್ಯಾಲ್ ಮೇಲೆ ಜೋಡಿಸಿದ ಎಟಿಎಂಗಳ ಸಂಖ್ಯೆ 10ಕ್ಕೂ ಹೆಚ್ಚು. ಸ್ಥಳಿಯರು ಬ್ಯಾಂಕಿಗೆ ಹೋದಾಗ ಎಲ್ಲವನ್ನೂ ಕೈನಲ್ಲಿ ಹಿಡಿದು ಫೋಟೋ ತೆಗೆಸಿಕೊಂಡು ಮದ್ಯಪ್ರಿಯರ ಎಣ್ಣೆ ಪ್ರೀತಿಯನ್ನ ವ್ಯಂಗ್ಯವಾಡಿದ್ದಾರೆ. ಹೀಗೆ ಬಿಟ್ಟು ಹೋಗುವವರು ಮರು ದಿನ ಬಂದು ಎಟಿಎಂ ನಲ್ಲಿ ಕಾರ್ಡ್ ಹುಡುಕಾಡಿದ ಪ್ರಸಂಗವೂ ನಡೆದಿದೆ. ಸಿಕ್ಕರೆ ಓಕೆ. ಸಿಗದಿದ್ದರೆ ಮತ್ತೆ ಬ್ಯಾಂಕಿಗೆ ಹೋಗಿ ಎಟಿಎಂ ಲಾಕ್ ಮಾಡಿಸಿ ಬೇರೆ ಎಟಿಎಂ ಬರೋವರೆಗೂ ಕಾಯುತ್ತಾರೆ. ಈ ರೀತಿಯ ಸನ್ನಿವೇಶಗಳು ನಡೆದಿವೆ. ಆದರೆ, ಹೊತ್ತಲ್ಲದ ಹೊತ್ತಲ್ಲಿ ಎಮರ್ಜೆನ್ಸ್ ಹಣ ಬೇಕಾದಾಗ ಖಾತೆಯಲ್ಲಿ ಹಣ ಇದ್ದರೂ ತೆಗೆಲು ಆಗದೆ ಪರದಾಡಿದವರು ಇದ್ದಾರೆ. ಇವತ್ತು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಎಣ್ಣೆ ಕುಡಿಯೋ ಆಸೆಗೆ ಕಾರ್ಡ್ ಬಿಟ್ಟು ಹೋಗೋರ ಕಾರ್ಡ್ ಗಳನ್ನ ಬೇರೆಯವರು ತೆಗೆದುಕೊಂಡು ಖಾತೆಯಲ್ಲಿರುವ ಹಣವನ್ನ ತೆಗೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತೆ. ಹಾಗಾಗಿ, ಮದ್ಯ ಪ್ರಿಯರು ಮದ್ಯ ಕುಡಿಯಲಿ. ಆದರೆ, ತಮ್ಮ ವಸ್ತುಗಳ ಬಗ್ಗೆ ಎಚ್ಚರವಿರಲಿ ಎಂದು ಸ್ಥಳೀಯರು ಕೂಡ ಎಚ್ಚರಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು