11:58 AM Sunday19 - April 2026
ಬ್ರೇಕಿಂಗ್ ನ್ಯೂಸ್
ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಸನದಲ್ಲಿ ಮೂರು ದಿನಗಳ ಆಪರೇಷನ್‌ ಯಶಸ್ವಿ: ನರಹಂತಕ ಕಾಡಾನೆ ಸೆರೆ ಬಳ್ಳಾರಿ | ಪ್ಯಾರಚೂಟ್ ತರಬೇತಿ ವೇಳೆ ತಾಂತ್ರಿಕ ದೋಷ: 50 ಅಡಿ ಎತ್ತರದಿಂದ… ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ: ಪ್ರಕರಣ ದಾಖಲು Udupi | ಕಾಪು ಬಳಿ ಭೀಕರ ಲಾರಿ-ಕಾರು ಅಪಘಾತ: ಓರ್ವ ಸಾವು; ಇಬ್ಬರು… ಮಂತ್ರಾಲಯದ ಬಳಿ ಭೀಕರ ಅಪಘಾತ: 8 ಮಂದಿ ಸಾವು, ತರೀಕೆರೆ ತಾಲೂಕಿನ ಇಬ್ಬರು… ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ, ಸಂಪುಟ ಪುನರ್ ರಚನೆ ಆಗಲಿ: ಆರೋಗ್ಯ… ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ 17 ಮಂದಿಗೆ ಜೀವಾವಧಿ… ಪುತ್ರನ ಮೇಲಿನ ಹಲ್ಲೆ ಕೇಸ್ ಕೈಬಿಡಿ: ಅನಂತ ಕುಮಾರ್ ಹೆಗಡೆ ಮನವಿಗೆ ಸ್ಪಂದಿಸಿದ…

ಇತ್ತೀಚಿನ ಸುದ್ದಿ

ತುಳುವಿಗಾಗಿ ಮತ್ತೊಮ್ಮೆ ಕೈ ಎತ್ತುವ ಸರದಿ: ಸೆ. 5ರಂದು ‘ಟ್ವೀಟ್ ತುಳುನಾಡು’; ಕವಿ ಮಂದಾರ ಕೇಶವ ಭಟ್ ಮತ್ತೆ ನೆನಪಿಗೆ

04/09/2021, 19:18

ಮಂಗಳೂರು(reporterkarnataka.com): 

ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಕುರಿತು ತುಳುವರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಾ ಹೋರಾಟ ಮಾಡಿಕೊಂಡು ಬಂದರೂ ಇನ್ನೂ ಅದು ಕಾರ್ಯಗತಗೊಂಡಿಲ್ಲ. ಹಲವು ಸರಕಾರಗಳು ಬದಲಾದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮನೋಭಾವ ಬದಲಾಗಿಲ್ಲ. ಈ ನಿಟ್ಟಿನಲ್ಲಿ ನಮ್ಮನ್ನಾಳುವವರನ್ನು ಬಡಿದೆಬ್ಬಿಸಲು ಮತ್ತೆ ತುಳುವಿಗಾಗಿ ಟ್ವೀಟ್ ಅಭಿಯಾನ ನಡೆಯಲಿದೆ. ಸೆಪ್ಟೆಂಬರ್ 5 ರಂದು ಟ್ವೀಟ್ ಅಭಿಯಾನ ಸಾಕಾರಗೊಳ್ಳಲಿದೆ.

ತುಳುವರ ಸ್ವಾಭಿಮಾನದ ದೃಷ್ಟಿಯಿಂದ ಸೆ.5ರಂದು 

ನಡೆಯುವ#TuluOfficialinKA_KL ಟ್ವೀಟ್ ಅಭಿಯಾನವು ಬಹಳಷ್ಟು ಮಹತ್ವ ಪಡೆದಿದೆ. ಈ ಹಿಂದೆ ಜೂನ್ 14ರಂದು ನಡೆದ

ಟ್ವೀಟ್ ಅಭಿಯಾನದಲ್ಲಿ 4 ಲಕ್ಷ ಮಂದಿ ಪಾಲ್ಗೊಂಡು ರಾಷ್ಟ ಮಟ್ಟದಲ್ಲಿ ಹೊಸ ದಾಖಲೆಯ ಬರೆದಿದ್ದರು. ಇಷ್ಟೇ ಅಲ್ಲದೆ ಇದು ದೇಶವ್ಯಾಪ್ತಿಯಲ್ಲಿ ಚರ್ಚೆಗೆ ಗ್ರಾಸವಾಯಿತು. ರಾಜಕೀಯ ವಲಯದಲ್ಲಿಯೂ ಬಿರುಗಾಳಿ ಎನ್ನಿಸಿತು.

ತುಳುವಿಗೆ 60 ವರ್ಷಗಳ ಕಾಲ ಯಾವುದೇ ಸ್ಥಾನಮಾನ ಕೊಡದೇ ಇರುವ ವಿರುದ್ಧ ಜನಾಕ್ರೋಶ ಟ್ವೀಟ್ ಮೂಲಕ ಹೊರಹೊಮ್ಮಿತ್ತು. ವಿಶೇಷವೆಂದರೆ ಬಹಳಷ್ಟು ರಾಜಕೀಯ ಪಕ್ಷಗಳ ನಾಯಕರು ಅಭಿಯಾನದಲ್ಲಿ ಕೈಜೋಡಿಸಿ ತುಳುವಿಗಾಗಿ ಕೈ ಎತ್ತಿದ್ದರು. ಆದರೆ ಅಷ್ಟಕ್ಕೆ ತುಳುವರ ಬೇಡಿಕೆ ಈಡೇರುವುದಿಲ್ಲ.

ಕಾಸರಗೋಡಿನ ನೀಲೇಶ್ವರದಿಂದ ಆರಂಭವಾಗಿ ಬಾರಕೂರು ವರೆಗೆ ಹಬ್ಬಿರುವ ಈ ವಿಶಾಲವಾದ ತುಳುನಾಡಿನಲ್ಲಿ ತುಳುವರಿಗೆ ಇದೊಂದು ಬರೇ ಭಾಷೆಯಲ್ಲ. ಬದಲಿಗೆ ಇದೊಂದು ಜೀವನ ವಿಧಾನ, ಸಂಸ್ಕೃತಿ ಆಗಿದೆ. ತುಳುವಿನಲ್ಲಿ ಸಾಕಷ್ಟು ಸಾಹಿತ್ಯ ರಚನೆಯಾಗಿದೆ. ಕವಿತೆ, ಕಥೆ, ಮಹಾಕಾವ್ಯ, ಕಾದಂಬರಿ, ನಾಟಕ, ರೂಪಕ, ಯಕ್ಷಗಾನ ರಚನೆಯಾಗಿದೆ. ತುಳು ಸಿನಿಮಾಗಳು ಬಂದಿವೆ. ತುಳುವಿನ ವಾಲ್ಮೀಕಿ ಎಂದೇ ಪ್ರಸಿದ್ಧರಾದ ಮಂದಾರ ಕೇಶವ ಭಟ್ ಅವರು ತುಳುವಿನಲ್ಲಿ ಮಹಾಕಾವ್ಯವನ್ನೇ ಸೃಷ್ಟಿಸಿದ್ದಾರೆ. ಮಂದಾರ ರಾಮಾಯಣ ಬರೆದಿದ್ದಾರೆ. ಇದರ ಜತೆಗೆ ತುಳು ಭಾಷೆಗಾಗಿ ಕೇಶವ ಭಟ್ ಅವರು ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ತುಳು ಭಾಷೆಯ ನಡೆದಾಡುವ ವಿಶ್ವವಿದ್ಯಾನಿಲಯವೇ ಅವರಾಗಿದ್ದರು. ಆದರೆ ಅವರು ಹುಟ್ಟಿದ ಮನೆ ಮಂಗಳೂರಿನ ಪಚ್ಚನಾಡಿ ಸಮೀಪದ ಮಂದಾರದಲ್ಲಿ ತ್ಯಾಜ್ಯ ಸುನಾಮಿಗೆ ಸಿಲುಕಿ ಶಿಥಿಲಗೊಂಡಿದೆ. ಅದನ್ನು ಉಳಿಸುವ ಪ್ರಯತ್ನ ನಡೆಯಬೇಕಾಗಿದೆ.ಅವರು ಬದುಕಿರುತ್ತಿದ್ದರೆ ಈ ಕಾಲಘಟ್ಟದಲ್ಲಿ ತುಳುಭಾಷೆಯ ಉಳಿವಿನ ಹೋರಾಟದಲ್ಲಿ ಮುಂಚೋಣಿಯಲ್ಲಿರುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಇದೀಗ ಸೆ.  5ರಂದು ಟ್ವೀಟ್ ಅಭಿಯಾನ ನಡೆಯಲಿದೆ. ಸೆಪ್ಟೆಂಬರ್ 13 ರಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಇದರಿಂದ ಸೆ. 5ರ ಟ್ವೀಟ್ ಅಭಿಯಾನ ಬಹಳಷ್ಟು ಮಹತ್ವ ಪಡೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು