7:01 PM Wednesday29 - April 2026
ಬ್ರೇಕಿಂಗ್ ನ್ಯೂಸ್
ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಇತ್ತೀಚಿನ ಸುದ್ದಿ

ಸದ್ದುಗದ್ದಲವಿಲ್ಲದೆ ವಾರ್ಡ್ ತುಂಬಾ ಫುಡ್ ಕಿಟ್ ವಿತರಿಸುತ್ತಿರುವ ಕಾರ್ಪೊರೇಟರ್: ಇವರೇ ಪ್ರವೀಣ್ ಚಂದ್ರ ಆಳ್ವ

31/05/2021, 21:07

ಮಂಗಳೂರು(reporterkarnataka news): ಕೊರೊನ ಲೊಕ್ಡೌನ್ ಹಿನ್ನೆಲೆ ಜನರು ಉದ್ಯೋಗವಿಲ್ಲದೆ ಅದೆಷ್ಟೋ ಮಂದಿ ತಮ್ಮ ದಿನ ನಿತ್ಯದ ಆಹಾರ ಸಾಮಗ್ರಿಗಳನ್ನು ಖರೀದಿಸಲು ಕಷ್ಟ ಪಡುತ್ತಿದ್ದಾರೆ. ಅದಲ್ಲದೆ ಕಳೆದ ಬಾರಿ ಸರ್ಕಾರದಿಂದ ಒಂದಿಷ್ಟು ಆಹಾರ ಕಿಟ್ಟುಗಳು ಬಂದಿತ್ತು. ಸರಿಯಾದ ಫಲಾನುಭಾವಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರೆತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.  ಆದರೂ ತಕ್ಕ ಮಟ್ಟಿಗೆ ರಾಜಕೀಯ ನಾಯಕರು ಕಿಟ್ಟನ್ನು ಒದಗಿಸಿ ಜನರಿಗೆ ಸಹಾಯ ಹಸ್ತ ನೀಡಿದ್ದರು.

ಇದೀಗ ಮಂಗಳೂರು ಮಹಾನಗರಪಾಲಿಕೆಯ ಕಾರ್ಪೊರೇಟರ್ ಒಬ್ಬರು ಯಾವುದೇ ಸದ್ದುಗದ್ದಲವಿಲ್ಲದೆ, ಪ್ರಚಾರವಿಲ್ಲದೆ ಕಿಟ್ ಹಂಚುತ್ತಿದ್ದಾರೆ. ಇವರು ಬೇರೆ ಯಾರೂ ಅಲ್ಲ, ಪ್ರವೀಣ್ ಚಂದ್ರ ಆಳ್ವ ಅವರು.ಪಾಲಿಕೆಯ ಕಂಕನಾಡಿ 49 ನೇ ಬಿ ವಾರ್ಡ್ ನ ಕಾರ್ಪೊರೇಟರ್  ಆಗಿರುವ ಪ್ರವೀಣ್ ಚಂದ್ರ ಆಳ್ವ ಸ್ವಂತ ಖರ್ಚಿನಲ್ಲಿ  ತಮ್ಮ ವಾರ್ಡಿನ ಎಲ್ಲಾ ಮತದಾರರ ಮನೆ ಮನೆಗೆ  ತೆರಳಿ ಬಡವ ಬಲ್ಲಿದ ಎಂಬ ಬೇಧ ಭಾವ ಇಲ್ಲದೆ 10 ಕೆಜಿ ಅಕ್ಕಿ,  ಉಪ್ಪಿನಕಾಯಿ ಡಬ್ಬವನ್ನು ವಿತರಿಸಲು ಪ್ರಾರಂಭಿಸಿದ್ದಾರೆ. ಇಂತಹ ಅಪರೂಪದ ಯುವ ರಾಜಕಾರಣಿ ಪ್ರತೀ ವಾರ್ಡಿಗೂ ಇರಬೇಕೆಂದು ಆ ವಾರ್ಡಿಯಾ ಜನ ಸಾಮಾನ್ಯರು  ಬಯಸುತ್ತಿದ್ದಾರೆ. ಈ ಬಗ್ಗೆ ರಿಪೋರ್ಟರ್ ಕರ್ನಾಟಕಕ್ಕೆ ಫಲಾನುಭಾವಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಯುವ ಕಾಂಗ್ರೆಸ್ ನ ಸುನಿಲ್ ಕುಮಾರ್ ಜಪ್ಪಿನಮೊಗರು ಹಾಗೂ ಅವರ ಆತ್ಮೀಯ ತಂಡ ಕಿಟ್ ವಿತರಣೆಯಲ್ಲಿ ಸಹಕಾರ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು