7:57 PM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಸದ್ದುಗದ್ದಲವಿಲ್ಲದೆ ವಾರ್ಡ್ ತುಂಬಾ ಫುಡ್ ಕಿಟ್ ವಿತರಿಸುತ್ತಿರುವ ಕಾರ್ಪೊರೇಟರ್: ಇವರೇ ಪ್ರವೀಣ್ ಚಂದ್ರ ಆಳ್ವ

31/05/2021, 21:07

ಮಂಗಳೂರು(reporterkarnataka news): ಕೊರೊನ ಲೊಕ್ಡೌನ್ ಹಿನ್ನೆಲೆ ಜನರು ಉದ್ಯೋಗವಿಲ್ಲದೆ ಅದೆಷ್ಟೋ ಮಂದಿ ತಮ್ಮ ದಿನ ನಿತ್ಯದ ಆಹಾರ ಸಾಮಗ್ರಿಗಳನ್ನು ಖರೀದಿಸಲು ಕಷ್ಟ ಪಡುತ್ತಿದ್ದಾರೆ. ಅದಲ್ಲದೆ ಕಳೆದ ಬಾರಿ ಸರ್ಕಾರದಿಂದ ಒಂದಿಷ್ಟು ಆಹಾರ ಕಿಟ್ಟುಗಳು ಬಂದಿತ್ತು. ಸರಿಯಾದ ಫಲಾನುಭಾವಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರೆತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.  ಆದರೂ ತಕ್ಕ ಮಟ್ಟಿಗೆ ರಾಜಕೀಯ ನಾಯಕರು ಕಿಟ್ಟನ್ನು ಒದಗಿಸಿ ಜನರಿಗೆ ಸಹಾಯ ಹಸ್ತ ನೀಡಿದ್ದರು.

ಇದೀಗ ಮಂಗಳೂರು ಮಹಾನಗರಪಾಲಿಕೆಯ ಕಾರ್ಪೊರೇಟರ್ ಒಬ್ಬರು ಯಾವುದೇ ಸದ್ದುಗದ್ದಲವಿಲ್ಲದೆ, ಪ್ರಚಾರವಿಲ್ಲದೆ ಕಿಟ್ ಹಂಚುತ್ತಿದ್ದಾರೆ. ಇವರು ಬೇರೆ ಯಾರೂ ಅಲ್ಲ, ಪ್ರವೀಣ್ ಚಂದ್ರ ಆಳ್ವ ಅವರು.ಪಾಲಿಕೆಯ ಕಂಕನಾಡಿ 49 ನೇ ಬಿ ವಾರ್ಡ್ ನ ಕಾರ್ಪೊರೇಟರ್  ಆಗಿರುವ ಪ್ರವೀಣ್ ಚಂದ್ರ ಆಳ್ವ ಸ್ವಂತ ಖರ್ಚಿನಲ್ಲಿ  ತಮ್ಮ ವಾರ್ಡಿನ ಎಲ್ಲಾ ಮತದಾರರ ಮನೆ ಮನೆಗೆ  ತೆರಳಿ ಬಡವ ಬಲ್ಲಿದ ಎಂಬ ಬೇಧ ಭಾವ ಇಲ್ಲದೆ 10 ಕೆಜಿ ಅಕ್ಕಿ,  ಉಪ್ಪಿನಕಾಯಿ ಡಬ್ಬವನ್ನು ವಿತರಿಸಲು ಪ್ರಾರಂಭಿಸಿದ್ದಾರೆ. ಇಂತಹ ಅಪರೂಪದ ಯುವ ರಾಜಕಾರಣಿ ಪ್ರತೀ ವಾರ್ಡಿಗೂ ಇರಬೇಕೆಂದು ಆ ವಾರ್ಡಿಯಾ ಜನ ಸಾಮಾನ್ಯರು  ಬಯಸುತ್ತಿದ್ದಾರೆ. ಈ ಬಗ್ಗೆ ರಿಪೋರ್ಟರ್ ಕರ್ನಾಟಕಕ್ಕೆ ಫಲಾನುಭಾವಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಯುವ ಕಾಂಗ್ರೆಸ್ ನ ಸುನಿಲ್ ಕುಮಾರ್ ಜಪ್ಪಿನಮೊಗರು ಹಾಗೂ ಅವರ ಆತ್ಮೀಯ ತಂಡ ಕಿಟ್ ವಿತರಣೆಯಲ್ಲಿ ಸಹಕಾರ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು