10:51 AM Friday31 - July 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ…

ಇತ್ತೀಚಿನ ಸುದ್ದಿ

ಸದ್ದುಗದ್ದಲವಿಲ್ಲದೆ ವಾರ್ಡ್ ತುಂಬಾ ಫುಡ್ ಕಿಟ್ ವಿತರಿಸುತ್ತಿರುವ ಕಾರ್ಪೊರೇಟರ್: ಇವರೇ ಪ್ರವೀಣ್ ಚಂದ್ರ ಆಳ್ವ

31/05/2021, 21:07

ಮಂಗಳೂರು(reporterkarnataka news): ಕೊರೊನ ಲೊಕ್ಡೌನ್ ಹಿನ್ನೆಲೆ ಜನರು ಉದ್ಯೋಗವಿಲ್ಲದೆ ಅದೆಷ್ಟೋ ಮಂದಿ ತಮ್ಮ ದಿನ ನಿತ್ಯದ ಆಹಾರ ಸಾಮಗ್ರಿಗಳನ್ನು ಖರೀದಿಸಲು ಕಷ್ಟ ಪಡುತ್ತಿದ್ದಾರೆ. ಅದಲ್ಲದೆ ಕಳೆದ ಬಾರಿ ಸರ್ಕಾರದಿಂದ ಒಂದಿಷ್ಟು ಆಹಾರ ಕಿಟ್ಟುಗಳು ಬಂದಿತ್ತು. ಸರಿಯಾದ ಫಲಾನುಭಾವಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರೆತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.  ಆದರೂ ತಕ್ಕ ಮಟ್ಟಿಗೆ ರಾಜಕೀಯ ನಾಯಕರು ಕಿಟ್ಟನ್ನು ಒದಗಿಸಿ ಜನರಿಗೆ ಸಹಾಯ ಹಸ್ತ ನೀಡಿದ್ದರು.

ಇದೀಗ ಮಂಗಳೂರು ಮಹಾನಗರಪಾಲಿಕೆಯ ಕಾರ್ಪೊರೇಟರ್ ಒಬ್ಬರು ಯಾವುದೇ ಸದ್ದುಗದ್ದಲವಿಲ್ಲದೆ, ಪ್ರಚಾರವಿಲ್ಲದೆ ಕಿಟ್ ಹಂಚುತ್ತಿದ್ದಾರೆ. ಇವರು ಬೇರೆ ಯಾರೂ ಅಲ್ಲ, ಪ್ರವೀಣ್ ಚಂದ್ರ ಆಳ್ವ ಅವರು.ಪಾಲಿಕೆಯ ಕಂಕನಾಡಿ 49 ನೇ ಬಿ ವಾರ್ಡ್ ನ ಕಾರ್ಪೊರೇಟರ್  ಆಗಿರುವ ಪ್ರವೀಣ್ ಚಂದ್ರ ಆಳ್ವ ಸ್ವಂತ ಖರ್ಚಿನಲ್ಲಿ  ತಮ್ಮ ವಾರ್ಡಿನ ಎಲ್ಲಾ ಮತದಾರರ ಮನೆ ಮನೆಗೆ  ತೆರಳಿ ಬಡವ ಬಲ್ಲಿದ ಎಂಬ ಬೇಧ ಭಾವ ಇಲ್ಲದೆ 10 ಕೆಜಿ ಅಕ್ಕಿ,  ಉಪ್ಪಿನಕಾಯಿ ಡಬ್ಬವನ್ನು ವಿತರಿಸಲು ಪ್ರಾರಂಭಿಸಿದ್ದಾರೆ. ಇಂತಹ ಅಪರೂಪದ ಯುವ ರಾಜಕಾರಣಿ ಪ್ರತೀ ವಾರ್ಡಿಗೂ ಇರಬೇಕೆಂದು ಆ ವಾರ್ಡಿಯಾ ಜನ ಸಾಮಾನ್ಯರು  ಬಯಸುತ್ತಿದ್ದಾರೆ. ಈ ಬಗ್ಗೆ ರಿಪೋರ್ಟರ್ ಕರ್ನಾಟಕಕ್ಕೆ ಫಲಾನುಭಾವಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಯುವ ಕಾಂಗ್ರೆಸ್ ನ ಸುನಿಲ್ ಕುಮಾರ್ ಜಪ್ಪಿನಮೊಗರು ಹಾಗೂ ಅವರ ಆತ್ಮೀಯ ತಂಡ ಕಿಟ್ ವಿತರಣೆಯಲ್ಲಿ ಸಹಕಾರ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು