12:40 AM Sunday7 - June 2026
ಬ್ರೇಕಿಂಗ್ ನ್ಯೂಸ್
ಮಳೆಗಾಲ ಎಫೆಕ್ಟ್: ಜೂನ್ 10ರಿಂದ ಕೊಡಗು ಜಿಲ್ಲೆಯಲ್ಲಿ ಬುಲೆಟ್ ಟ್ಯಾಂಕರ್ ಸಹಿತ ಭಾರೀ… ಸೈಟ್ ಇಲ್ಲದವರಿಗೆ ಉಚಿತ ಸೈಟ್ ಭಾಗ್ಯ: ಮುಖ್ಯಮಂತ್ರಿ ಡಿಕೆಶಿ ಮಹತ್ವದ ಘೋಷಣೆ Mangaluru | ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಗೆ ಕಡಲನಗರಿಯಲ್ಲಿ ಭಾರೀ ಸ್ವಾಗತ Chikkamagaluru | ಅಧಿಕಾರಿಗಳ ನಿರ್ಲಕ್ಷ: ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾದ ಕಡಿದಾಳು… ತೀರ್ಥಹಳ್ಳಿ ತಾಲೂಕಿನ ಫಾರಂ ಹೌಸ್ ನಲ್ಲಿ ಕಳ್ಳತನ: 1 ಲಕ್ಷಕ್ಕೂ ಹೆಚ್ಚು ಮೌಲ್ಯದ… Belagavi | ಅಥಣಿ: ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೃಹತ್‌ ಕಟ್ಟಡ; ತಪ್ಪಿದ ಭಾರೀ… ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಆನೆ ತುಳಿತಕ್ಕೆ ಪತ್ನಿ ಬಲಿ: ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯಗೆ ಸಿಎಂ ಡಿ… ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:…

ಇತ್ತೀಚಿನ ಸುದ್ದಿ

ಮುಳ್ಳಯ್ಯನಗಿರಿಯಲ್ಲಿ ಬೆಟ್ಟ ಹತ್ತಿಸಲು ಇರುವ ಜೀಪ್ ಪಯಣ ನಿಮ್ಮ ಜೀವಕ್ಕೆ ಮುಳ್ಳಾಗಬಹುದು ಹುಷಾರ್.!!

04/08/2021, 23:20

info.reporterkarnataka@gmail.com

ಕಾಫಿ ನಾಡು ಚಿಕ್ಕಮಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಳ್ಳಯ್ಯನಗಿರಿ ಕೂಡ ಒಂದು. ಇಲ್ಲಿ ಪ್ರವಾಸಿಗರ ವಾಹನಗಳನ್ನು ಕೆಳಗಿನ ದೇವಾಲಯದ ಪಕ್ಕ ಇಟ್ಟ ಬಳಿಕ ಬೆಟ್ಟದ ತುದಿ ಅಂದರೆ ಶ್ರೀ ಗುರು ಮೇಲುಗದ್ದಿಗೆ ಮುಳ್ಳಪ್ಪ ಸ್ವಾಮಿ ಮಠದ ಮೆಟ್ಟಿಲು ಆರಂಭ ಆಗುವಲ್ಲಿಗೆ ತಲುಪಿಸುವ ಶರ ವೇಗದ ಜೀಪಿನ ಪಯಣ ನಿಮ್ಮ ಜೀವನಕ್ಕೇ ಕುತ್ತಾಗಬಹುದು.

ವೀಡಿಯೊ – 👇

ಹೌದು, ಇಲ್ಲಿ ಅನೇಕ ಮಹೇಂದ್ರ ಜೀಪ್‌ಗಳು ಹಾಗೂ ಟಾಟ ಸುಮೊ ಥರದ ಗಾಡಿಗಳು ಬೆಟ್ಟ ಹತ್ತಿಸಲು ತಯಾರಾಗಿ ನಿಂತಿರುತ್ತೆ, ವಾರಾಂತ್ಯದಲ್ಲಿ ಬಹುಸಂಖ್ಯೆಯಲ್ಲಿ ಇಲ್ಲಿಗೆ ಜನರು ಭೇಟಿ ನೀಡುವಾಗ ಚಾತಕ ಪಕ್ಷಿಗಳಂತೆ ಕಾಯುವ ಈ ಜೀಪ್‌ಗಳು ಪ್ರತಿ ಟ್ರಿಪ್‌ಗೆ 300 ರೂಪಾಯಿ ಶುಲ್ಕ ಇಟ್ಟು ಬೆಟ್ಟ ಹತ್ತಿಸುತ್ತವೆ.

ಇದೆಲ್ಲ ಓಕೆ ಆದರೆ ಇಲ್ಲಿರುವ ಬಹುತೇಕ ಜೀಪ್‌ಗಳಿಗೆ ಇನ್ಸುರೆನ್ಸೆ ಇಲ್ಲ..! ಹಾಗೂ ಫಿಟ್‌ನೆಸ್ ಸರ್ಟಿಫಿಕೇಟ್ ಇರದ ಜೀಪ್‌ಗಳು ಕೂಡ ಇಲ್ಲಿ ಬೆಟ್ಟ ಹತ್ತಿಸುವ ಕೆಲಸ ಮಾಡ್ತಿದೆ. ಅತಿ ಚಾಣಕ್ಷ ಡ್ರೈವರ್‌ಗಳ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಡ್ರೈವಿಂಗ್ ರೋಮಾಂಚನವಾದರೂ ಒಂಚೂರು ಎಡವಿದರು ಪ್ರಾಣ ಹಾನಿಯ ಜತೆಗೆ ಪರಿಹಾರ ಕೂಡ ಸಿಗದ ಹಾಗೆ ಜೀವನಕ್ಕೆ ಕುತ್ತು ತಂದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಬ್ಲ್ಯಾಕ್ ಲಿಸ್ಟ್ ಆದ ಗಾಡಿಗಳೂ ಇಲ್ಲಿ ಕಾರ್ಯಾಚರಣೆ ಮಾಡ್ತ ಇರೋದು ಸಂಚಾರಿ ಪೋಲಿಸರ ಹಾಗೂ ಅಧಿಕಾರಗಳ ಜಾಣ ಕುರುಡಿಗೆ ಸಾಕ್ಷಿಯಾಗಿದೆ.

ಈ ಅಪಾಯಕಾರಿ ಬೆಟ್ಟದ ಹಾವಿನಂತಹ ರಸ್ತೆಗಳಲ್ಲಿ ಈ ರೀತಿಯ ಫಿಟ್‌ನೆಸ್ ಇರದ ಜೀಪ್‌ಗಳನ್ನು ಹಾಗೂ ಇನ್ಸುರೆನ್ಸ್ ಇರದ ಗಾಡಿಗಳನ್ನು ಓಡಿಸಲು ಅನುಮತಿ ಕೊಟ್ಟ ಚಿಕ್ಕಮಗಳೂರು ಪ್ರವಾಸೋದ್ಯಮ ಇಲಾಖೆಯ ಕುರುಡು ಕಣ್ಣಿಗೆ ಏನನ್ನಬೇಕೊ ಗೊತ್ತಾಗುವುದಿಲ್ಲ. ಸಾವಿರಾರು ಜನ ಪ್ರವಾಸಿಗರ ಜೀವದ ಜತೆ ಚೆಲ್ಲಾಟ ಅಡುವ ಈ ಜಾಣ ಕುರುಡುತನಕ್ಕೆ ಇಲ್ಲಿಯ ಸ್ಥಳೀಯ ಪೋಲಿಸರು ಕೂಡ ಸಾಥ್ ನೀಡುತ್ತಿರಬಹುದೆನ್ನುವ ಗುಮಾನಿ ಮೂಡುತ್ತದೆ.

ಜೀಪ್‌ಗಳ ಮೇಲೆ ಪ್ರವಾಸೋದ್ಯಮ ಇಲಾಖೆ ಸ್ಟಿಕ್ಕರ್ ಅಂಟಿಸಿಕೊಂಡು ಪ್ರವಾಸಿಗರ ವಿಶ್ವಾಸ ಗಳಿಸಿಕೊಂಡು ಈ ರೀತಿಯ ಬೇಜವಾಬ್ದಾರಿಯುತ ಕೆಲಸ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮವನ್ನು ಆಡಳಿತ ತೆಗೆದುಕೊಳ್ಳಬೇಕಾಗಿದೆ. ಇದು ಪ್ರವಾಸಿಗರ ಹಿತದೃಷ್ಟಿಯಿಂದ ಅವಶ್ಯಕವೂ ಆಗಿದೆ. ಅಲ್ಲೆ ಠಿಕಾಣಿ ಹೂಡಿರುವ ಪೋಲಿಸರು ಕೂಡ ಇದನ್ನು ಗಮನಿಸದೇ ಇರುವುದು ವಿಡಂಬನೀಯ ವಿಚಾರ.

ಚಿಕ್ಕಮಗಳೂರಿಗೆಂದು ಪ್ರವಾಸಕ್ಕೆ ಕಳೆದ ಭಾನುವಾರ ಹೋಗಿದ್ದೆವು, ಮುಳ್ಳಯ್ಯನಗಿರಿ ಬೆಟ್ಟದ ತುದಿಗೆ ಹತ್ತಲು ಜೀಪ್‌ನಲ್ಲಿ ಹೋದಂತಹ ಸಂದರ್ಭ ಜೀಪಿನ ಪರಿಸ್ಥಿತಿ ಹಾಗೆ ಚಾಲಕನ ಡ್ರೈವಿಂಗ್ ಎರಡೂ ಅಪಾಯಕಾರಿ ಎನಿಸಿತು, ಪಯಣದ ಸಂದರ್ಭ ಮಾಡಿದ ವಿಡಿಯೋದಲ್ಲಿ ರೆಕಾರ್ಡ್ ಆದ ಗಾಡಿ ನಂಬರ್ ಸರ್ಚ್ ಮಾಡಿ ನೋಡಿದಾಗ ಕಂಡ ಫಲಿತಾಂಶ ದಂಗು ಬಡಿಯುವಂತೆ ಮಾಡಿತು, ಈ ಬಗ್ಗೆ ಚಿಕ್ಕಮಗಳೂರು ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು, ಒಳ್ಳೆಯ ವ್ಯವಸ್ಥೆ ಮಾಡಿಕೊಡಲಿ.
ಪ್ರವಾಸಿಗ, ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು