12:39 AM Thursday17 - September 2026
ಬ್ರೇಕಿಂಗ್ ನ್ಯೂಸ್
ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:…

ಇತ್ತೀಚಿನ ಸುದ್ದಿ

ಮೊಟ್ಟೆಯಲ್ಲಿ ಕಮಿಷನ್ :  ಅಥಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಭಾರಿ ಪ್ರತಿಭಟನೆ

26/07/2021, 14:10

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಜನ ಪ್ರವಾಹ ಸಂಕಷ್ಟದಲ್ಲಿ ತತ್ತರಿಸಿ ಸಾವು ನೋವಿನ ನಡುವೆ ಇದ್ದರೆ ಬಿಜೆಪಿಯವರು ಅಪೌಷ್ಟಿಕ ಮಕ್ಕಳ ಹಾಗೂ ಗರ್ಭಿಣಿ ಹೆಣ್ಣು ಮಕ್ಕಳಿಗೆ ವಿತರಿಸ ಬೇಕಾದ ಆಹಾರಧಾನ್ಯ ಹಾಗೂ ಮೊಟ್ಟೆ ವಿತರಣೆಯಲ್ಲಿಯೂ ಕೂಡ ಹಣ ತಿನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆಪಾದಿಸಿದರು.


ಅವರು ಸೋಮವಾರ ಅಥಣಿ ಮಿನಿ ವಿಧಾನಸೌಧ ಅಥಣಿ ಆವರಣದಲ್ಲಿ ಅಥಣಿ ಹಾಗೂ ತೆಲಸಂಗ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡಲು ಗುತ್ತಿಗೆದಾರರಿಂದ ಪ್ರತಿ ತಿಂಗಳು ಒಂದು ಕೋಟಿ ರೂಪಾಯಿ ಕಮಿಷನ್ ಗೆ ಬೇಡಿಕೆಯಿಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ  ಶಶಿಕಲಾ ಜೊಲ್ಲೆಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ತಹಸಿಲ್ದಾರ್
ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಈ ಹಿಂದೆ ಪ್ರವಾಹ ಬಂದಾಗ ಮುಂಬೈಯಲ್ಲಿದ್ದ ಬಿಜೆಪಿ ಜನಪ್ರತಿನಿಧಿಗಳು ಈಗ ಮುಖ್ಯಮಂತ್ರಿ ಬದಲಾವಣೆ ವಿಷಯ ಹಿಡಿದು ರಾಜಕಾರಣ ಮಾಡ್ತಿದ್ದಾರೆ ಹೊರತು ಪ್ರವಾಹ ಪೀಡಿತ ಜನರತ್ತ ನೋಡ್ತಿಲ್ಲ. ಸಾಮಾನ್ಯ ಜನ ಅಷ್ಟೆ ಅಲ್ಲ ಬಿಜೆಪಿಯವರೆ ಭ್ರಷ್ಟ ಪಕ್ಷ ಎಂದು ಹೇಳ್ತಿದ್ದಾರೆ, ಬಡವರ ಹೊಟ್ಟೆಗೆ ಮತ್ತು ಮಕ್ಕಳಿಗೆ ಕೊಡಬೇಕಾದ ಆಹಾರಧಾನ್ಯದಲ್ಲಿ ಕನ್ನ ಹಾಕುವುದು ನಿಮಗೆ ನಾಚುಕೆ ಯಾಗುವುದಿಲ್ಲವೆ ಎಂದು ಶಶಿಕಲಾ ಜೊಲ್ಲೆ ಅವರನ್ನು ಉದ್ದೇಶಿಸಿ ಹೇಳಿದರು.

ಅಥಣಿ ಭಾಗ ಸುಮಾರು 22 ಹಳ್ಳಿಗಳು ಪ್ರವಾಹದಿಂದ ಬಾಧಿತವಾಗಿವೆ ಇದನ್ನು ಕೇಳದ ಸರಕಾರ ತಮ್ಮ ಹಗರಣದಲ್ಲಿ ತೊಡಗಿವೆ ಎಂದು ನುಡಿದರು.

ನಂತರ ಮಾತನಾಡಿದ ತೆಲಸಂಗ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಇಡೀ ದೇಶದಲ್ಲಿ ಅತೀ ಭ್ರಷ್ಟ ಸರಕಾರ ಎಂದರೆ ಅದು ಬಿಜೆಪಿ ಪಕ್ಷ, ಅಪೌಷ್ಠಿಕ ಮಕ್ಕಳು ತಿನ್ನುವಂತಹ ಆಹಾರ ಧಾನದಲ್ಲಿಯೂ ಭ್ರಷ್ಟಾಚಾರ ಮಾಡಿ ಮೊಟ್ಟೆ ಕಮೀಷನ್ ಪಡೆಯುತ್ತಿರುವುದು ತೀರಾ ನಾಚಿಗೇಡಿತನ. ಇಂತಹ ಸಚಿವರನ್ನೂ ಯಡಿಯೂರಪ್ಪನವರು ಕೂಡಲೇ ವಜಾ ಗೊಳಿಸಿಬೇಕು ಎಂದು ಆಗ್ರಹಿಸಿದರು.

ನಂತರ ಅಥಣಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.


ಈ ವೇಳೆ ಎಸ್ ಕೆ ಬುಟಾಳಿ, ಬಸವರಾಜ ಬುಟಾಳಿ, ರಾವಸಾಬ ಐಹೊಳೆ, ಅನೀಲ ಸುಣಧೋಳಿ, ಸುನೀಲ ಸಂಕ,  ಶಿವಾನಂದ ಸಂಕ, ಅಸ್ಲಮ ನಾಲಬಂದ, ಬಸವರಾಜ ಠಕ್ಕಣ್ಣವರ, ರಾಜು ಜಮಖಂಡಿಕರ, ಗೌತಮ‌ ಪರಾಂಜಪೆ, ತೌಸಿಫ್ ಸಾಂಗಲೀಕರ್, ಪ್ರಕಾಶ ಕೋಳಿ, ಸುರೇಶ ಕೊಳಂಬಿ, ಚಿದಾನಂದ ಮುಕಣಿ, ಆಕಾಶ ಬುಟಾಳಿ, ಬಸವರಾಜ ಹಳ್ಳದಮಳ, ರವಿ ಬಕಾರಿ, ಸಿದ್ದು ಕೋಕಟನೂರ, ಸಚಿನ ಬುಟಾಳಿ, ರವಿ ಬಡಕಂಬಿ, ಸಚಿನ ಬಡಕಂಬಿ, ಸಲಾಂ ಕಲ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು