4:34 AM Saturday13 - June 2026
ಬ್ರೇಕಿಂಗ್ ನ್ಯೂಸ್
ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ… ಹಾಸನ | ಸಕಲೇಶಪುರ ಬಳಿ ಕರುಗಳ ಬೆನ್ನಟ್ಟಿದ ಕಾಡಾನೆ ಮರಿ ಚಿಕ್ಕಮಗಳೂರು: ಗುಂಡು ಹಾರಿಸಿಕೊಂಡು ಗೃಹಿಣಿ ಅನುಮಾನಾಸ್ಪದ ಸಾವು ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ:… ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು: ಗೃಹ ಸಚಿವ… ಸಿಎಂ ಕಾನೂನು ಸಲಹೆಗಾರ ಸ್ಥಾನಕ್ಕೆ ಎ. ಎಸ್. ಪೊನ್ನಣ್ಣ ರಾಜೀನಾಮೆ: ಸಚಿವ ಸ್ಥಾನ… Kodagu | ನಾಪೋಕ್ಲು: ಕಾರು – ಬೈಕ್ ಅಪಘಾತ- ಸವಾರ ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ

ಮೊರಬ ಶ್ರೀವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ಹೆಜ್ಜೇನು ಗೂಡು: ಶುಭ ಅಶುಭದ ಲೆಕ್ಕಾಚಾರ; ಹೂ ಫಲ ಕೇಳಿದ ಗ್ರಾಮದ ದೈವಸ್ಥರು!!

08/09/2021, 09:54

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ತಾಲೂಕು ಮೊರಬ ಗ್ರಾಮದಲ್ಲಿ, ಶ್ರೀವೀರಭದ್ರೇಶ್ವರ ದೇವಸ್ಥಾನದ ಟರಾಸಿನ್ನಲ್ಲಿ ಹೆಜ್ಜೇನು ಹುಳುಗಳು ಗೂಡು ಕಟ್ಟಿವೆ. ಬೃಹದಾಕಾರದಲ್ಲಿ ನಿರ್ಮಿಸಲಾಗಿರುವ ಹೆಜ್ಜೇನು ಗೂಡು ದೇವರ ದರ್ಶನಕ್ಕೆ ಬರುವ ಭಕ್ತರನ್ನ ಸ್ವಾಗತಿಸುತ್ತಿವೆ. ಅಸಂಖ್ಯಾತ ಹೆಜ್ಜೇನು ಹುಳುಗಳು ಬೃಹತ್ ಗೂಡು(ಹುಟ್ಟು)ಕಟ್ಟಿದ್ದು ಶುಭವೋ ಅಶುಭವೋ ಭಕ್ತರಿಗೆ ತೊಂದರೆ ಕೊಡುತ್ತವೆಯೋ..!?ಎಂಬ ಆತಂಕ ಗ್ರಾಮದ ದೈವಸ್ಥರಲ್ಲಿ ಮನೆ ಮಾಡಿತ್ತು.ಅದಕ್ಕಾಗಿ ಪ್ರಾರಂಭದಲ್ಲಿಯೇ ಈ ಬಗ್ಗೆ ಗ್ರಾಮದ ದೈವಸ್ಥರು, ಶ್ರೀ ವೀರಭದ್ರ ದೇವರಲ್ಲಿ ಶುಭ ಅಶುಭ ಕುರಿತು ಮತ್ತು ಜೇನು ಹುಟ್ಟು ತೆರವು ಗೊಳಿಸಲು ಅನುಮತಿ ಕೋರಿ ಹೂ ಫಲ ಕೇಳಿದ್ದಾರೆ. ಶ್ರೀವೀರಭದ್ರೇಶ್ವರ ಸ್ವಾಮಿ ಎಡಭಾಗದ ಹೂ ಕೊಡೋ ಮೂಲಕ, ಭಕ್ತರಿಗೆ ಅಭಯ ನೀಡಿದ್ದು ಹಾಗೂ ಜೇನು ಹುಳುಗಳಿಗೂ ಆಶ್ರಯ ಹಸ್ತ ನೀಡಿದ್ದಾರೆ.

ಈ ಹೆಜ್ಜೇನು ಕಳೆದ ಆರು ತಿಂಗಳಿಂದ ದೇವಸ್ಥಾನದ ಮಧ್ಯ ಭಾಗದಲ್ಲಿ ನಿರ್ಮಾಣವಾಗಿದೆ.

ದೇವಸ್ಥಾನದ ಪ್ರಾಂಗಣದಲ್ಲಿ ಸದಾ ಬೃಹತ್ ಗಾತ್ರದ ಹೆಜ್ಜೇನು ಹುಳುಗಳು ಹಾರಾಡುತ್ತಿರುತ್ತವೆ. ದೇವರ ದರ್ಶನಕ್ಕೆ ಬರುವ ಭಕ್ತರನ್ನ ನಯವಾಗಿ ಸ್ಪರ್ಶಿಸುವ ನಿರುಪದ್ರವಿಗಳಾಗಿದ್ದು, ಹೆಜ್ಜೇನು ಹುಳುಗಳು ಭಕ್ತರನ್ನು ಸ್ವಾಗತಿಸಿ ಕೊಳ್ಳುತ್ತಿವೆ ಎಂಬಂತೆ  ಸನ್ನಿವೇಶ ಸೃಷ್ಠಿಯಾಗಿದೆ. ಕಳೆದ ಆರು ತಿಂಗಳಿಂದ ನಿರ್ಮಾಣವಾಗಿರುವ ಹೆಜ್ಜೇನಿನ ಬೃಹತ್ ಗೂಡು ಬಲು ಆಕರ್ಷಕವಾಗಿದ್ದು, ಹುಳುಗಳಿಂದ ಯಾರಿಗೂ ಯಾವೂದೇ ಕಾರಣಕ್ಕೂ ತೊಂದರೆ ಆಗಿಲ್ಲ. ಹೆಜ್ಜೆನು ಗೂಡು ನಿರ್ಮಾಣದಿಂದ ಶ್ರೀವೀರಭದ್ರೇಶ್ವರ ಭಕ್ತರ ಪಾಲಿಗೂ ಶುಭ ಶಕುನವಾಗಿ ಪರಿಣಮಿಸಿದೆ ಯಂತೆ, ದೇವಸ್ಥಾನದಲ್ಲಿ ಹೆಜ್ಜೇನು ವಾಸ ಮಾಡಿರುವುದರಿಂದಾಗಿ ಸಕಲರಿಗೂ ಹಿತವಾಗಲಿದೆ ಎಂದು ಆಸ್ತಿಕರು ಆಶಾಮನೋಭಾವ ಹೊಂದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು