2:14 PM Friday3 - July 2026
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಸ್ಥರಿಂದ ಭೂಕಬಳಿಕೆ ಆರೋಪ: ಮುಖ್ಯಮಂತ್ರಿ ಡಿಕೆಶಿ ಮುಂದೆ ಹಾಸನ…

ಇತ್ತೀಚಿನ ಸುದ್ದಿ

ಮಸ್ಕಿ ವೀರಶೈವ ಜಂಗಮ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ: ಅಯ್ಯಾಚಾರ ದೀಕ್ಷೆ 

16/03/2022, 16:36

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಪಟ್ಟಣದ ಶ್ರೀ ಗಚ್ಚಿನ ಹಿರೇಮಠದಲ್ಲಿ ಜರಗಿರುವ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ ಅದ್ದೂರಿಯಲ್ಲಿ ನಡೆಯಿತು.


ಶ್ರೀ ಬ್ರಹ್ಮ ವರ ರುದ್ರಮುನಿ ಶಿವಾಚಾರ್ಯರು ಅಮೃತ ಅವರ ನೇತೃತ್ವದಲ್ಲಿ ಬೆಳಗ್ಗೆ ಆದಿ ಜಗದ್ಗುರುಗಳು ರೇಣುಕಾಚಾರ್ಯರ ಮೂರ್ತಿಗೆ ರುದ್ರಾಭಿಷೇಕ ಮಾಡಲಾಯಿತು. ನಂತರ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಲಾಯಿತು . ಶ್ರೀ ಪಂಚಾಚಾರ್ಯ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ತನ್ಮೂಲಕ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಚಾಲನೆ ನೀಡಲಾಯಿತು. ಜಗದ್ಗುರುಗಳ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಜಯ ಗೋಷಳೊಂದಿಗೆ ಚಾಲನೆ ನೀಡಲಾಯಿತು. ಹಳೆ ಬಸ್ಟ್ಯಾಂಡ್ ಅಶೋಕ್ ವೃತ್ತ ದೈವದ ಕಟ್ಟಿ ತೇರ್ ಬಜಾರ್ ಕನಕ ವೃತ್ತ ಬ್ರಮರಾಂಬ ಕಲ್ಯಾಣಮಂಟಪ. ಕಳಸ ಕನ್ನಡಿ ಒಂದಿಗೆ ಭಾವಚಿತ್ರ ಮೆರವಣಿಗೆ ಶ್ರೀ ಗಚ್ಚಿನ ಮಠ ತಲುಪಿತು. ಜಯಂತೋತ್ಸವ ಅಂಗವಾಗಿ ಮಹಿಳೆಯರ ಮಕ್ಕಳ ವಿವಿಧ ರೀತಿಯ ಛದ್ಮವೇಷ ಶ್ರೀ ರೇಣುಕಾಚಾರ್ಯರ ಹಾಗೂ ಪಂಚಪೀಠ ಹಾದಿಗಳ ವೇಷ ನೋಡುಗರನ್ನು ಆಕರ್ಷಣೆ ಕಂಡು ಬಂತು. ಶಿವದೀಕ್ಷೆ ಕಾರ್ಯಕ್ರಮ ಮಾಡಲಾಯಿತು. ಗಚ್ಚಿನ ಹಿರೇಮಠ ಸಾಯಂಕಾಲ ಜನಜಾಗೃತಿ ಧರ್ಮಸಭೆ. ದಿವ್ಯ ಸಾನಿಧ್ಯವನ್ನು ಷಟಸ್ಥಲ ಬ್ರಹ್ಮ ಡಾ.ನಾಗಭೂಷಣ ಶಿವಾಚಾರ್ಯರು ಮಹಾಸ್ವಾಮಿಗಳು, ಬೋಳೋಡಿ ಬಸವೇಶ್ವರ ಸಂಸ್ಥಾನ ಮಠ ಹೆಬ್ಬಾಳ, ಶ್ರೀ ಷಟಸ್ಥಲ ಬ್ರಹ್ಮ ವರ ರುದ್ರಮುನಿ ಶಿವಾಚಾರ್ಯರು ಮಹಾಸ್ವಾಮಿಗಳು,  ಗಚ್ಚಿನ ಹಿರೇಮಠ ಮಸ್ಕಿ .ಶ್ರೀ ಷಟಸ್ಥಲ ಬ್ರಹ್ಮ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು, ಮಹಾಂತ ಮಠ ಸಂತೆಕೆಲ್ಲೂರು, ಧರ್ಮೋಪದೇಶ ಕಾಲಜ್ಞಾನಿ ಬ್ರಹ್ಮ ಸದ್ಗುರು ಶರಣಬಸವ ಮಹಾಸ್ವಾಮಿಗಳು, ತಳ್ಳಿ ಹಾಳ ಸಂಸ್ಥಾನ ಕೋಡಿಮಠ ಕಾಲಜ್ಞಾನ ಮಠ ಗಜೇಂದ್ರಗಡ ಮುಖ್ಯ ಅತಿಥಿಗಳಾಗಿ ಶಾಸಕ ಆರ್. ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಅಮರನಾಥ ರೆಡ್ಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ, ಜಂಗಮ ಸಮಾಜದ ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿಮಠ, ಆದಯ್ಯ ಸ್ವಾಮಿ ಕರಿ ಬಸಯ್ಯಸ್ವಾಮಿ ಸಿಂಧನೂರು ಮಠ, ತಿಪ್ಪಯ್ಯ ಸ್ವಾಮಿ ಸಾಲಿಮಠ, ಯುವ ಘಟಕದ ಅಧ್ಯಕ್ಷ ಶಂಭುಲಿಂಗಯ್ಯ ಸ್ವಾಮಿ, ಕಂಬಾಳಿಮಠ ವೀರೇಶ್ ಪಾಟೀಲ್,  ಡಾ. ಪಂಚಾಕ್ಷರಯ್ಯ ಹಿರೇಮಠ, ಶಿವಕುಮಾರಸ್ವಾಮಿ ಕಡ ಮುಡಿ ಮಠ, ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ (ಸಂಪಾದಕರು),
ಗಣ ಮಠದಯ್ಯ ಸ್ವಾಮಿ ಸಾಲಿಮಠ, ನಾಗಯ್ಯ ಸ್ವಾಮಿ, ಉದ್ಬಾಳ ಶಿವಶಂಕರಯ್ಯ ಸ್ವಾಮಿ,ಶರಣಯ್ಯ ಸ್ವಾಮಿ, ದಿನ್ನಿ ಮಠ ಮಲ್ಲಿಕಾರ್ಜುನ್, ಬ್ಯಾಳಿ ಪುರಸಭೆ ಸದಸ್ಯ ಅಂದಾನಪ್ಪ ಗುಂಡಳ್ಳಿ, ಡಾಕ್ಟರ್ ಶಿವಶರಣಪ್ಪ ಪ್ರಕಾಶ್ ಮಸ್ಕಿ, ಗವಿಸಿದ್ದಪ್ಪ ಸಾಹುಕಾರ್ ಸಂತೆಕೆಲ್ಲೂರು ಮಲ್ಲಯ್ಯ, ಮಹೇಶ್ ಕೊಟ್ಟೂರು ಮಠ, ಶಿವ ಶರಣಯ್ಯಸ್ವಾಮಿ, ಸ್ವಾಮಿ ಶರಣಬಸವ ಸೊಪ್ಪಿಮಠ ಪುರಸಭೆ ಸದಸ್ಯರು ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಪಾಟೀಲ್ ಶಾರದಾ ಸರಗಣಾಚಾರಿ, ಭುವನೇಶ್ವರಿ, ರಾಜೇಶ್ವರಿ ಹಿರೇಮಠ, ವಿದ್ಯಾಶ್ರೀ,ಶಿವಲೀಲಾ ಗಚ್ಚಿನಮಠ, ಅನ್ನಪೂರ್ಣ ಸರಗಣಾಚಾರಿ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು