6:42 AM Wednesday16 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಮಾರನಾಳ ತಾಂಡದಲ್ಲಿ ನೂತನ ತರಕಾರಿ ಮಾರುಕಟ್ಟೆ ಉದ್ಘಾಟನೆ: ಪಿಎಸ್ ಐ ರಾಜಶೇಖರ ರಾಠೋಡ ಚಾಲನೆ

05/01/2025, 10:06

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ಮಾರನಾಳ ತಾಂಡ (ಮಾರನಾಳ ತಾಂಡಾ) ರಾಮರಾವ್ ನಗರ ಕ್ರಾಸ್ ಬಳಿ ತರಕಾರಿ ಮಾರುಕಟ್ಟೆ ಉದ್ಘಾಟನೆಯನ್ನು ನಾರಾಯಣಪುರ ಪಿಎಸ್ಐ ರಾಜಶೇಖರ್ ರಾಠೋಡ ನೆರವೇರಿಸಿದರು.

ಸುಸಜ್ಜಿತ ಮತ್ತು ಸುವ್ಯವಸ್ಥಿತ ಮಾರುಕಟ್ಟೆ ಇದಾಗಿದೆ. ಈ ಮಾರುಕಟ್ಟೆಯಿಂದ ದಶಕಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವರಿಗೆ ಹಾಗೂ ಮಾರಾಟಗಾರರಿಗೆ ಬಹಳ ಅನುಕೂಲವಾಗಲಿದೆ.
ವ್ಯವಸ್ಥಿತವಾಗಿ ಮಾರುಕಟ್ಟೆ ಇಲ್ಲದೆ ರೈತರು ಮತ್ತು ಮಾರಾಟಗಾರರು, ತರಕಾರಿ, ಹಣ್ಣು, ಹೂವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಇದಾನ ನಾವು ಸದುವಯೋಗ ಪಡೆದುಕೊಳ್ಳೋಣಾ ಎಂದು ತಿಳಿಸಿದರು.
*ರಾಮರಾವ್ ನಗರ ಕ್ರಾಸ್ ಬಳಿ ಸಿದ್ದವಾಗುತ್ತಿದೆ ತರಕಾರಿ ಮಾರುಕಟ್ಟೆ;* ನಾರಾಯಣಪುರ ಮತ್ತು ಕೊಡೇಕಲ್ ನಡುವೆ, ನಾರಾಯಣಪುರ ಗ್ರಾಮದಿಂದ ಸುಮಾರು 7 ಕಿ.ಮೀ. ದೂರದಲ್ಲಿದೆ. ಹೊಸ ಮಾರುಕಟ್ಟೆಯು (ಮಾರನಾಳ ತಾಂಡಾ) ರಾಮರಾವ್ ನಗರ ಕ್ರಾಸ್ ಬಳಿ ನಿರ್ಮಿಸಲಾಗಿದೆ. ಇದರಿಂದ ಮಾರನಾಳ, ಯರಕಿಹಾಳ, ಮಾವಿನಗಿಡ್ ತಾಂಡಾ, ಜೋಕಾಂಡಭಾವಿ , ಗಡ್ಡದ ತಾಂಡಾ, ಬರದೇವನಾಳ , ರಾಯನಗೋಳ, ಜುಮಾಲಪುರ್ ದೊಡ್ಡ ತಾಂಡಾ, ಬೆಲ್ಲದಗಿಡ ತಾಂಡಾ, ಹಾಗೂ ಸುತ್ತಮುತ್ತಲಿನ ಗ್ರಾಮ ನಿವಾಸಿಗಳಿಗೆ ಅನುಕೂಲವಾಗಲಿದೆ.
ಮಾರುಕಟ್ಟೆಯಲ್ಲಿನ ಹೈಟೆಕ್ ಸೌಲಭ್ಯಗಳು ಇಲ್ಲದಿದ್ದರೂ ಸಹ ಹವಾಮಾನ ಪರಿಸ್ಥಿತಿಗಳಲ್ಲೂ ಯಾವುದೇ ತೊಂದರೆಯಿಲ್ಲದೆ. ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ಮಾರಾಟ ಮಾಡಬಹುದಾಗಿದೆ. ಗ್ರಾಮದ ಮಾರುಕಟ್ಟೆಯ ಸುತ್ತಲಿನ ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ಮತ್ತು ಪಾದಚಾರಿಗಳು ಕಿರಿಕಿರಿ ಅನುಭವಿಸುತ್ತಾರೆ. ಸದ್ಯ ಮಾರನಾಳ ತಾಂಡದ ರಾಮರಾವ್ ನಗರ ಕ್ರಾಸ್ ಬಳಿ ನಿರ್ಮಿಸಲಾದ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ 100ಕ್ಕೂ ಹೆಚ್ಚು ಮಾರಾಟಗಾರರು ಹೊಸ ಮಾರುಕಟ್ಟೆಗೆ ಬಂದಿದರು ಸಂತೋಷ ತರತಕ್ಕದು ಎಂದು ಮಾರಾಟಗಾರರು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನಾರಾಯಣಪುರ ಪಿ.ಎಸ್.ಐ. ರಾಜಶೇಖರ್ ರಾಠೋಡ್, ಬರದನಾಳ ಪಿ.ಡಿ.ಓ ಪ್ರೀಮಾ ರಾಠೋಡ್ , ಚಂದು ಹರಾವತ, ಸೀತಾಬಾಯಿ ಪವಾರ, ಶೇಖರ್ ನಾಯಕ್ , ಕೃಷ್ಣ್ ಜಾದವ . ಬಾಬು ಚವಾಣ್,
ಹರಿಕೃಷ್ಣ ಮೂಡ್ , ವಿನೋದ ಪವಾರ , ಜೈರಾಮ್ ರಾಠೋಡ, ತಿರುಪತಿ ಚವಾಣ್ ಹಾಗೂ ಗೋರ್ ಸೇನಾ ಗೋರ್ ಸಿಕವಾಡಿಯ ಹಲವಾರು ಪದಾಧಿಕಾರಿಗಳು. ಮತ್ತು ಗುರು ಹಿರಿಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು