8:21 AM Sunday10 - May 2026
ಬ್ರೇಕಿಂಗ್ ನ್ಯೂಸ್
ನಂಜನಗೂಡು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ: ಚಿಕ್ಕರಂಗನಾಯಕ ಚಾಲನೆ ಚಿಕ್ಕಮಗಳೂರು | ಕಾಡಿನೊಳಗೂ ಕಳ್ಳರ ಕೈಚಳಕ: ಮುತ್ತೋಡಿ ಅರಣ್ಯ ವಲಯದಲ್ಲಿದ್ದ ಕ್ಯಾಮೆರಾ ಹೊತ್ತೊಯ್ದ… ಚಾಲಕನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು: ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿದ ಖಾಸಗಿ… ಮೂಡಿಗೆರೆ: ಬಾಳೂರು ಪೊಲೀಸರ 12 ತಾಸುಗಳ ಕಾರ್ಯಾಚರಣೆ ಬಳಿಕ ಪತ್ತೆಯಾದ ಒಂದೂವರೆ ವರ್ಷದ… Shivamogga | ತೀರ್ಥಹಳ್ಳಿ: ವಾಹನದಲ್ಲಿ ಅಕ್ರಮ ಗೋ ಸಾಗಾಟ; ಮೂವರು ವಶಕ್ಕೆ ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ

ಇತ್ತೀಚಿನ ಸುದ್ದಿ

ಮಂಗಳೂರು:ಧರೆಗುರುಳಿದ ನಾಲ್ಕು ಮರಗಳು, ಜಖಂಗೊಂಡ ವಾಹನಗಳು ; ಸ್ಮಾರ್ಟ್ ಸಿಟಿಯೊಳಗಿನ ಅವೈಜ್ಞಾನಿಕ ಕಾಮಗಾರಿಗೆ ಬಲ ಕಳೆದುಕೊಂಡ ಮರಗಳು !

25/05/2025, 00:29

ಮಂಗಳೂರು:(www.reporterkarnataka.com)ಮಂಗಳೂರು ನಗರದಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ಚಿಲಿಂಬಿಯಲ್ಲಿ ನಾಲ್ಕು ಮರಗಳು ಧರೆಗುರುಳಿದ್ದು, ರಿಕ್ಷಾ, ಕಾರು, ಬಸ್ ಸೇರಿಂದಂತೆ ಹಲವು ವಾಹನಗಳು ಜಖಂಗೊಂಡಿವೆ.


ಘಟನಾ ಸ್ಥಳದಲ್ಲಿ ವಾಹನಗಳು ಜನ ಸಂಚಾರ ಹಾಗೂ ಫುಡ್ ಸ್ಟಾಲ್‌ಗಳು ಇದ್ದರೂ ಅದೃಷ್ಟಾವಶತ್ ಯಾವುದೇ ರೀತಿಯಲ್ಲಿ ಜನರ ಪ್ರಾಣ ಅಥವಾ ದೇಹಕ್ಕೆ ಹಾನಿ ಉಂಟಾಗಲಿಲ್ಲ !

ಲೇಡಿಹಿಲ್ ನಾರಾಯಣ ಗುರು ವೃತ್ತ ಸಮೀಪದ ಬಸ್ಸು ತಂಗುದಾಣದಿಂದ ಸಾಯಿ ಬಾಬ ಮಂದಿರದವರೆಗಿನ ಸಾಲು ಸಾಲು ಮರಗಳು ಧರೆಗುರುಳಿದ್ದು, ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಸ್ಥಳದಲ್ಲಿ ಇತ್ತೀಚೆಗೆ ಜಲಸಿರಿ, ಒಳಚರಂಡಿ ಕಾಮಗಾರಿ ನಡೆದಿದ್ದು, ಮರಗಳ ಸಮೀಪದಲ್ಲಿ ಅಗೆಯಲಾಗಿತ್ತು ಬಳಿಕ ಕಾಂಕ್ರೀಟ್ ಹಾಗೂ ಇಂಟರ್ ಲಾಕ್ ಹಾಕಾಲಾಗಿದೆ ಇದರಿಂದಾಗಿ ಮರದ ಬೇರುಗಳಿಗೆ ಸಮರ್ಪಕ ಜಾಗವೂ ಬಲವೂ ಸಿಗದೆ ಗಾಳಿ ಮಳೆಗೆ ಮರ ಧರೆಗೆ ಉರುಳಿದೆ ಎಂದು ಚರ್ಚೆಯಾಗುತ್ತಿದೆ.

ಮರಗಿಡಗಳಿಗೆ ಮಾರಕ ಕಾಂಕ್ರೀಟೀಕರಣ :- ಅಭಿವೃದ್ಧಿ ನೆಪದಲ್ಲಿ ನಗರ ಕಾಂಕ್ರೀಟ್‌ಮಯಗೊಂಡಿದ್ದು, ಮಾತ್ರವಲ್ಲದೆ ನಗರದೊಳಗಿನ ಸಸ್ಯ ಸಂಕುಲಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಮುಖ್ಯ ರಸ್ತೆಯ ಬದಿಗಳಲ್ಲಿ ನೆಟ್ಟ ಮರಗಳಿಗೆ ಒಂದು ಕಡೆ ಕಾಂಕ್ರೀಟ್ ನೆಲದ ಅಡಿ ಭಾಗದಲ್ಲಿ ಒಳಚರಂಡಿ ಕಾಮಗಾರಿ ಅಥವಾ ಚರಂಡಿಯಾ ಕಾಂಕ್ರೀಟ್ ಗೋಡೆಗಳೂ ಕೂಡ ಮರದ ಬೇರುಗಳ ಬೆಳವಣಿಗೆಗೆ ತಡೆಯಾಗುತ್ತಿದ್ದು, ಮಣ್ಣಿನೊಳಗಿನ ಹಿಡಿತವಿರದೆ ಬಲ ಕಳೆದುಕೊಂಡು ಮರಗಳು ಧರೆಗುರುಳಲು ಕಾರಣವಾಗುತ್ತದೆ ಎನ್ನಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು