3:00 AM Friday26 - June 2026
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;…

ಇತ್ತೀಚಿನ ಸುದ್ದಿ

*ಮನೆ ಯಜಮಾನನ ಆಕಸ್ಮಿಕ ಸಾವಿನಿಂದ ಆಧಾರಸ್ತಂಭ ಕಳೆದುಕೊಂಡ ಈ ಬಡ ಕುಟುಂಬಕ್ಕೆ ಸಹಾಯ ಮಾಡುವಿರಾ?*

17/09/2022, 18:24

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ದೇರೆಬೈಲ್ ಕೊಂಚಾಡಿಯ ಬೋರುಗುಡ್ಡೆ ನಿವಾಸಿಯಾದ ತುಕರಾಮ(44) ಅವರು ಬ್ರೈನ್ ಎಮರೇಜ್ ನಿಂದ ಆಗಸ್ಟ್ 20ರಂದು ಮೃತಪಟ್ಟಿದ್ದಾರೆ.

ಬಿಪಿ ಕಾಯಿಲೆ ಬಿಟ್ಟರೆ ಬೇರೆ ಯಾವುದೇ ಕಾಯಿಲೆ ಅವರಿಗೆ ಇರಲಿಲ್ಲ. ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಅವರು ಆಗಸ್ಟ್ 18ರಂದು ರಾತ್ರಿ ಮಲಗುವ ವರೆಗೂ ಆರೋಗ್ಯವಾಗಿಯೇ ಇದ್ದರು. ಆದರೆ ಆಗಸ್ಟ್ 19ರಂದು ಬೆಳಗ್ಗೆ ಅಧಿಕ ರಕ್ತದೊತ್ತಡಕ್ಕೆ ಗುರಿಯಾಗಿದ್ದರು. ತಕ್ಷಣ ಅವರನ್ನು ಕುಂಟಿಕಾನದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅಧಿಕ ರಕ್ತದೊತ್ತಡದಿಂದ ಮೆದುಳಿನಲ್ಲಿ ಅಧಿಕ ಪ್ರಮಾಣದಲ್ಲಿ ರಕ್ತಸ್ರಾವ ಆಗಿದೆಯೆಂದು ಹೇಳಿ ಐಸಿಯುಗೆ ಸೇರಿಸಿದರು. ಆದರೆ ಆಗಸ್ಟ್ 20ರಂದು ಬೆಳಗ್ಗೆ ತುಕರಾಮ ಅವರು ಮೃತಪಟ್ಟರು. ಎ.ಜೆ. ಆಸ್ಪತ್ರೆಯಲ್ಲಿ 72 ಸಾವಿರ ಬಿಲ್ ಆಗಿತ್ತು. ಇದಲ್ಲದೆ ಆರಂಭದಲ್ಲಿ ಅಡ್ಮಿಶನ್ ಫೀಸ್ 15 ಸಾವಿರ ಪಾವತಿಸಲಾಗಿತ್ತು. ತುಕರಾಮ ಅವರ ಬಡ ಕುಟುಂಬ ಸಾಲ ಮಾಡಿ ಆಸ್ಪತ್ರೆಗೆ ಬಿಲ್ ಪಾವತಿಸಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಮೃತ ತುಕರಾಮ ಅವರಿಗೆ ಪತ್ನಿ ಸುಜಾತಾ ಹಾಗೂ ಎಸ್ಸೆಸ್ಸೆಲ್ಸಿ ಮಗ ದಿಶಾನ್ ಇದ್ದಾರೆ. ಬಡ ಕುಟುಂಬಕ್ಕೆ ಸ್ವಂತ ಮನೆಯೂ ಇಲ್ಲ. ಕೂಡು ಕುಟುಂಬದ ವ್ಯವಸ್ಥೆಯಲ್ಲಿರುವ ಅವರಿಗೆ ಸ್ವಂತ ರೇಶನ್ ಕಾರ್ಡ್ ಕೂಡ ಮಾಡಲು ಸಾಧ್ಯವಾಗಲಿಲ್ಲ. ಬ್ಯಾಂಕ್ ನಲ್ಲಿ 90 ಸಾವಿರಕ್ಕೆ ಅಡವಿಟ್ಟ ಕರಿಮಣಿ, ಒಂದ ಸರ ಹಾಗೂ ಉಂಗುರ ಇದೆ. ಹಾಗೆ ಎಚ್ ಡಿಎಫ್ ಸಿಯಿಂದ ತೆಗೆದ 25 ಸಾವಿರ ರೂ. ಗುಂಪು ಸಾಲ ಇದೆ. ಕೆಲವು ಸಣ್ಣ ಪುಟ್ಟ ಕೈಸಾಲ ಕೂಡ ಇದೆ. ಕುಟುಂಬದಲ್ಲಿ ಯಾವುದೇ ಉಳಿತಾಯ, ವಿಮೆ ಇಲ್ಲ.

ಸುಜಾತಾ ಅವರಿಗೆ ಅಪ್ಪ, ಅಣ್ಣ-ತಮ್ಮಂದಿರು ಇಲ್ಲ. ಅನಾರೋಗ್ಯದ ತಾಯಿ ಇದ್ದಾರೆ. ಜೀವನ ಸಾಗಿಸುವುದು ಅವರಿಗೆ ಕಷ್ಟಸಾಧ್ಯವಾಗಿದೆ. ಅವರ ಮಗನ ಮಗನ ಮುಂದಿನ ಶಿಕ್ಷಣ ಹಾಗೂ ಬದುಕಿಗೆ ಸಹಾಯಬೇಕಾಗಿದೆ. ಉದಾರಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾಯಿಸಬೇಕಾಗಿ ವಿನಂತಿ

SUJATHA
SB A/c No: 5062500100959801
IFSC code: KARB0000506
MICR CODE: 575052018
KARNATAKA BANK
KADRI BRANCH, MANGALURU

ಇತ್ತೀಚಿನ ಸುದ್ದಿ

ಜಾಹೀರಾತು