2:49 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಕುಡಿಯುವ ನೀರಿಲ್ಲ, ಬೆಳಕಿಲ್ಲ, ನಿಯಮಾನುಸಾರ ಆಸರೆ ಮನೆ ಹಂಚಿಕೆಯಾಗಿಲ್ಲ: ನಾಗಬೇನಾಳ ಗ್ರಾಮ ಸಭೆ ಬಹಿಷ್ಕರಿಸಿದ ಗ್ರಾಮಸ್ಥರು

30/11/2024, 16:50

ಶಿವು ರಾಠೋಡ್ ಯಾದಗಿರಿ

info.reporterkarnataka@gmail.com

ಈ ಹಿಂದೆ ಸಾಕಷ್ಟು ಗ್ರಾಮ ಸಭೆ, ವಾರ್ಡ ಸಭೆ ಮಾಡಿದ್ದೀರಿ ಸಾರ್ವಜನೀಕರಿಂದ ಬಂದ ಸಮಸ್ಯೆಗಳು ನೂರಾರು ಬರೆದುಕೊಂಡು ಹೋಗಿದ್ದೇ ಆಯ್ತು. ಆದರೆ ಅವುಗಳನ್ನು ಕಾರ್ಯ ರೂಪಕ್ಕೆ ತಂದಿದ್ದೀರಾ? ಇವತ್ತಿನ ಗಾಮ ಸಭೆಯೂ ನಮಗೆ ಬೇಡ ಮೊದಲು ರದ್ದುಗೊಳಿಸಿ ಎಂದು ಅಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರ ಮಾತಿಗೆ ಬಗ್ಗಿದ ಅಧಿಕಾರಿಗಳು ಕೊನೆಗೂ ನಾಗಬೇನಾಳ ಗ್ರಾಮ ಸಭೆಯನ್ನು ಮುಂದೂಡಿದ ಪರಿಣಾಮ ಬಂದ ಹಾದಿಗೆ ಸುಂಕವಿಲ್ಲ ಎಂಬಂತೆ ಅಧಿಕಾರಿಗಳು ಮರಳಿದ ಪ್ರಸಂಗ ಸಮೀಪದ ನಾಗಬೇನಾಳ ಗ್ರಾಮ ಪಂಚಾಯಿತಿನಲ್ಲಿ ನಡೆಯಿತು.


*ಸಾರ್ವಜನೀಕರ ಆರೋಪ:* ಸುಮಾರು ವರ್ಷಗಳಿಂದಲೂ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮರ್ಪಕವಾಗಿ ಕುಡಿಯಲು ನೀರು ಒದಗಿಸುತ್ತಿಲ್ಲ, ಬೆಳಕಿನ ವ್ಯವಸ್ಥೆಯೂ ಇಲ್ಲ. ಆಸರೆ ಮನೆಗಳನ್ನು ನಿಯಮಾನುಸಾರವಾಗಿ ಹಂಚಿಕೆ ಮಾಡಿ ಬಡವರಿಗೆ ಅನುಕೂಲ ಕಲ್ಪಿಸುತ್ತಿಲ್ಲ. ಪಕ್ಕದಲ್ಲೇ ನದಿ ಹರಿಯುತ್ತಿದ್ದರೂ ನಾಗಬೇನಾಳ ತಾಂಡೆಯಲ್ಲಿ ಕುಡಿಯುವ ನೀರಿಲ್ಲ, ದೂರದ ಹಳ್ಳ ಕೊಳ್ಳದಿಂದ ನೀರು ತರಬೇಕಿದೆ. ಕೋಟಿಗಟ್ಟಲೇ ಹಣ ವ್ಯಯಿಸಿ ಜೆಜೆಎಂ ನಿಂದ ಪ್ರತಿ ಮನೆಗೂ ನೀರು ಒದಗಿಸಬೇಕಿದ್ದರೂ ಜೆಜೆಎಂ ಕಾಮಗಾರಿ ಮುಗಿಯದೇ ಗ್ರಾಪಂಯವರು ಮುಗಿದಿದೆ ಎಂದು ತಮ್ಮ ವಶಕ್ಕೆ ಪಡಿಸಿಕೊಂಡಿದ್ದೀರಿ. ಯಾರ ಮನೆಗಾದರೂ ಈವರೆಗೆ ನೀರು ಬಂದಿದೆಯಾ ಎಂದು ಪ್ರಶ್ನಿಸಿದರು.
*ಖಾಸಗಿ ನೀರು:* ಕರ ಮಾತ್ರ ಕಟ್ಟಿಸಿಕೊಳ್ಳುತ್ತಿದ್ದಾರೆ ಗ್ರಾಪಂ ಮೂಲಕ ನಮಗೆ ನೀರೇ ಸಿಗುತ್ತಿಲ್ಲ, ಹೊಲ- ಗದ್ದೆಗಳಿಗೆ ತೆರಳಿ ಖಾಸಗಿ ನೀರು ಕುಡಿಯುತ್ತಿದ್ದೇವೆ. ಆರೇ ಶಂಕರ ಗಾಮದಲ್ಲೂ ಸಹ ಜೆಜೆಎಂ ನೀರು ಸಿಗುತ್ತಿಲ್ಲ. ಆದರೂ 40 ಲಕ್ಷ ಪೋಲಾಗಿದೆ. ಈಗಿರುವ ಪಿಡಿಓ ಗಳಿಗೂ ಗಮನಕ್ಕೆ ತಂದಿದ್ದೇವೆ ಎಂದು ಆರೋಪಿದರು.
ನರೇಗಾದಡಿ ಕಾಮಗಾರಿಗಳೇ ಆಗುತ್ತಿಲ್ಲ. ಸುಮಾರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಂಡಿಲ್ಲ. ಸರಕಾರದ ಅನುದಾನ ಖರ್ಚು ಮಾಡುತ್ತಲೇ ಇದ್ದಾರೆ. ವಾಟರ್‌ಮೆನ್ ಗಳ ಕೊರತೆ ಇದ್ದರೂ ಹುದ್ದೆಗಳನ್ನು ತುಂಬುತ್ತಿಲ್ಲ. ಕೋರಂ ಭರ್ತಿಯಾಗದೇ ಸಭೆ ನಡೆಸುತ್ತಾರೆ. ಈ ಹಿಂದೆ ಸಭೆಯಲ್ಲಿ 120 ಮನೆಗಳನ್ನು ಆಯ್ಕೆ ಮಾಡಿದರೂ ಈವರೆಗೂ ಆ ಮನೆಗಳು ಮಧ್ಯವರ್ತಿಗಳ ಹಾವಳಿಯಿಂದ ನನೆಗುದಿಗೆ ಬಿದ್ದಿವೆ. ಜಿಪಿಎಸ್ ಮಾಡಲೂ ಹಣ ಕೊಡಬೇಕು ಎಂದು ಸಾರ್ವಜನೀಕರು ಒಟ್ಟಾರೆ ನಮ್ಮ ಗ್ರಾಪಂ ಗೆ ಯಾವ ಮೇಲಾಧಿಕಾರಿಗಳು ಗಮನ ಹರಿಸುತ್ತಿಲ್ಲ. ಕರ್ನಾಟಕದಲ್ಲೇ ಅತ್ಯಂತ ಕಳಪೆ ಆಡಳಿತ ಮತ್ತು ಅಭಿವೃದ್ಧಿ ವಂಚಿತ ಗ್ರಾಪಂ ಎಂದು ಮೌನೇಶ ಮಾದರ, ಮಾನಪತಿ, ಆನಂದ ನಾಯಕ, ಬೈಲಪ್ಪ ಗೌಂಡಿ, ಚನ್ನಬಸಪ್ಪ ಕೋಳೂರ, ಚಂಡು, ಹನಮಂತ ಗೌಂಡಿ, ಸುರೇಶ ಪಾಟೀಲ, ಸಂಗಪ್ಪ, ಶಾಂತಪ್ಪ ಪಾಟೀಲ, ಲಕ್ಷ್ಮಣ ರಾಠೋಡ, ಅಕಾಶ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ತಾಪಂ ಎಡಿ ಪಿ.ಎಸ್.ಕಸನಕ್ಕಿ, ಪಿಡಿಓ ಮುರಿಗೆಮ್ಮ ಪೀರಾಪೂರ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಕಾಜಗಾರ, ಹೆಸ್ಕಾಂನ ಸಜ್ಜನ, ಕೃಷಿ ಇಲಾಖೆಯ ಬಿ.ಎಸ್.ಸಾವಳಗಿ, ಕಾರ್ಯದರ್ಶಿ ಟಿ.ಎಂ.ಕೋಲಕಾರ ಸೇರಿದಂತೆ ಸದಸ್ಯರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು