12:05 AM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಪ್ರವಾಹದ ಪರಿಸ್ಥಿತಿ: ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಸ್ವರ್ಣ, ಸೀತಾ ನದಿ; ಇನ್ನಾದಲ್ಲಿ 3 ಮನೆ ಜಲಾವೃತ

06/07/2023, 19:35

ಕಾರ್ಕಳ(reporterkarnataka.com): ಕಳೆದ 5 ದಿನಗಳಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಮಳೆ ಸುರಿಯುತ್ತಿದ್ದು, ಸ್ವರ್ಣ ಹಾಗೂ ಸೀತಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಪಶ್ಚಿಮಘಟ್ಟ ತಪ್ಪಲಿನಲ್ಲಿರುವ ಈ ತಾಲೂಕುಗಳಿಗೆ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ ನೀರು ಮಾಳ ಮಲ್ಲಾರ್ ಬಳಿ ಸ್ವರ್ಣ ನದಿಗೆ ಭಾರಿ ಪ್ರಮಾಣದಲ್ಲಿ ಸೇರಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಡ್ಲಿ ಅಣೆಕಟ್ಟಿನ ಎಲ್ಲ ಗೇಟ್ ಗಳನ್ನು ತೆರೆಯಲಾಗಿದ್ದು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮುಂಡ್ಲಿ ಅಣೆಕಟ್ಟಿನ ಸುತ್ತಲೂ ಇರುವ ಗದ್ದೆಗಳಿಗೆ ತೋಟಗಳಿಗೆ ನೀರು ನುಗ್ಗಿದೆ. ಕಾರ್ಕಳ ತಾಲೂಕಿನ ಕೆರುವಾಶೆ, ಎಣ್ಣೆಹೊಳೆ ಹೆರ್ಮುಂಡೆಯ ಸ್ವರ್ಣ ನದಿಯ ತಟದ ಪ್ರದೇಶಗಳಲ್ಲಿ ನೀರು‌ ನುಗ್ಗಿದೆ.

ಹೆಬ್ರಿ ಭಾಗದಲ್ಲಿ ಹರಿಯುವ ಸೀತಾ ನದಿ ಅಪಾಯ ಮಟ್ಟದಲ್ಲಿ ಹರಿಯುತಿದೆ. ನಾಡ್ಪಾಲು ಬಳಿ ರಾಷ್ಟ್ರೀಯ ರಸ್ತೆಯಲ್ಲಿ ಸೀತಾ ನದಿಯ ನೀರು ಹರಿದಿದೆ. ಇದರಿಂದ ಸಂಚಾರ ದುಸ್ತರವಾಗಿದೆ.
ಶಿವಪುರ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿ
ದ್ದು ಬಟ್ರಾಡಿ, ದೊಡ್ಡಮನೆ ಭಾಗದಲ್ಲಿ ನೀರು ಕೃಷಿ ಭತ್ತದ ಗದ್ದೆಗಳಿಗೆ ಆವರಿಸಿದೆ .ಕಬ್ಬಿನಾಲೆ ನದಿಯು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು
ಧರ್ಮಸ್ಥಳ ಗ್ರಾಮ ಅಭಿವೃದ್ದಿಯ ಹಡಿಭೂಮಿ ಯೋಜನೆ ಯಲ್ಲಿ ವರಂಗದ ಮಾತಿಬೆಟ್ಟು ಸಮೀಪದಲ್ಲಿ ಇಪ್ಪತ್ತು ಹೆಚ್ಚು ಎಕರೆ ಪ್ರದೇಶದಲ್ಲಿ ನಾಟಿ ಮಾಡಲಾಗಿತ್ತು. ಆದರೆ ಕಬ್ಬಿನಾಲೆ ನದಿ ಪ್ರವಾಹದಿಂದ ನೆರೆ ಉಂಟಾಗಿ ಭತ್ತದ ಗದ್ದೆಗಳು ಮುಳುಗಿವೆ. ಇನ್ನಾ ಗ್ರಾಮದಲ್ಲಿ ಮೂರು ಮನೆಗಳು ಜಲಾವೃತವಾಗಿವೆ.
ಕಳೆದ ಎರಡು ವರ್ಷಗಳ ಹಿಂದೆ ಕಾಂಕ್ರಿಟಿಕರಣಗೊಂಡ ಕಬ್ಬಿನಾಲೆ- ತಿಂಗಳ ಮಕ್ಕಿ ಸಂಪರ್ಕಿಸುವ ರಸ್ತೆಯ ಪೊಲ್ಲಂತು ಎಂಬಲ್ಲಿ ಮಳೆಯಿಂದ ಮಣ್ಣಿನ ಸವಕಳಿಯಾಗಿ ರಸ್ತೆಗೆ ಕುಸಿತದ ಭೀತಿ ಉಂಟಾಗಿದೆ. ಸುಮಾರು ಎರಡು ಅಡಿ ಮಣ್ಣು ಕುಸಿದಿದ್ದು ರಸ್ತೆಯ ಎಡಪಾರ್ಶವು ಆಧಾರವಿಲ್ಲದಂತಾಗಿದೆ .
ಅಜೆಕಾರು- ಮಂಗಪಾಡಿ- ಭೂತಮಾರು ರಸ್ತೆಯ ಮರಬಿದ್ದು ತಡೆಗೋಡೆ ಕುಸಿತವಾಗಿದೆ.ಸ್ಥಳಕ್ಕೆ ಅಗಮಿಸಿದ ಅಜೆಕಾರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ಸದಸ್ಯರು ಸ್ಥಳಕ್ಕೆ ಆಗಮಿಸಿ ಮರವನ್ನು ಕತ್ತರಿಸಿ ತೆರವು ಗೊಳಿಸಿದರು
ಮಳೆ ವಿವರ : ಕಾರ್ಕಳ ತಾಲೂಕಿನಲ್ಲಿ ಬುಧವಾರ ಬಾರಿ ಮಳೆ ಸುರಿದಿದ್ದು ಕೆದಿಂಜೆ, 258.00ಮಿಮಿ
ಅತ್ಯಧಿಕ ಮಳೆ ದಾಖಲಾಗಿದೆ. ಸಾಣೂರು195.6 ಮಿಮೀ, ಇರುವತ್ತೂರು 213.2 ಮಿಮೀ, ,ಕಾರ್ಕಳ ನಗರ 247.6 ಮಿಮೀ ಕೆರುವಾಶೆ 196.4ಮಿಮಿ ,ಮುಳಿಕಾರಿನಲ್ಲಿ 209 ಮಿಮೀ, ಅಜೆಕಾರಿನಲ್ಲಿ 231.6 ಮಿಮೀ ಮಳೆಯಾಗಿದೆ.ಹೆಬ್ರಿ179 ಮಿಮೀ, ಕಾರ್ಕಳ ತಾಲೂಕಿನಲ್ಲಿ ಒಟ್ಟು 1551.6 ಮಿಮೀ ಮಳೆ ವರದಿಯಾಗಿದೆ. ಸರಾಸರಿ 221 ಮಿಮೀ ಮಳೆ ಬಿದ್ದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು