4:13 AM Monday22 - June 2026
ಬ್ರೇಕಿಂಗ್ ನ್ಯೂಸ್
ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್…

ಇತ್ತೀಚಿನ ಸುದ್ದಿ

ಹೊಸ್ಮಾರುವಿನಲ್ಲಿ ಕಾಂಪ್ಲೆಕ್ಸ್‌ಗೆ ಪ್ರಥಮ ಬಾರಿ ತುಲುಲಿಪಿ ನಾಮಫಲಕ

22/08/2021, 18:08

ಹೊಸ್ಮಾರು(reporterkarnataka.com); ರವೀಂದ್ರ ಪೂಜಾರಿ ಮಾಲಿಕತ್ವದ ಹೊಸ್ಮಾರು ಈದು ಕ್ರಾಸ್ ಬಳಿಯಿರುವ ಮನ್ವಿತ್ ಕಾಂಪ್ಲೆಕ್ಸ್‌ಗೆ ಜೈ ತುಲುನಾಡ್ ರಿ. ಸಂಘಟನೆ ಕಾರ್ಲ ಘಟಕದ ಸಹಕಾರದೊಂದಿಗೆ ತುಲು ಲಿಪಿಯಲ್ಲಿ ನಾಮಫಲಕ ಅಳವಡಿಸಲಾಯಿತು.


ಈದು ಗ್ರಾಮದಲ್ಲಿ ಪ್ರಥಮ ಬಾರಿ ಕಾಂಪ್ಲೆಕ್ಸ್‌ಗೆ ತುಲುಲಿಪಿ ಅಳವಡಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು. ರವೀಂದ್ರ ಪೂಜಾರಿಯವರು ತುಲುಲಿಪಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು ತಾನು ಹೊರ ದೇಶದಲ್ಲಿದ್ದರೂ ಕೂಡ ತುಲು ಲಿಪಿಯನ್ನು ಕಲಿಯುತ್ತಿದ್ದಾರೆ ಮತ್ತು ಅವರ ಪತ್ನಿ ಮಕ್ಕಳು ತುಲುಲಿಪಿಯನ್ನು ಕಲಿಯುತ್ತಿದ್ದಾರೆ.

ನಾಮ ಫಲಕದ ಉದ್ಘಾಟನೆಯನ್ನು ಪೂರ್ಣಿಮಾ ರವೀಂದ್ರ ಪೂಜಾರಿ ನೆರೆವೇರಿಸಿದರು. ಈ ಸಂದರ್ಭದಲ್ಲಿ ಜೈ ತುಲುನಾಡ್ ರಿ. ಕೇಂದ್ರ ಸಂಘಟನಾ ಕಾರ್ಯದರ್ಶಿ ಆರ್‌.ಸಿ   ದುರ್ಗಾನಗರ, ಕಾರ್ಲ ಯುನಿಟ್‌ನ ಸಂಚಾಲಕರಾದ ವಿಶು ಶ್ರೀಕೇರ, ಶೇಖರ್ ಶ್ರೀಗಂಗೆ, ನಾರಾವಿ  ಸಂತ ಅಂತೋನಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರದೀಪ್ ಬಿ.

ಹಾಗೂ ಸದಸ್ಯರಾದ ಪ್ರಶಾಂತ್ ಶ್ರೀನಿಧಿ, ಪ್ರೀತಂ ಕೋಟ್ಯಾನ್ ಬಜಗೋಳಿ, ದಿವಾಕರ್ ಈದು, ಗಣೇಶ್ ಈದು, ಲಕ್ಮೀ , ಹೋಟೆಲ್ ನ್ಯೂ ಸುರಕ್ಷಾ ಮಾಲಕರಾದ ಗುಲಾಬಿ ಗೋಪಾಲ್, ಶೃಂಗಾರ ಪ್ಯಾನ್ಸಿ& ಪಾರ್ಲರ್ ಮಾಲಕರಾದ ವೀಣಾ ಸತೀಶ್ ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು