6:04 AM Tuesday23 - June 2026
ಬ್ರೇಕಿಂಗ್ ನ್ಯೂಸ್
ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್…

ಇತ್ತೀಚಿನ ಸುದ್ದಿ

ದುರುಗಮ್ಮ ದೇವರಿಗೆ ಪೂಜಾ ಪಂಚಾಮೃತ ಅಭಿಷೇಕ, ಕುಂಕುಮ ಅಲಂಕಾರ: ಕೊರೊನಾ ತೊಲಗಲು ಪ್ರಾರ್ಥನೆ 

31/08/2021, 20:11

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಶ್ರಾವಣ ಪ್ರಯುಕ್ತ ಕೂಡ್ಲಗಿಯ ಜಂಗಮಸೋವೇನಹಳ್ಳಿ ಗ್ರಾಮದ ಅಧಿದೇವತೆ ಶ್ರೀ ದುರುಗಮ್ಮ ದೇವರಿಗೆ ಮಂಗಳವಾರ ಪೂಜಾ ಪಂಚಾಮೃತ ಅಭಿಷೇಕ, ಕುಂಕುಮ ಅಲಂಕಾರ ಮಾಡಲಾಯಿತು.

ಜಘಮಸೋವೇವನಹಳ್ಳಿ ಗ್ರಾಮದ ಭಕ್ತರು ಗ್ರಾಮದ ಅಧಿದೇವತೆ ಶ್ರೀ ದುರುಗಮ್ಮ ದೇವರಿಗೆ ಹೊಳಗೆ ಕರೆದೊಯ್ಯುವ  ಮೂಲಸ್ಥಳ ಗ್ರಾಮದ ಹೊರವಲಯದ ಶಿವಪುರದ ಕಾದಿಟ್ಟ ಅರಣ್ಯ ಪ್ರದೇಶದ ಬೆಟ್ಟದ ಅರಣ್ಯದಲ್ಲಿನ ಪ್ರಕೃತಿ ಹಸಿರ ವನಸಿರಿ ರಮಣೀಯ ರಮ್ಯತಾಣ ಬೆಟ್ಟದ ಮದ್ಯದಲ್ಲಿ ಬಂಡೆಕಲ್ಲಿನಲ್ಲಿ ವಡ ಮೂಡಿರುವ ಶ್ರೀ ದುರಗಮ್ಮ ದೇವತೆಗೆ ವಿಶೇಷ ಪೂಜೆ ನೆರವೇರಿಸಿದರು.

ಪಂಚಾಮೃತ ಅಭಿಷೇಕ ಕುಂಕುಮದ ಅಲಂಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಅಬಾಲವೃದ್ದರಾದಿಯಾಗಿ ಭಕ್ತಿ ಸಮರ್ಪಿಸಿ ನಾಡಿಗೆ ಅಂಟಿದ ಕೊರೊನಾ ಮಹಮಾರಿ ತೊಲಗಲಿ ಎಂದು ಪ್ರಾರ್ಥಿಸಿದರು.

ಗ್ರಾಮಕ್ಕೆ ಮಾತ್ರವಲ್ಲ ನಾಡಿಗೆಲ್ಲ ಸಕಾಲಕ್ಕೆ ಉತ್ತಮ ಮಳೆಯಾಗಿ ಉತ್ತಮ ಪಸಲು ಬರಲಿ, ನೆರೆ ಬರ ತೊಲಗಲಿ ಎಂದು ಕೋರಿದರಲ್ಲದೇ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಆರ್ಶೀವಾದ ಪಡೆದು ದನ್ನತೆ ಮರೆದರು. ನಂತರ ಭಕ್ತರೆಲ್ಲಾ ಅರಣ್ಯದ ಹಸಿರಿನ ಪ್ರಕೃತಿಯ ಸಿರಿಯಲಿ ಸಾಮೂಹಿಕವಾಗಿ ಮಹಾ ಪ್ರಾಸದ ಸವಿದರು. ಈ ಮೂಲಕ ಜಂಗಮಸೋವೇನಹಳ್ಳಿ ಗ್ರಾಮಸ್ಥರು ಶ್ರೀ ದುರುಗಮ್ಮ ದೇವಿಗೆ ಭಕ್ತಿ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು. ಗ್ರಾಮದ ಹಿರಿಯರು ಹಾಗೂ ಯುವಕರು ಮಕ್ಕಳು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು