11:24 AM Monday10 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ದೋಸ್ತಿಲು ಕುಡ್ಲ ವಾರ್ಷಿಕೋತ್ಸವ ;ಸಾಧಕರಿಗೆ ಸನ್ಮಾನ

19/09/2024, 18:14

ಮಂಗಳೂರು :ದೋಸ್ತಿಲು ಕುಡ್ಲ ಸಂಘಟನೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಮಂಗಳವಾರ ನಗರದ ಪುರಭವನದಲ್ಲಿ ಜರಗಿತು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ನಾಟಕಕಾರ ನವೀನ್ ಶೆಟ್ಟಿ ಅಳಕೆ, ಯುವ ಭಾಗವತ ಸುಶಾಂತ್ ಕೈಕಂಬ, ಯುವ ಕಾಂಗ್ರೆಸ್ ಇಂಟಕ್‌ನ ಮಾಜಿ ಜಿಲ್ಲಾ ಅಧ್ಯಕ್ಷ ಧೀಕ್ಷಿತ್ ವಿ.ಶೆಟ್ಟಿ, ವಿಎಚ್‌ಪಿ ಭಜರಂಗದಳ ಉಳ್ಳಾಲ ಪ್ರಖಂಡ ಸಂಚಾಲಕ ಅರ್ಜುನ್ ಮಾಡೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ Zee ಕನ್ನಡ ಸರಿಗಮಪ ಖ್ಯಾತಿಯ ಕರಾವಳಿಯ ಗಾನ ಕೋಗಿಲೆ ಸಮನ್ವಿ ರೈ ಪುತ್ತೂರು, ಹಾಸ್ಯ ಕಲಾವಿದ ಉತ್ಸವ್ ವಾಮಂಜೂರ್, ಬಾಲ ಪ್ರತಿಭೆ ಸಾನ್ವಿ ಭಟ್ ಚಿತ್ರಾಪುರ, ಖ್ಯಾತ ಸಾಹಿತಿ ಜಿ.ಎಸ್.ಗುರುಪುರ ಇವರಿಗೆ ಸನ್ಮಾನಿಸಲಾಯಿತು.

ದೋಸ್ತಿಲು ಕುಡ್ಲದ ಸದಸ್ಯರು ಹರ್ಷಿತ್ ಕೊಂಡಾಣ, ಅವಿನಾಶ್ ಬಿಕರ್ನಕಟ್ಟೆ, ಶ್ರೀಶಾಂತ್ ಆಕಾಶ್ ಭವನ, ಶ್ರೇಯಸ್ ಮಾಲೆಮಾರ್,
ಪ್ರಜ್ವಲ್ ಎಂ ಶೆಟ್ಟಿಗಾರ್ ಆಕಾಶ್ ಭವನ ಮತ್ತಿತರರು ಇದ್ದರು. ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಕೃತಿಕ ಕಾರ್ಯಕ್ರಮ ದ ಅಂಗವಾಗಿ ಕುರಲ್ ಕಲಾವಿದರು ಬೆದ್ರ ಇವರಿಂದ ಯೇರ್ ತುಳು ಹಾಸ್ಯಮಯಾ ನಾಟಕ ಪ್ರದರ್ಶನಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು