1:01 PM Wednesday24 - June 2026
ಬ್ರೇಕಿಂಗ್ ನ್ಯೂಸ್
ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್…

ಇತ್ತೀಚಿನ ಸುದ್ದಿ

ದೂಪದಹಳ್ಳಿ ರೂಪಾಬಾಯಿಗೆ ಪಿಎಸ್ ಐ ಆಗಿ ಬಡ್ತಿ: ಸಂಭ್ರಮಿಸಿ ಅಭಿನಂದಿಸಿದ ತಾಂಡದ ಜನತೆ

23/01/2022, 17:47

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೊಟ್ಟೂರು ತಾಲೂಕಿನ ದೂಪದಹಳ್ಳಿ ತಾಂಡದ ಬಡ ವಿದ್ಯಾರ್ಥಿನಿ, ಈ ವರೆಗೆ ರೂಪ ಬಾಯಿ ಪೇದೆಯಾಗಿದ್ದವರು ಈಗ ಪಿಎಸ್ಐ ಹುದ್ದೆ ಅಲಂಕರಿಸಿದ್ದಾರೆ. ಅವರಿಗೆ ತಾಂಡಾದ ಗ್ರಾಮಸ್ಥರು ಹಾಗೂ ಹಿರಿಯರು, ಮಹಿಳೆಯರು, ವಿವಿದ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದ್ದಾರೆ. 

ದೂಪದಹಳ್ಳಿ ತಾಂಡದ ಕೊಟ್ರೇಶ್ ನಾಯ್ಕ್ ಅವರ  ಪುತ್ರಿಯಾದ ರೂಪ ಬಾಯಿ ರವರು, Bsc Agri ಮುಗಿಸಿ ಪಿಸಿ ಹುದ್ದೆಗೆ ಆಯ್ಕೆಯಾಗಿ ಒಂದೇ ವರ್ಷದಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರ ತಂದೆ ವಿದ್ಯಾಭ್ಯಾಸಕ್ಕೆ ಏನು ಕೊರತೆಯನ್ನು ಮಾಡದೆ ಮಗಳನ್ನು ಚೆನ್ನಾಗಿ ಓದಿಸಿ ಉನ್ನತ  ಸ್ಥಾನಕ್ಕೆ ತಂದಿದ್ದಾರೆ. ಕೊಟ್ರೇಶ್ ನಾಯಕ್ ಅವರಿಗೆ ಮೂರು ಜನ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು. ರೂಪ ಬಾಯಿ ಅವರು ಎರಡನೆಯ ಮಗಳು. ಅಣ್ಣ ಹಾಗೂ ತಮ್ಮ ಕಬ್ಬು ಕಟಾವು ಮಾಡುತ್ತಿದ್ದಾರೆ. ರೂಪ ಬಾಯಿ ಅವರು ಪಿಎಸ್ಐ ಹುದ್ದೆಗೆ ಆಯ್ಕೆಯಾಗಿರುವುದನ್ನು ಆಯ್ಕೆಯಾಗಿರುವುದನ್ನು ಕಂಡು ಊರಿನ ಹಿರಿಯರು ಮುಖಂಡರು ಖುಷಿಯನ್ನು ವ್ಯಕ್ತಪಡಿಸಿದರು ಹಾಗೂ ಅವರ ಸಾಧನೆಗೆ ತಾಂಡದ ನಾಯಕರವರು ಶಾಲು ಮತ್ತು ಹಾರ ಹಾಕಿ,ಹಣ್ಣುಹಂಪಲು ಕೊಟ್ಟು ಅವರಿಗೆ ಸನ್ಮಾನಿಸಿದರು.

ದೂಪದಹಳ್ಳಿ ತಾಂಡದ ಗೋರ ಸೇನಾ ಸಂಘಟನೆದಿಂದ ಹಾಗೂ  ಗೋರ್ ಸಿಕ್ವಾಡಿ ಬಾಲಸಂಸ್ಕಾರ  ಕೇಂದ್ರದಲ್ಲಿ  ಅವರಿಗೆ ಸನ್ಮಾನಿಸಿದರು. ಗೋರ್ ಸೇನಾ ಅಧ್ಯಕ್ಷರಾದ ರಮೇಶ್ ನಾಯ್ಕ ಹಾಗೂ  ಶಿವಪ್ರಕಾಶ್ ಮಹಾರಾಜರು ಅಭಿನಂದಿಸಿದರು.

ಬಾಲ ಸಂಸ್ಕಾರ ಕೇಂದ್ರದ ಶಿಕ್ಷಕರಾದ ಅನಿಲ್ ನಾಯ್ಕ್ ಮಾಂತೇಶ್ ನಾಯ್ಕ್ ,ಗೋರ್ ಸೇನಾ ಪದಾಧಿಕಾರಿಗಳು ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು