3:52 AM Friday14 - August 2026
ಬ್ರೇಕಿಂಗ್ ನ್ಯೂಸ್
ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ

ಇತ್ತೀಚಿನ ಸುದ್ದಿ

ಪಾರಿವಾಳಕ್ಕಿಂತ ಸ್ವಲ್ಪ ಸಣ್ಣಗಿರುವ ನೀಲಕಂಠ ಬಗ್ಗೆ ನಿಮಗೆ ಗೊತ್ತೇ?

18/07/2026, 10:35

ನೀಲಕಂಠ (Indain roller/blue jay):ಕರ್ನಾಟಕದ ರಾಜ್ಯ ಪಕ್ಷಿ ನೀಲಕಂಠ (coracias indica)ಸಾಮಾನ್ಯವಾಗಿ ಕುರುಚಲು ಕಾಡುಗಳಲ್ಲಿ ಕಂಡು ಬರುತ್ತದೆ. ಅತೀ ಸುಂದವಾದ ಹಾಗೂ ಬುದ್ಧಿವಂತ ಪಕ್ಷಿ.

ಪಾರಿವಾಳಕ್ಕಿಂತ ಸ್ವಲ್ಪ ಚಿಕ್ಕದಾಗಿದ್ದು, ರೆಕ್ಕೆ, ಬಾಲ ಹಾಗೂ ತಲೆಯ ಮೇಲಿನ ಭಾಗವು ಆಕಾಶ ನೀಲಿ ಬಣ್ಣವನ್ನು ಕುತ್ತಿಗೆಯ ಕಪ್ಪು ಪಟ್ಟಿ, ತಲೆಯ ಬದಿಗೆ ವಿಸ್ತರಿದಂತೆ ಕಾಣುತ್ತದೆ.ದೇಹದ ಕೆಳ ಭಾಗವು ಬಿಳೀ ಬಣ್ಣವನ್ನು ಹೊಂದಿರುತ್ತದೆ. ಕೊಕ್ಕು ಹಾಗೂ ಕಾಲುಗಳ ಬಣ್ಣ ಕಪ್ಪು.
ಈ ಹಕ್ಕಿಯು ಕೂಗುವಾಗ ‘ಜೈ ‘ಪದವನ್ನು ಹೇಳಿದಂತೆ ಕೇಳಿಸುವುದರಿಂದ blue jay ಎಂಬ ಹೆಸರು ಬಂದಿದೆ. ಹಾಗೂ ಆಕ್ರಮಣ ಮಾಡುವಾಗ ತೇಲಾಡಿದಂತೆ ಕಾಣಿಸುವುದರಿಂದ Indian roller ಎಂಬ ಹೆಸರು ಬಂದಿದೆ. ಇತರ ಹಕ್ಕಿಯ ಕೂಗನ್ನು ಅನುಕರಣೆ ಮಾಡವ ಪ್ರತಿಭೆಯು ಈ ಹಕ್ಕಿಯಲ್ಲಿದೆ. ಈ ಪಕ್ಷಿಯ ಆಹಾರ ಧಾನ್ಯ, ಹಣ್ಣುಗಳು ಹಾಗೂ ಹುಳ ಹುಪ್ಪಟೆಗಳು.
ಈ ಹಕ್ಕಿಯ ಸಂತಾನೋತ್ಪತ್ತಿಯ ಕಾಲ ಮಾರ್ಚ್ ನಿಂದ ಜೂನ್ ತಿಂಗಳು. ಗಂಡು ಹಕ್ಕಿಯು ತನ್ನ ರೆಕ್ಕೆ ಬಿಚ್ಚಿ ತೇಲಾಡುವ ಪ್ರಕ್ರಿಯೆಯಿಂದ ಹೆಣ್ಣು ಹಕ್ಕಿಯನ್ನು ಆಕರ್ಷಿಸಿ, ಜೀವನ ಪರ್ಯಂತ ಏಕ ಪತ್ನಿತ್ವ ಪದ್ದತಿಯನ್ನು ಪಾಲಿಸುತ್ತದೆ. ಸಾಮಾನ್ಯವಾಗಿ ವೃತ್ತಕಾರದ ಗೂಡು ಅಥವಾ ಮರದ ಪೊಟರೆಗಳಲ್ಲಿ 4-5 ಮೊಟ್ಟೆಗಳನ್ನು ಇಟ್ಟು, ಕಾವು ಕೊಡುತ್ತದೆ.18 ದಿನಗಳಲ್ಲಿ ಮರಿ ಹೊರ ಬಂದ ನಂತರ ಗಂಡು ಹೆಣ್ಣು ಸೇರಿ ಆರೈಕೆ ಮಾಡುತ್ತದೆ.
ನೀಲಕಂಠ ಪಕ್ಷಿಯ ಜೀವಿತಾವಧಿ ಸುಮಾರು 7ವರ್ಷಗಳು ವಲಸೆ ಹೋಗುವ ಪ್ರಕ್ರಿಯೆಯು ಕೆಲವು ನೀಲಕಂಠ ಗಳಲ್ಲಿ ಕಾಣ ಬಹುದು. ಧಾರ್ಮಿಕವಾಗಿ ಶಿವ ದೇವರನ್ನು ಪೂಜಿಸುವವರು ನೀಲಾಕಂಠ ಪಕ್ಷಿಗಳನ್ನು ಶಿವನ ಸಂಕೇತ ವೆಂದು ಗೌರವಿಸುತ್ತಾರೆ.ಈ ಪಕ್ಷಿಯು ಒಡ್ಡಿಸ್ಸಾ ಹಾಗೂ ತೆಲಂಗಾಣದ ರಾಜ್ಯ ಪಕ್ಷಿಯು ಹೌದು.

✍️ಆಶ್ಲೇಷ

ಇತ್ತೀಚಿನ ಸುದ್ದಿ

ಜಾಹೀರಾತು