3:54 PM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಬಂಗ್ಲಗುಡ್ಡೆಯಲ್ಲಿ ಉತ್ಖನನ! ಮಾನವ ಮೂಳೆಗಳು ಪತ್ತೆ?

04/08/2025, 19:23

ಧರ್ಮಸ್ಥಳ (reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡದಿಂದ ನಡೆಯುತ್ತಿದ್ದ 11ನೇ ಸ್ಪಾಟ್ ಅಗೆತವನ್ನು ನಿಲ್ಲಿಸಿದ ಎಸ್ಐಟಿ ತಂಡ ಬಂಗ್ಲಗುಡ್ಡದಲ್ಲಿ ಉತ್ಖನನ ಆರಂಭಿಸಿದ್ದು, ಅಲ್ಲಿ ಮಾನವ ಮೂಳೆಗಳು ಲಭ್ಯವಾಗಿದೆ ಎಂಬ ಮಾಹಿತಿ ಹರಿದಾಡಲಾರಂಭಿಸಿದೆ.
ಎಸ್ಐಟಿ ನಡೆಸಿದ ಉತ್ಖನನ ಕಾರ್ಯದಲ್ಲಿ ಸ್ಪಾಟ್ ನಂಬರ್ 6 ಹೊರತುಪಡಿಸಿ ಉಳಿದ ಕಡೆಗಳಲ್ಲಿ ಎಲ್ಲೂ ಮಾನವ ಅಸ್ತಿಪಂಜರದ ಕುರುಹು ಕಂಡು ಬಂದಿಲ್ಲ. ಇಂದು ಆರಂಭದಲ್ಲಿ ಸ್ಪಾಟ್ ನಂಬರ್ 11ರ ಅಗೆತಕ್ಕೆ ಸಿದ್ಧತೆ ನಡೆಸಲಾಗಿದ್ದು, ಆದರೆ ಇದ್ದಕ್ಕಿದ್ದ ಹಾಗೆ ಎಸ್ ಐಟಿ ತಂಡ ದಟ್ಟ ಕಾಡಿನ ಎತ್ತರದ ಪ್ರದೇಶಕ್ಕೆ(ಬಂಗ್ಲಗುಡ್ಡ) ತೆರಳಿ ಉತ್ಖನನ ಕಾರ್ಯ ಆರಂಭಿಸಿದರು. ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಉಪಸ್ಥಿತರಿದ್ದರು. ಎಸ್ಐಟಿ ಟೀಮ್ ನಲ್ಲಿ ಒಂದು ರೀತಿ ಸಂಚಲನ ಮೂಡಿತ್ತು. ನಂತರ ಕಾಡಿನ ಆ ಎತ್ತರದ ಪ್ರದೇಶಕ್ಕೆ ಉಪ್ಪಿನ ಮೂಟೆಯನ್ನು ಒಯ್ಯಲಾಯಿತು. ಇಲ್ಲಿ ಮಾನವ ಅಸ್ತಿಪಂಜರದ ಅವಶೇಷಗಳು ದೊರೆತಿರುವುದು ಬಹುತೇಕ ಖಚಿತಗೊಂಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು