2:55 PM Thursday18 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಡೈಮಂಡ್ ಕ್ಲಬ್ ಆರ್ಟ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಎಲ್ಲೆಡೆ ಹೆಸರುವಾಸಿಯಾಗಲಿ: ಶಿವಕುಮಾರ ಸವದಿ

06/11/2021, 14:34

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಗ್ರಾಮೀಣ ಭಾಗದ ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ನೂತನ ಹೆಜ್ಜೆ ಇಟ್ಟಿದೆ. ಕ್ರಿಕೆಟ್ ಪಟುಗಳಿಗೆ ನುರಿತ ಆಟಗಾರರಿಂದ ತರಬೇತಿ ನೀಡಲು ಅಥಣಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಡೈಮಂಡ್ ಕ್ಲಬ್ ಆರ್ಟ್ ಕಲ್ಚರಲ್ ಆ್ಯಂಡ್  ಸ್ಪೋರ್ಟ್ಸ್ ಕ್ಲಬ್ ಮುಂದಾಗಿದೆ.

ಅಥಣಿ ಪಟ್ಟಣದಲ್ಲಿರುವ ಸುವರ್ಣ ವಿದ್ಯಾಭೂಮಿಯ ಹಿಂದುಗಡೆ ಈ ಸ್ಪೋರ್ಟ್ಸ್ ಕ್ಲಬ್ ಹಾಗೂ ತರಬೇತಿ ಕೇಂದ್ರವನ್ನು ಗಣ್ಯರು ಉದ್ಘಾಟಿಸಿದರು. 

ನಂತರ ಮಾತನಾಡಿದ ಯುವ ಮುಖಂಡ ಶಿವಕುಮಾರ ಸವದಿ, ಗ್ರಾಮೀಣ ಭಾಗದ ಯುವಕರಿಗೆ ಕ್ರೀಡೆಯ ಮಹತ್ವ ತಿಳಿಸುವ ಮೂಲಕ ಅವರಿಗೆ ಗುಣಮಟ್ಟದ ತರಬೇತಿ ನೀಡುವ ನಿಟ್ಟಿನಲ್ಲಿ ಆನಂದ ಮಟಗಾರ ಅವರ ನೇತೃತ್ವದ ಈ ಕ್ಲಬ್ ಎಲ್ಲೆಡೆ ಹೆಸರುವಾಸಿಯಾಗುವಂತಾಗಲಿ ಎಂದು ಶುಭ ಹಾರೈಸಿದರು.


ಸುಸಜ್ಜಿತವಾದ ಕ್ರಿಕೆಟ್ ಮೈದಾನದಲ್ಲಿ ಲೆದರ್ ಬಾಲ್ ಕ್ರಿಕೆಟ್ ತರಬೇತಿ ಪಡೆದ ಕ್ರೀಡಾಳುಗಳು ಉನ್ನತ ಮಟ್ಟದ ಸಾಧನೆ ಮಾಡುವಂತಾಗಿ ಈ ಕ್ರಿಕೆಟ್ ಕ್ಲಬ್   ಹೆಸರುವಾಸಿಯಗಲಿ ಎಂದು ಕ್ಲಬ್ ನ ರೂವಾರಿಗಳಾದ ಆನಂದ ಮಟಗಾರ್, ಮಲ್ಲಪ್ಪ ಗದ್ಯಾಳ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಕ್ರೀಡೆಗಳಲ್ಲಿ ಆಸಕ್ತಿರುವ 8 ರಿಂದ 23 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗಾಗಿ ತರಬೇತಿ ನೀಡಿ ಸಂಪನ್ಮೂಲ ಭರಿತ ಕ್ರಿಡಾಪಟುಗಳನ್ನಾಗುವಂತೆ ಮಾಡುವುದು ಈ ಕ್ಲಬ್ ನ ಮೂಲ ಉದ್ದೇಶವಾಗಿದೆ. ಈಗಾಗಲೇ 26-10- 2021ರಿಂದ ಪ್ರವೇಶಗಳು ಪ್ರಾರಂಭವಾಗಿವೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಅರ್ಹತೆ ಪಡೆದ ನುರಿತ ತರಬೇತುದಾರರಿಂದ 15 ದಿನಗಳಿಗೊಮ್ಮೇ ತರಬೇತಿ ನೀಡುವ ವಿಶೇಷ ಯೋಜನೆ ರೂಪಿಸಲಾಗಿದೆ. ವಾರಕ್ಕೊಮ್ಮೆ ಅಭ್ಯಾಸ ಪಂದ್ಯಗಳನ್ನು ನಡೆಸಿ ಕ್ರೀಡಾಪಟುಗಳಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಲಾಗುತ್ತದೆ.

ಹೀಗೆ ಅನೇಕ ನೂತನ ಆಲೋಚನೆ ಗಳೊಂದಿಗೆ ಈ ಕ್ಲಬ್ ಮುನ್ನಡೆಯುತ್ತಿರುವುದು ತಾಲೂಕಿನ ಕ್ರೀಡಾಳುಗಳಿಗೆ ಹೊಸ ಹುರುಪಿನೊಂದಿಗೆ ತರಬೇತಿ ಪಡೆಯುವಂತಾಗಿದೆ.


ಈ ವೇಳೆಯಲ್ಲಿ ಆನಂದ ಮಟಗಾರ, ಬಸಯ್ಯ ಸ್ವಾಮೀಜಿ, ಮಾರುತಿ ಬಸಗೌಡರ್, ಮಲ್ಲಪ್ಪ ಗದ್ಯಾಳ, ಆಕಾಶ್ ಹೊನ್ನಳ್ಳಿ,ಮಾಂತೇಶ್ ಮಾಳಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು