ಇತ್ತೀಚಿನ ಸುದ್ದಿ
ಡಿ.ಕೆ. ಶಿವಕುಮಾರ್ ರಾಜ್ಯಭಾರ ಶುರು: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ
03/06/2026, 18:07
ಬೆಂಗಳೂರು(reporterkarnataka.com): ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಲೋಕಭವನದ ಗಾಜಿನ ಮನೆ ವೇದಿಕೆಯಲ್ಲಿ ನಡೆದ ಸರಳ, ಸಂಭ್ರಮದ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ನೆರವೇರಿಸಲಾಯಿತು.
ತಾನು ಬಹಳ ಪ್ರೀತಿಸುವ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಸಂಜೆ 4.05 ಗಂಟೆಗೆ ಸರಿಯಾಗಿ ವೇದಿಕೆಯಲ್ಲಿ ಧೀರ್ಘ ದಂಡ ನಮಸ್ಕಾರ ಮಾಡಿ, ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯ ಪಾಲ ಗೆಹ್ಲೋಟ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಮಲ್ಲಿಕಾಜು೯ನ ಖಗೆ೯, ರಣದೀಪ್ ಸುಜಿ೯ವಾಲ, ಕೇರಳಂ ಸಿಎಂ ವಿ.ಡಿ. ಸತೀಶ್, ಕೆ.ಸಿ. ವೇಣುಗೋಪಾಲ್, ನಿಕಟಪೂವ೯ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪ್ರಮುಖರು, ವಿವಿಧ ಧರ್ಮ ಗುರುಗಳು, ಸಿನಿ ತಾರೆಯರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಕಾಯಕತ೯ರ ಹಷೋ೯ದ್ಘಾರದ ನಡುವೇ ಮುಖ್ಯಮಂತ್ರಿಯಾಗಿ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡಿದರು.
ಕೊಡಗಿನ ಶಾಸಕಧ್ವಯರಾದ ಎ. ಎಸ್. ಪೊನ್ನಣ್ಣ ಮತ್ತು
ಡಾ.ಮಂಥರ್ ಗೌಡ ಅವರು ನೂತನ ಮುಖ್ಯಮಂತ್ರಿ ಗೆ ಅಭಿನಂದನೆ ಸಲ್ಲಿಸಿದರು.
ಕೊಡಗಿನಲ್ಲಿ ಎಲ್ ಇ ಡಿ ಪರದೆಯ ಮೂಲಕ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾಯ೯ಕ್ರಮವನ್ನು ಕಾಂಗ್ರೆಸ್ಸಿಗರು ವೀಕ್ಷಿಸಿದರು.
ಏಕೈಕ ಉಪ ಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್ ಪದಗ್ರಹಣ ಮಾಡಿದರು.
ಕಾರ್ಯಕ್ರಮಕ್ಕೆ ಮುನ್ನ ವಂದೇ ಮಾತರಂ ಮತ್ತು ನಾಡಗೀತೆ, ಪೊಲೀಸ್ ಬ್ಯಾಂಡ್ ಗೆ ಗೌರವ ಸಲ್ಲಿಸಲಾಯಿತು.












