ಇತ್ತೀಚಿನ ಸುದ್ದಿ
ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ರಾಜೀನಾಮೆ: ನೂತನ ಪಕ್ಷ ಸ್ಥಾಪನೆ?
02/06/2026, 19:15
ಚೆನ್ನೈ(reporterkarnataka.com): ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ವರಿಷ್ಟರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯ ಸಭೆಯ ಸದಸ್ಯರನ್ನಾಗಿಸುವ ಆಫರ್ ನಿರಾಕರಿಸಿದ ಅಣ್ಣಾಮಲೈ ಪಕ್ಷ ತೊರೆದಿದ್ದಾರೆ. ಎರಡು ವಷ೯ಗಳ ಹಿಂದೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು. ಈ ಮೊದಲು ಕನಾ೯ಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಕಾಯ೯ನಿವ೯ಹಿಸಿ ಜನಪ್ರಿಯರಾಗಿದ್ದರು.
ಬಿಜೆಪಿ ಮುಖಂಡರ ಧೋರಣೆಯಿಂದ ಹತಾಶೆಗೊಳಗಾಗಿ ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ತಮಿಳುನಾಡಿನಲ್ಲಿ ಸ್ವಂತ ಪಕ್ಷವನ್ನು ಕಟ್ಟುವ ನಿಧಾ೯ರ ಅಣ್ಣಾಮಲೈ ಕೈಗೊಂಡಿದ್ದಾರೆ.
ಜೆನ್ ಜೀ ಪೀಳಿಗೆ ಸೇರಿದಂತೆ ತಮಿಳುನಾಡಿನಲ್ಲಿ ಯುವಪೀಳಿಗೆಯ ಬೆಂಬಲ ಹೊಂದಿರುವ ಅಣ್ಣಾಮಲೈ ಅವರು 5 ಪುಟಗಳ ಸುಧೀಘ೯ ಪತ್ರವನ್ನು ಹೈಕಮಾಂಡ್ ಗೆ ಸಲ್ಲಿಸಿದ್ದಾರೆ. ಅಣ್ಣಾಮಲೈ ರಾಜೀನಾಮೆಯಿಂದ ತಮಿಳುನಾಡಿನಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಶಾಕ್ ನೀಡಿದಂತಾಗಿದೆ.












