ಇತ್ತೀಚಿನ ಸುದ್ದಿ
ಬಿಜೆಪಿ ಮುಖಂಡನ ದಾದಾಗಿರಿ: ಗದ್ದೆಯಲ್ಲಿ ನೀರು ನಿಲ್ಲುತ್ತದೆಯೆಂದು ರಸ್ತೆಯನ್ನೇ ಅಗೆದ ಜಿಪಂ ಮಾಜಿ ಸದಸ್ಯ!
30/08/2022, 23:36
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ತನ್ನ ಗದ್ದೆಯಲ್ಲಿ ನೀರು ನಿಲ್ಲುತ್ತೆ ಅಂತ ಬಿಜೆಪಿ ಮುಖಂಡರೊಬ್ಬರು ರಸ್ತೆಯನ್ನೇ ಅಗೆದು ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೆಗುಣಶಿ- ಯಬರಟ್ಟಿ ಗ್ರಾಮದಲ್ಲಿ ನಡೆದಿದೆ.
ಪೈಪ್ ಲೈನ್ ಬ್ಲಾಕ್ ಆಗಿದ್ದಕ್ಕೆ ಕಳೆದ ಒಂದು ವಾರದ ಹಿಂದೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಮ್ಮಣ್ಣ ತೇಲಿ ರಸ್ತೆ ಅಗೆದಿದ್ದರು. ಜಿಲ್ಲಾ ಪಂಚಾಯಿತಿನ ಮಾಜಿ ಸದಸ್ಯನ ಅಂಧಾ ದರ್ಬಾರ್ ಗೆ ಸ್ಥಳೀಯರು ಬೆಚ್ಚಿ ಹೋಗಿದ್ದಾರೆ.
ತಮ್ಮಣ್ಣ ಅವರು ಶೇಗುಣಶಿ – ಯಬರಟ್ಟಿ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಅಗೆದಿದ್ದರು.
ನೀರು ಪಾಸ್ ಆಗಲೆಂದು ಕೆಳಗೆ ಪೈಪ್ ಲೈನ್ ಅವಳವಡಿಸಿ ಅಧಿಕಾರಿಗಳು ಮೇಲೆ ರಸ್ತೆ ಮಾಡಿದ್ದರು. ಯಾರೋ ಕಿಡಿಗೇಡಿಗಳು ಪೈಪ್ ಒಳಗೆ ಕಲ್ಲು ಹಾಕಿದ್ದರಿಂದ ಪೈಪ್ ಲೈನ್ ಬ್ಲಾಕ್ ಆಗಿತ್ತು.
ಪೈಪ್ ಲೈನ್ ಬ್ಲಾಕ್ ಆಗಿದ್ದಕ್ಕೆ ಕಳೆದ ಒಂದು ವಾರದ ಹಿಂದೆ ತಮ್ಮಣ್ಣ ರಸ್ತೆ ಅಗೆದಿದ್ದರು.



ತಮ್ಮಣ್ಣನ ನಡೆಯಿಂದ ಎರಡೂ ಗ್ರಾಮದ ಜನರು ಬೇಸತ್ತು ಹೋಗಿದ್ದಾರೆ. ಶೆಗುಣಶಿ ಹಾಗೂ ಯಬರಟ್ಟಿ ಗ್ರಾಮಗಳ ಜನರು ಕಳೆದ ಒಂದು ವಾರದಿಂದ ಸಂಪರ್ಕ ಸಾಧ್ಯವಾಗದೆ ಪರದಾಟ ನಡೆಸುತ್ತಿದ್ದಾರೆ.













