5:34 PM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

ಕತಾರ್ ನ “ತುಳು ಜಾತ್ರೆ” ಯಲ್ಲಿ ಮಿಂಚಿದ ಬಿಲ್ಲವಾಸ್ ಕತಾರ್ ನ “ಅಮ್ಮನ ತಮ್ಮನ” ತಂಡ

20/02/2025, 21:33

ದೋಹಾ(reporterkarnataka.com): ‘ತುಳು ಕೂಟ ಕತಾರ್’ ಆಶ್ರಯದಲ್ಲಿ “ತುಳು ಜಾತ್ರೆ” “ಐಡಿಯಲ್ ಇಂಡಿಯನ್ ಸ್ಕೂಲ್”, ಕತಾರ್ ನ ರಂಗವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು. ತುಳುವರ ಪಾರಂಪರಿಕ ಪರಿಕಲ್ಪನೆ “ತುಳು ಜಾತ್ರೆ” ಯ ಅಂಗವಾಗಿ ನೃತ್ಯ,ಯಕ್ಷಗಾನ, ಪ್ರತಿಭಾ ಪುರಸ್ಕಾರ, ಜಾನಪದ ಆಟಗಳು ಮತ್ತು ವಿವಿಧ ತುಳು ನಾಡಿನ ತಿನಿಸುಗಳ ಪ್ರದರ್ಶನಗೊಂಡಿತು. ಸಾವಿರಗಟ್ಟಲೆ ಜನರು ಭಾಗವಹಿಸಿ ತಮ್ಮ ಊರಿನ ಜಾತ್ರೆಯ ಆನಂದವನ್ನು ಕತಾರ್ ನ ಮಣ್ಣಿನಲ್ಲಿ ಅನುಭವಿಸಿದರು.
ಬಿಲ್ಲವಾಸ್ ಕತಾರ್ ನ ಅವಿಭಾಜ್ಯ ಅಂಗವಾದ “ಅಮ್ಮನ ತಮ್ಮನ” ತಂಡದವರು ವಿಶೇಷವಾದ ಆಕರ್ಷಣೆಯೊಂದಿಗೆ ಎಲ್ಲರಿಗಿಂತ ವಿಭಿನ್ನವಾಗಿ ತಮ್ಮ ತಿನಿಸಂಗಡಿಯನ್ನು ಅಲಂಕಾರ ಮಾಡಿದ್ದು ಹಾಗೂ ವಿಶೇಷವಾಗಿ ಮನೆಯಲ್ಲಿ ಸಿದ್ದಪಡಿಸಿದ ಅಡುಗೆ ಜನರ ಮನ ತಣಿಸುವುದರೊಂದಿಗೆ ಭಾರೀ ಮನ್ನಣೆಯನ್ನು ಪಡೆಯುವಲ್ಲಿ ಸಾರ್ಥಕವಾಯಿತು.
ತುಳು ಜಾತ್ರೆಯಲ್ಲಿ ಪ್ರತೀ ಭಾರಿ ವಿಭಿನ್ನ ರೀತಿಯಲ್ಲಿ ಕಂಗೊಳಿಸುವ “ಅಮ್ಮನ ತಮ್ಮನ” ತಂಡದ ಇದು ಮೂರನೆಯ ವರ್ಷದ ಪ್ರದರ್ಶನವಾಗಿದೆ ಎನ್ನುವುದು ಉಲ್ಲೇಖನೀಯ.
ಈ ಭಾರಿಯ ರುಚಿ ರುಚಿ ಅಡುಗೆ ಮತ್ತು ತಂಡದ ಸರ್ವಾಂಗೀಣ ಪ್ರದರ್ಶನಕ್ಕೆ ಮನ ಸೋತ ತುಳು ಕೂಟ ಕತಾರ್, “ಅಮ್ಮನ ತಮ್ಮನ” ತಂಡದವರನ್ನು ಅತ್ಯುತ್ತಮ ತಂಡವೆಂದು ಘೋಷಿಸಿ ಪ್ರಶಸ್ತಿಯನ್ನಿತ್ತು ಮನ್ನಿಸಿತು. “ಅಮ್ಮನ ತಮ್ಮನ” ತಂಡದವರ ಪರಿಶ್ರಮಕ್ಕೆ ಸಂದ ಸಮಯೋಚಿತ ಗೌರವವಿದು.

ಇತ್ತೀಚಿನ ಸುದ್ದಿ

ಜಾಹೀರಾತು