10:08 PM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಅಂತರಗಂಗೆ ಆರಾಧ್ಯ ದೈವ ದುರ್ಗಾದೇವಿ ಜಾತ್ರಾ ಮಹೋತ್ಸವ: ಸಂಭ್ರಮದ ಸಮಾಪನ

11/06/2021, 07:18

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ  ಆರಾಧ್ಯ ದೈವ ದುರ್ಗಾದೇವಿ ಜಾತ್ರಾ ಮಹೋತ್ಸವ ಅತಿ ಸರಳ ಹಾಗೂ ವಿಜ್ರಂಭಣೆಯಿಂದ ಜರುಗಿತು.

ಕೋವಿಡ್ 19 ಅಲೆ ಇರುವುದರಿಂದ ಸರಕಾರದ ಆದೇಶದ ಪ್ರಕಾರ ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಕಡಿಮೆ ಜನರ ಮಧ್ಯೆ ಸಡಗರ ಸಂಭ್ರಮದಿಂದ ಜಾತ್ರೆ ಮಾಡಲಾಯಿತು. ಈ ಭಾಗದ ಆರಾಧ್ಯ ದೈವ ದುರ್ಗಾದೇವಿ ಜಾತ್ರೆ ವಿಶೇಷವಾಗಿ ಐದು ವರ್ಷಕ್ಕೊಮ್ಮೆ ಆಗುತ್ತದೆ. 

ಪ್ರತಿವರ್ಷ ಬೇರೆ ಬೇರೆ ಜಿಲ್ಲೆಗಳಿಂದ ಬೇರೆ ಬೇರೆ ತಾಲೂಕುಗಳಿಂದ ಭಕ್ತರು ಆಗಮಿಸುತ್ತಿದ್ದರು. ಆದರೆ ಲಾಕ್ ಡೌನ್ ಇರುವುದರಿಂದ ಭಕ್ತಾದಿಗಳಿಗೆ ದೂರದಿಂದ ಬರುವವರಿಗೆ ಮನಸ್ಸಿನಲ್ಲಿ ದೇವರನ್ನು ಪ್ರಾರ್ಥಿಸಿ ಮನೆಯಲ್ಲಿ ಜಾತ್ರೆ ಮಾಡಿ ಎಂದು ಸ್ವಾಮೀಜಿ  ತಿಳಿಸಿದ್ದರು. ಈ ಜಾತ್ರೆಯು 7 ಗ್ರಾಮಗಳ ಗೌಡರ ಬಂದಮೇಲೆ ಜಾತ್ರೆಯಂತೆ. ಬೈಲಗುಡ್ಡ, ಮೆದಿಕಲ್, ಮ್ಯಾದರಾಳ, ಅಂತರಗಂಗೆ ತಾಂಡ, ಅಂತರಗಂಗೆ, ನಾಗರಬೆಂಚಿ ಸುತ್ತಮುತ್ತಲ ಭಕ್ತಾದಿಗಳು ದುರ್ಗಾದೇವಿ ಕೃಪೆಗೆ ಪಾತ್ರರಾಗಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ.

ಅದ್ದೂರಿ ಸರಳ ರೀತಿಯ ಇಂದು ಜಾತ್ರೆ ನೆರವೇರಿತು. ಈ ಜಾತ್ರೆ ಬಳ್ಳಾರಿ ದುರ್ಗಮ್ಮ ಬಂದು ಇಲ್ಲಿ ನಡೆಸಿದ್ದಾಳೆ ಎಂದು ಮೂಲ ಇತಿಹಾಸದಲ್ಲಿ ಇದೆ. ಈ ಗುಡಿಯ ಮುಂದೆ ಬೇವಿನ ಗಿಡ 120 ವರ್ಷ ಹಳೆಯದಾಗಿದೆ.ಅಪರೂಪದ ಆ ಗಿಡವನ್ನು ದೇವಿ ಕಾಪಾಡಿಕೊಂಡು ಬಂದಿದ್ದಾಳೆಂದು ಹಿರಿಯರು ಹೇಳುತ್ತಾರೆ. ಬಳ್ಳಾರಿ ದುರ್ಗಮ್ಮ ಲಿಂಗಸುಗೂರು ಕೋರ್ಟಿನಲ್ಲಿ ಒಂದು ಕುರ್ಚಿ ದುರ್ಗಾ ಮಳೆಗಾಗಿ ಖಾಲಿ ಇದೆ ಎಂದು ಇತಿಹಾಸದಲ್ಲಿದೆ 


ಅಂತರಗಂಗೆ ಅಮರಪ್ಪ ಸಾಹುಕಾರ್ ರಾಯಚೂರಿನ ವಾಸವಾಗಿರು ಅವರು ಈಗ ನೇತಾಜಿ ಪಟೇಲ್ ಬಜಾರ್ ಬಂಗಾರದ ಅಂಗಡಿ ನಡೆಸುತ್ತಾ ಇದ್ದಾರೆ. ಅವರ ತಂದೆ ಅಮರಪ್ಪ ಸೌಕಾರ್ ದುರ್ಗಾದೇವಿ ಕನಸಿನಲ್ಲಿ ಬಂದು ನನಗೆ ಇರಲು ಗುಡಿ ಕಟ್ಟಿಸಿ ಕೊಡು ಎಂದು ಹೇಳಿ ಅದೃಶ್ಯಳಾದಳು. ದೇವಿ ಹೇಳಿದ ಪ್ರಕಾರ ಅವರು ಗುಡಿ ಕಟ್ಟಿ ಕೊಟ್ಟರು.

ಕ್ರಮೇಣ ಒಂದು ಸಮಯದಲ್ಲಿ ಅವರಿಗೆ ಆಕ್ಸಿಡೆಂಟ್ ಆದಾಗ ಸ್ಥಳದಲ್ಲಿ ಯಾರು ಇರಲಿಲ್ಲ. ಆ ವೇಳೆ ಈ ದುರ್ಗಮ್ಮ ಕರೆದುಕೊಂಡು ಆಸ್ಪತ್ರೆ ಚಿಕಿತ್ಸೆ ಬಂದು ಆರಾಮ್ ಆಗುತ್ತೆ ಏನು ಆಗುವುದಿಲ್ಲ ಎಂದು ಅದೃಶ್ಯಳಾದಳು ಎಂಬ ಐತಿಹ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು