7:30 AM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಸ್ವಾಮಿ, ಇದು ಕಾರು ರೇಸ್ ಅಲ್ಲ, ವಿರಾಜಪೇಟೆ ಬಳಿ ನಡೆದ ಲೈವ್ ಆಕ್ಸಿಡೆಂಟ್; ಓವರ್ ಸ್ಪೀಡಿಗೆ 4 ವಾಹನಗಳು ಅಪಘಾತ!

30/06/2025, 10:44

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಒಂದು ಇನ್ನೋವಾ ಕಾರು ಸಂಪೂರ್ಣ ನಿಯಂತ್ರಣ ಕಳೆದುಕೊಂಡು ಕಾಫಿ ತೋಟದಲ್ಲಿ ಪಲ್ಟಿ, ಈ ಅವಘದ ಸಂಭವಿಸಿ ಸ್ವಲ್ಪ ಹೊತ್ತಿನಲ್ಲೇ ಅದೇ ತಿರುವುನಲ್ಲಿ ಮೂರು ಕಾರುಗಳು ಒಂದರ ಹಿಂದೆ ಒಂದು ವೇಗವಾಗಿ ಬಂದು ಡಿಕ್ಕಿ. ಹೌದು ಇದು ಯಾವುದೇ ಕಾರ್ ರೇಸ್ ನ ಚಿತ್ರಣವಲ್ಲ ಬದಲಾಗಿ ಕೇರಳಿಗರ ಓವರ್ ಸ್ಪೀಡ್ ಚಾಲನೆಯಿಂದ ಕಂಡು ಬಂದ ಬೆಚ್ಚಿ ಬೀಳಿಸುವ ಅಪಘಾತ ದ ದೃಶ್ಯ..!!!



ವಿರಾಜಪೇಟೆಯ ಆರ್ಜಿ ಗ್ರಾಮದ ಪೆರಂಬಾಡಿ ಕೊರಗಜ್ಜ ದೇವಾಲಯದ ಸಮೀಪ ಕಳೆದ ರಾತ್ರಿ ಇಲ್ಲಿನ ತಿರುವಿನಲ್ಲಿ ನಾಲ್ಕು ವಾಹನಗಳು ಅಪಘಾತಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಕೇರಳ ನೊಂದಣಿ ಹೊಂದಿದ ವಾಹನಗಳು ವೇಗವಾಗಿ ಇಲ್ಲಿ ಚಲಿಸುವುದರಿಂದ, ಹಾಗೂ ವಾಹನಗಳಿಗೆ ಅಳವಡಿಸಲಾಗಿರುವ ಹೈ ಭೀಮ್ ಲೈಟ್ಗಳಿಂದ ಹಿಂಭಾಗದಲ್ಲಿ ಬರುವ ವಾಹನಗಳಿಗೆ ಮುಂದೆ ರಸ್ತೆ ಕಾಣದೆ ಈ ಭಾಗದಲ್ಲಿ ರಾತ್ರಿ ಸಮಯದಲ್ಲಿ ಬಹಳಷ್ಟು ಅಪಘಾತಗಳು ನಡೆಯುತ್ತಿದೆ ಎಂದು ಹೇಳಲಾಗಿದೆ.ಸದ್ಯ ನಾಲ್ಕು ಕಾರುಗಳಲ್ಲಿ ಇದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು