ಇತ್ತೀಚಿನ ಸುದ್ದಿ
ಕಾಟಿಪಳ್ಳ 3ನೇ ವಾರ್ಡ್ ನಲ್ಲಿ 10 ಲಕ್ಷ ವೆಚ್ಚದ ರಸ್ತೆ ಉದ್ಘಾಟನೆ: 10 ಲಕ್ಷ ವೆಚ್ಚದ ಕಾಮಗಾರಿ ಗುದ್ದಲಿ ಪೂಜೆ
08/12/2024, 20:13

ಸುರತ್ಕಲ್(reporterkarnataka.com): ಕಾಟಿಪಳ್ಳ ವಾರ್ಡ್ 3ರಲ್ಲಿ 10 ಲಕ್ಷ ವೆಚ್ಚದ ರಸ್ತೆ ಕಾಮಗಾರಿಯ ಉದ್ಘಾಟನೆ ಮತ್ತು 10 ಲಕ್ಷದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕ ಡಾ.ವೈ ಭರತ್ ಶೆಟ್ಟಿ ನೆರವೇರಿಸಿದರು.
ಕಾಟಿಪಳ್ಳ 3ನೇ ವಾರ್ಡ್ ವಾರ್ಡ್ ವ್ಯಾಪ್ತಿಯ ವಾಸುಕಿ ನಗರ 3ನೇ ಅಡ್ಡರಸ್ತೆಯ 10ಲಕ್ಷದ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು ವಾಸುಕಿ ನಗರ ದ ಬಳಿ 10 ಲಕ್ಷದ ರಸ್ತೆ ಕಾಮಗಾರಿಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಮತ್ತು ಸ್ಥಳೀಯ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ಅವರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ವಾರ್ಡ್ ಅಧ್ಯಕ್ಷ ಶಾಂತಕುಮಾರ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ ದಿನಕರ್ ಇಡ್ಯಾ, ಎಸ್ ಸಿ ಮೋರ್ಚಾ ಮಂಡಲ ಅಧ್ಯಕ್ಷ ಹರೀಶ್ ಪಣಂಬೂರು, ಮಹಿಳಾ ಮೋರ್ಚಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಪ್ನಾ ಸುನಿಲ್, ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾ ಸದಸ್ಯರು ಪ್ರೇಮ್ ಡಿಸೋಜ, ಮಂಡಲ ಸದಸ್ಯರಾದ ಶೈಲಜಾ ಗಣೇಶ್ ಕಟ್ಟೆ ಬಿಜೆಪಿ ಪ್ರಮುಖರಾದ ಗಣೇಶ್, ಆರತಿ ಕಾರ್ಯಕರ್ತರು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.