10:19 AM Thursday30 - April 2026
ಬ್ರೇಕಿಂಗ್ ನ್ಯೂಸ್
ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಇತ್ತೀಚಿನ ಸುದ್ದಿ

ಹೊಸ್ಮಾರುವಿನಲ್ಲಿ ಕಾಂಪ್ಲೆಕ್ಸ್‌ಗೆ ಪ್ರಥಮ ಬಾರಿ ತುಲುಲಿಪಿ ನಾಮಫಲಕ

22/08/2021, 18:08

ಹೊಸ್ಮಾರು(reporterkarnataka.com); ರವೀಂದ್ರ ಪೂಜಾರಿ ಮಾಲಿಕತ್ವದ ಹೊಸ್ಮಾರು ಈದು ಕ್ರಾಸ್ ಬಳಿಯಿರುವ ಮನ್ವಿತ್ ಕಾಂಪ್ಲೆಕ್ಸ್‌ಗೆ ಜೈ ತುಲುನಾಡ್ ರಿ. ಸಂಘಟನೆ ಕಾರ್ಲ ಘಟಕದ ಸಹಕಾರದೊಂದಿಗೆ ತುಲು ಲಿಪಿಯಲ್ಲಿ ನಾಮಫಲಕ ಅಳವಡಿಸಲಾಯಿತು.


ಈದು ಗ್ರಾಮದಲ್ಲಿ ಪ್ರಥಮ ಬಾರಿ ಕಾಂಪ್ಲೆಕ್ಸ್‌ಗೆ ತುಲುಲಿಪಿ ಅಳವಡಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು. ರವೀಂದ್ರ ಪೂಜಾರಿಯವರು ತುಲುಲಿಪಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು ತಾನು ಹೊರ ದೇಶದಲ್ಲಿದ್ದರೂ ಕೂಡ ತುಲು ಲಿಪಿಯನ್ನು ಕಲಿಯುತ್ತಿದ್ದಾರೆ ಮತ್ತು ಅವರ ಪತ್ನಿ ಮಕ್ಕಳು ತುಲುಲಿಪಿಯನ್ನು ಕಲಿಯುತ್ತಿದ್ದಾರೆ.

ನಾಮ ಫಲಕದ ಉದ್ಘಾಟನೆಯನ್ನು ಪೂರ್ಣಿಮಾ ರವೀಂದ್ರ ಪೂಜಾರಿ ನೆರೆವೇರಿಸಿದರು. ಈ ಸಂದರ್ಭದಲ್ಲಿ ಜೈ ತುಲುನಾಡ್ ರಿ. ಕೇಂದ್ರ ಸಂಘಟನಾ ಕಾರ್ಯದರ್ಶಿ ಆರ್‌.ಸಿ   ದುರ್ಗಾನಗರ, ಕಾರ್ಲ ಯುನಿಟ್‌ನ ಸಂಚಾಲಕರಾದ ವಿಶು ಶ್ರೀಕೇರ, ಶೇಖರ್ ಶ್ರೀಗಂಗೆ, ನಾರಾವಿ  ಸಂತ ಅಂತೋನಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರದೀಪ್ ಬಿ.

ಹಾಗೂ ಸದಸ್ಯರಾದ ಪ್ರಶಾಂತ್ ಶ್ರೀನಿಧಿ, ಪ್ರೀತಂ ಕೋಟ್ಯಾನ್ ಬಜಗೋಳಿ, ದಿವಾಕರ್ ಈದು, ಗಣೇಶ್ ಈದು, ಲಕ್ಮೀ , ಹೋಟೆಲ್ ನ್ಯೂ ಸುರಕ್ಷಾ ಮಾಲಕರಾದ ಗುಲಾಬಿ ಗೋಪಾಲ್, ಶೃಂಗಾರ ಪ್ಯಾನ್ಸಿ& ಪಾರ್ಲರ್ ಮಾಲಕರಾದ ವೀಣಾ ಸತೀಶ್ ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು