8:37 PM Saturday19 - July 2025
ಬ್ರೇಕಿಂಗ್ ನ್ಯೂಸ್
ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ… ಮಂಗಳೂರು – ಬೆಂಗಳೂರು 4 ತಾಸಿನ ಆಂಬುಲೆನ್ಸ್ ಪ್ರಯಾಣ!: ಹೃದಯ ಕಾಯಿಲೆಯ 14… ವಿದ್ಯುತ್ ಶಾಕ್: ಲೈನ್ ಮ್ಯಾನ್ ದಾರುಣ ಸಾವು; ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ… ರಾಹುಲ್ ಗಾಂಧಿಯ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ…

ಇತ್ತೀಚಿನ ಸುದ್ದಿ

ಬಹುಕೋಟಿ ಯೋಜನೆಯಾದ ಮಂಗಳೂರು ಕುಲಾಲ ಭವನದ ಬ್ಯಾಂಕ್ವೆಟ್ ಹಾಲ್ ಗೆ ಮುಹೂರ್ತ

15/03/2024, 10:20

ಮಂಗಳೂರು(reporterkarnataka.com): ಮುಂಬಯಿ ಕುಲಾಲ ಸಂಘದ ಬಹುಕೋಟಿ ವೆಚ್ಚದ ಯೋಜನೆಯಾದ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿ ನಿರ್ಮಿಸುತ್ತಿರುವ ಕುಲಾಲ ಭವನದ 4ನೇ ಮಹಡಿಯಲ್ಲಿ ನಿರ್ಮಾಣವಾಗಲಿರುವ ನಮ್ರತಾ ಜಗದೀಶ್ ರಾಮ ಬಂಜನ್ ಬ್ಯಾಂಕ್ವೆಟ್ ಹಾಲ್ ಮತ್ತು ಪಿ. ಕೆ. ಸಾಲ್ಯಾನ್ ವೇದಿಕೆಯ ಮುಹೂರ್ತ ಸಮಾರಂಭ ಮಾ. 8ರಂದು ಬೆಳಿಗ್ಗೆ ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ರಘು ಎ. ಮೂಲ್ಯ ಪಾದೆಬೆಟ್ಟು ಅವರ ಉಪಸ್ಥಿತಿಯಲ್ಲಿ ನಡೆಯಿತು.
ಶ್ರೀ ವೀರನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಜನಾರ್ಧನ್ ಭಟ್ ಅವರ ಪುರೋಹಿತ್ವದಲ್ಲಿ ವೈದಿಕ ವಿಧಿ ವಿಧಾನಗಳು ನಡೆದವು. ಬಳಿಕ ನಡೆದ ಸಭಾ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಘು ಮೂಲ್ಯ ಅವರು, ಭವನದ ಕೆಲಸ ಈ ವರ್ಷ ಪೂರ್ತಿಗೊಳಿಸಿ ಲೋಕಾರ್ಪಣೆಯಾಗಬೇಕೆಂಬ ಸಂಕಲ್ಪ ನಾವು ಮಾಡಿದ್ದೇವೆ. ಅದಕ್ಕೆ ಮುಂಬಯಿ ಕಮಿಟಿ ಮತ್ತು ಊರಿನ ವಿವಿಧ ಕುಲಾಲ ಸಂಘದ ಸದಸ್ಯರು ಕೈ ಜೋಡಿಸಿ ಸಹಕಾರ ಕೊಡುತ್ತೀರಿ ಎಂಬ ಭರವಸೆ ಇದೆ. ಹೊರನಾಡಿನ ಸಮಾಜ ಬಾಂಧವರ ಹಾಗೂ ಅಭಿಮಾನಿಗಳ ಸಹಕಾರ ಕೂಡ ನಮಗೆ ಅಗತ್ಯವಾಗಿದೆ ಎಂದು ನುಡಿದರು.
ಮುಂಬಯಿ ಕುಲಾಲ ಸಂಘ ಯೋಜನೆಯಾದ ಕುಲಾಲ ಭವನ ಮಂಗಳೂರು ಈ ಭವ್ಯ ಭವನದ ಮೇಲ್ಛಾವಣಿಯ ಕೆಲಸದ ಮುಹೂರ್ತ ಪೂಜೆ ಮಹಾ ಶಿವರಾತ್ರಿಯ ಶುಭ ದಿನ ಮಾ. 8ರಂದು ಭವನದ ಮೇಲ್ಛಾವಣಿಯಲ್ಲಿ ನಡೆಯಿತು. ನಮ್ರತಾ ಹಾಗೂ ಜಗದೀಶ್ ರಾಮ ಬಂಜನ್ ಹೆಸರಿನ ಈ ಬ್ಯಾಂಕ್ವೆಟ್ ಹಾಲ್ ನ ಕೆಲಸ ಅತೀ ಶೀಘ್ರದಲ್ಲಿ ಪೂರ್ಣಗೊಳ್ಳುವಂತೆ ಮತ್ತು ಇದರಿಂದ ನಾವು ಊಹಿಸಿದಕ್ಕಿಂತ ಹೆಚ್ಚು ಲಾಭಾಂಶ ಬಂದು ಉತ್ತರೋತ್ತರ ಅಭಿವೃದ್ಧಿ ಹೊಂದಿ ಹೆಚ್ಚು ನಮ್ಮ ಜನರಿಗೆ ಸಹಕಾರವಾಗುವಂತಹ ಕೆಲಸವು ನಮ್ಮ ಕುಲಾಲರಿಂದ ನಡೆದು ಈ ಸಮುದಾಯ ಇನ್ನಷ್ಟು ಅಭಿವೃದ್ಧಿ ಹೊಂದಲಿ, ಎಂದು ವೀರನಾರಾಯಣ ದೇವಸ್ಥಾನದ ಪ್ರಮುಖ ಪುರೋಹಿತರಾದ ಶ್ರಿ ಜನಾರ್ದನ ಭಟ್ ಅವರು ಆಶೀರ್ವದಿಸಿದರು.
ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಮಯೂರ್ ಉಳ್ಳಾಲ್ ಅವರು ಮಾತಾಡಿ, ನಮ್ಮ ಮುಂಬಯಿ ಕುಲಾಲ ಭವನ ಆದಷ್ಟು ಬೇಗ ಲೋಕಾರ್ಪಣೆಯಾದರೇ ಇದರ ಸಂಭ್ರಮವೂ ಸುವರ್ಣಾಕ್ಷರದಲ್ಲಿ ಬರೆಯುವಂತಾಗಲಿದೆ. ಯಾಕೆಂದರೆ ನಮ್ಮ ಕುಲಾಲಾರ ಸಂಘವು ಪ್ರತಿಯೊಂದು ಜಾಗದಲ್ಲಿ ಕಂಡು ಬರುತ್ತದೆ . ಈಗ ನಮ್ಮ ವೀರನಾರಾಯಣ ದೇವಸ್ಥಾನ ಹೇಗೆ ವೈಭವ ರೀತಿಯಲ್ಲಿ ಕಾಣುತ್ತದೆಯೋ, ಹಾಗೆಯೇ ನಮ್ಮ ಈ ಕುಲಾಲ ಭವನ ಬಹಳ ವೈಭವ ರೀತಿಯಲ್ಲಿ ಕಾಣುತ್ತದೆ ಎಂಬುವುದಕ್ಕೆ ಯಾವ ಸಂದೇಹವೂ ಇಲ್ಲ. ಇದಕ್ಕೆ ಈಗ ಹೆಚ್ಚು ಹೊರನಾಡಿನಿಂದಲೂ ಹೆಚ್ಚು ಪ್ರೇರಣೆ ಸಿಗಬಹುದು. ನಮ್ಮ ಊರಿನ ಕುಲಾಲರು ಹಾಗೂ ಮುಂಬಯಿ ಕುಲಾಲರು ಒಗ್ಗಟ್ಟಿನಿಂದ ಸಹಕಾರ ಮಾಡುವವರಿದ್ಧೇವೆ ಎಂದು ತುಂಬು ಹೃದಯದಿಂದ ತನ್ನ ಅನಿಸಿಕೆಯನ್ನು ವ್ಯಕ್ತ ಪಡಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವೀರನಾರಾಯಣ ಸೇವಾ ಟ್ರಸ್ಟ್ ಕುಲಶೇಖರ ಮಂಗಳೂರು ಇದರ ಕಾರ್ಯಾಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್ ಮಾತನಾಡಿ, ಮುಂಬಯಿಯ ಸಮಾಜ ಬಾಂಧವರ ಕನಸಿನ ಯೋಜನೆ ಅಂತಿಮ ಹಂತದಲ್ಲಿದ್ದು, ನಾವೆಲ್ಲರೂ ಸೇರಿ ಕುಲಾಲ ಭವನವನದ ಕೆಲಸ ಬೇಗನೆ ಸಂಪೂರ್ಣ ಗೊಳಿಸಲು ಕ್ರೀಯಾಶೀಲರಾಗೋಣ ಎಂದರು.
ಮುಂಬೈಯ ಉದ್ಯಮಿ, ದಾನಿ ಸುನಿಲ್ ಆರ್. ಸಾಲಿಯಾನ್, ಮಾತನಾಡಿ, ಮುಂಬಯಿಯ ಕುಲಾಲ ಸಂಘ ಹಾಗೂ ಊರಿನ ವೀರನಾರಾಯಣ ದೇವಸ್ಥಾನ ವೆಂದರೆ ಬಹಳ ಅಭಿಮಾನ ಇದರಿಂದಾಗಿ ಇಂದು ಸಮಾಜ ಬಾಂಧವನ್ನು ನನ್ನನ್ನು ಗುರುತಿಸುವಂತಾಗಿದೆ. ಇವರಿಗೆ ನಾನೂ ಸದಾ ಸಹಕಾರಿಯಾಗಿರುವೆನು ಎಂದರು.
ಮಂಗಳೂರು ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕುಲಾಲ್ ಮಂಗಳಾದೇವಿ ಮಾತನಾಡಿ, ಮಂಗಳೂರಿನಲ್ಲಿ ಇಷ್ಟು ವಿಶಾಲವಾದ ಸಭಾಗೃಹ ಎಲ್ಲಿಯೂ ಇಲ್ಲ. ಆದುದರಿಂದ ಸಮಾಜ ಬಾಂಧವರು ಎಲ್ಲರೂ ಸೇರಿ ಈ ಸಭಾಗೃಹವನ್ನು ಆದಷ್ಟು ಬೇಗನೇ ಲೋಕಾರ್ಪಣೆ ಮಾಡಬೇಕಾಗಿದೆ ಎಂದರು. ಕುಲಾಲ ಸಂಘ ಮುಂಬೈಯ ಗೌರವಾಧ್ಯಕ್ಷ ದೇವದಾಸ್ ಎಲ್ ಕುಲಾಲ್ ಮಾತನಾಡಿ, ಹತ್ತು ವರ್ಷಗಳ ಹಿಂದೆ ಪಿ.ಕೆ. ಸಾಲಿಯಾನ್ ಅವರು ಅಧ್ಯಕ್ಷತೆಯಲ್ಲಿ ಈ ಭವ್ಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿದೆ, ಸಮಾಜ ಬಾಂಧವರ ಸಹಕಾರದಿಂದ ಈ ವರ್ಷ ಪೂರ್ತಿ ಪೂರ್ಣಗೊಳ್ಳಲಿದೆ ಎಂದು ನುಡಿದರು.

ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಭವ್ಯ ಕುಲಾಲ ಭವನ ಹೆಚ್ಚಿನ ಕೆಲಸಗಳು ಪೂರ್ತಿಗೊಂಡಿದೆ, ಸಭಾಂಗಣ ಮಾತೃ ಕೆಲಸ ಬಾಕಿ ಇದೆ. ಅದರ ಕೆಲಸ ಕೂಡ ಶೀಘ್ರಗತಿಯಲ್ಲಿ ನಡೆಯುತ್ತಿದೆ ಎಂದು ನುಡಿದರು,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್. ಗುಜರನ್, ಉದ್ಯಮಿ ಜಗದೀಶ್ ರಾಮ ಬಂಜನ್, ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೊತ್ತಮ ಕುಲಾಲ್ ಕಲ್ಪಾವಿ,ಮಂಗಳೂರು ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಬಂಗೇರ ಉಪಸ್ಥಿತರಿದ್ದರು.
ಸಭೆಯಲ್ಲಿ ಕುಲಾಲ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಎಲ್. ಆರ್. ಸ್ವಾಗತಿಸಿದರು. ಅಮೂಲ್ಯ ಉಪಸಂಪಾದಕ ಆನಂದ ಬಿ. ಮೂಲ್ಯ ಧನ್ಯವಾದ ನೀಡಿದರು.
ಕಾರ್ಯಕ್ರಮವನ್ನು ಮುಂಬೈಯ ಪತ್ರಕರ್ತ ಸಮಾಜ ಸೇವಕ ದಿನೇಶ್ ಬಿ. ಕುಲಾಲ್ ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು