4:39 PM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ಮುಳ್ಳಯ್ಯನಗಿರಿಯಲ್ಲಿ ಬೆಟ್ಟ ಹತ್ತಿಸಲು ಇರುವ ಜೀಪ್ ಪಯಣ ನಿಮ್ಮ ಜೀವಕ್ಕೆ ಮುಳ್ಳಾಗಬಹುದು ಹುಷಾರ್.!!

04/08/2021, 23:20

ಗಣೇಶ್ ಅದ್ಯಪಾಡಿ,ಮಂಗಳೂರು
info.reporterkarnataka@gmail.com

ಕಾಫಿ ನಾಡು ಚಿಕ್ಕಮಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಳ್ಳಯ್ಯನಗಿರಿ ಕೂಡ ಒಂದು. ಇಲ್ಲಿ ಪ್ರವಾಸಿಗರ ವಾಹನಗಳನ್ನು ಕೆಳಗಿನ ದೇವಾಲಯದ ಪಕ್ಕ ಇಟ್ಟ ಬಳಿಕ ಬೆಟ್ಟದ ತುದಿ ಅಂದರೆ ಶ್ರೀ ಗುರು ಮೇಲುಗದ್ದಿಗೆ ಮುಳ್ಳಪ್ಪ ಸ್ವಾಮಿ ಮಠದ ಮೆಟ್ಟಿಲು ಆರಂಭ ಆಗುವಲ್ಲಿಗೆ ತಲುಪಿಸುವ ಶರ ವೇಗದ ಜೀಪಿನ ಪಯಣ ನಿಮ್ಮ ಜೀವನಕ್ಕೇ ಕುತ್ತಾಗಬಹುದು.

ವೀಡಿಯೊ – 👇

ಹೌದು, ಇಲ್ಲಿ ಅನೇಕ ಮಹೇಂದ್ರ ಜೀಪ್‌ಗಳು ಹಾಗೂ ಟಾಟ ಸುಮೊ ಥರದ ಗಾಡಿಗಳು ಬೆಟ್ಟ ಹತ್ತಿಸಲು ತಯಾರಾಗಿ ನಿಂತಿರುತ್ತೆ, ವಾರಾಂತ್ಯದಲ್ಲಿ ಬಹುಸಂಖ್ಯೆಯಲ್ಲಿ ಇಲ್ಲಿಗೆ ಜನರು ಭೇಟಿ ನೀಡುವಾಗ ಚಾತಕ ಪಕ್ಷಿಗಳಂತೆ ಕಾಯುವ ಈ ಜೀಪ್‌ಗಳು ಪ್ರತಿ ಟ್ರಿಪ್‌ಗೆ 300 ರೂಪಾಯಿ ಶುಲ್ಕ ಇಟ್ಟು ಬೆಟ್ಟ ಹತ್ತಿಸುತ್ತವೆ.

ಇದೆಲ್ಲ ಓಕೆ ಆದರೆ ಇಲ್ಲಿರುವ ಬಹುತೇಕ ಜೀಪ್‌ಗಳಿಗೆ ಇನ್ಸುರೆನ್ಸೆ ಇಲ್ಲ..! ಹಾಗೂ ಫಿಟ್‌ನೆಸ್ ಸರ್ಟಿಫಿಕೇಟ್ ಇರದ ಜೀಪ್‌ಗಳು ಕೂಡ ಇಲ್ಲಿ ಬೆಟ್ಟ ಹತ್ತಿಸುವ ಕೆಲಸ ಮಾಡ್ತಿದೆ. ಅತಿ ಚಾಣಕ್ಷ ಡ್ರೈವರ್‌ಗಳ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಡ್ರೈವಿಂಗ್ ರೋಮಾಂಚನವಾದರೂ ಒಂಚೂರು ಎಡವಿದರು ಪ್ರಾಣ ಹಾನಿಯ ಜತೆಗೆ ಪರಿಹಾರ ಕೂಡ ಸಿಗದ ಹಾಗೆ ಜೀವನಕ್ಕೆ ಕುತ್ತು ತಂದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಬ್ಲ್ಯಾಕ್ ಲಿಸ್ಟ್ ಆದ ಗಾಡಿಗಳೂ ಇಲ್ಲಿ ಕಾರ್ಯಾಚರಣೆ ಮಾಡ್ತ ಇರೋದು ಸಂಚಾರಿ ಪೋಲಿಸರ ಹಾಗೂ ಅಧಿಕಾರಗಳ ಜಾಣ ಕುರುಡಿಗೆ ಸಾಕ್ಷಿಯಾಗಿದೆ.

ಈ ಅಪಾಯಕಾರಿ ಬೆಟ್ಟದ ಹಾವಿನಂತಹ ರಸ್ತೆಗಳಲ್ಲಿ ಈ ರೀತಿಯ ಫಿಟ್‌ನೆಸ್ ಇರದ ಜೀಪ್‌ಗಳನ್ನು ಹಾಗೂ ಇನ್ಸುರೆನ್ಸ್ ಇರದ ಗಾಡಿಗಳನ್ನು ಓಡಿಸಲು ಅನುಮತಿ ಕೊಟ್ಟ ಚಿಕ್ಕಮಗಳೂರು ಪ್ರವಾಸೋದ್ಯಮ ಇಲಾಖೆಯ ಕುರುಡು ಕಣ್ಣಿಗೆ ಏನನ್ನಬೇಕೊ ಗೊತ್ತಾಗುವುದಿಲ್ಲ. ಸಾವಿರಾರು ಜನ ಪ್ರವಾಸಿಗರ ಜೀವದ ಜತೆ ಚೆಲ್ಲಾಟ ಅಡುವ ಈ ಜಾಣ ಕುರುಡುತನಕ್ಕೆ ಇಲ್ಲಿಯ ಸ್ಥಳೀಯ ಪೋಲಿಸರು ಕೂಡ ಸಾಥ್ ನೀಡುತ್ತಿರಬಹುದೆನ್ನುವ ಗುಮಾನಿ ಮೂಡುತ್ತದೆ.

ಜೀಪ್‌ಗಳ ಮೇಲೆ ಪ್ರವಾಸೋದ್ಯಮ ಇಲಾಖೆ ಸ್ಟಿಕ್ಕರ್ ಅಂಟಿಸಿಕೊಂಡು ಪ್ರವಾಸಿಗರ ವಿಶ್ವಾಸ ಗಳಿಸಿಕೊಂಡು ಈ ರೀತಿಯ ಬೇಜವಾಬ್ದಾರಿಯುತ ಕೆಲಸ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮವನ್ನು ಆಡಳಿತ ತೆಗೆದುಕೊಳ್ಳಬೇಕಾಗಿದೆ. ಇದು ಪ್ರವಾಸಿಗರ ಹಿತದೃಷ್ಟಿಯಿಂದ ಅವಶ್ಯಕವೂ ಆಗಿದೆ. ಅಲ್ಲೆ ಠಿಕಾಣಿ ಹೂಡಿರುವ ಪೋಲಿಸರು ಕೂಡ ಇದನ್ನು ಗಮನಿಸದೇ ಇರುವುದು ವಿಡಂಬನೀಯ ವಿಚಾರ.

ಚಿಕ್ಕಮಗಳೂರಿಗೆಂದು ಪ್ರವಾಸಕ್ಕೆ ಕಳೆದ ಭಾನುವಾರ ಹೋಗಿದ್ದೆವು, ಮುಳ್ಳಯ್ಯನಗಿರಿ ಬೆಟ್ಟದ ತುದಿಗೆ ಹತ್ತಲು ಜೀಪ್‌ನಲ್ಲಿ ಹೋದಂತಹ ಸಂದರ್ಭ ಜೀಪಿನ ಪರಿಸ್ಥಿತಿ ಹಾಗೆ ಚಾಲಕನ ಡ್ರೈವಿಂಗ್ ಎರಡೂ ಅಪಾಯಕಾರಿ ಎನಿಸಿತು, ಪಯಣದ ಸಂದರ್ಭ ಮಾಡಿದ ವಿಡಿಯೋದಲ್ಲಿ ರೆಕಾರ್ಡ್ ಆದ ಗಾಡಿ ನಂಬರ್ ಸರ್ಚ್ ಮಾಡಿ ನೋಡಿದಾಗ ಕಂಡ ಫಲಿತಾಂಶ ದಂಗು ಬಡಿಯುವಂತೆ ಮಾಡಿತು, ಈ ಬಗ್ಗೆ ಚಿಕ್ಕಮಗಳೂರು ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು, ಒಳ್ಳೆಯ ವ್ಯವಸ್ಥೆ ಮಾಡಿಕೊಡಲಿ.
ಪ್ರವಾಸಿಗ, ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು