8:10 PM Thursday5 - March 2026
ಬ್ರೇಕಿಂಗ್ ನ್ಯೂಸ್
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆರತಕ್ಷತೆ: ಶುಭ ಹಾರೈಸಿದ ಡಿಕೆಶಿ- ಪೊನ್ನಣ್ಣ ಬೇಡ್ತಿ ಸಮೀಪ ಕೆಎಸ್ಸಾರ್ಟಿಸಿ ಬಸ್ -ಕಾರು ಡಿಕ್ಕಿ,: ಮಂಗಳೂರಿನ ಉದ್ಯಮಿ ಸಾವು ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ

ಇತ್ತೀಚಿನ ಸುದ್ದಿ

ಸಿಂಧನೂರು ಸಿದ್ದ ಪರ್ವತ ಅಂಬಾ ದೇವಸ್ಥಾನದಲ್ಲಿ ಸಾಲಿಮಠ, ಪಟ್ಟಣಶೆಟ್ಟಿ ಅವರಿಗೆ ಸನ್ಮಾನ

18/06/2023, 20:08

ರಾಯಚೂರು(reporterkarnataka.com): ಜಿಲ್ಲೆಯ ಸಿಂಧನೂರು ತಾಲೂಕಿನ ಹೆಸರಾಂತ ಪ್ರಸಿದ್ಧ ಪರ್ವತ ಅಂಬಾ ದೇವಸ್ಥಾನದಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ತಾಲೂಕು ಅಧ್ಯಕ್ಷ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಹಾಗೂ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಪಟ್ಟಣಶೆಟ್ಟಿ ಅವರಿಗೆ ಶ್ರೀಗಳಿಂದ ಸನ್ಮಾನಿಸಲಾಯಿತು.
ಮಾತೆ ಸಿದ್ದ ಪರ್ವತ ಅಂಬಾ ದೇವಿ ಆಶೀರ್ವಾದ ಇವರ ಕುಟುಂಬಕ್ಕೆ ಸದಾ ಇರಲಿ ಎಂದು ಶುಭ ಹಾರೈಸಿದರು ಪತ್ರಕರ್ತೆ ಸರೋಜಾ ಹರಗ ಅವರ ಅನುಷ್ಠಾನ ಮುಕ್ತಾಯದ ಕುರಿತು ಮಸ್ಕಿ ತಾಲೂಕು ಕರ್ನಾಟಕ ಕಾರ್ಯ ನಿರ್ವತ ಪತ್ರಕರ್ತರ ದ್ವನಿ ಪತ್ರಕರ್ತರಿಂದ ಸನ್ಮಾನ.

ಸಿಂಧನೂರು ತಾಲೂಕಿನ ಸಿದ್ದ ಪರ್ವತ ಅಂಬಾ ದೇವಸ್ಥಾನದಲ್ಲಿ 11 ದಿನಗಳ ಕಾಲ ಅನುಷ್ಠಾನಕ್ಕೆ ಕುಳಿತ ಸಂಪಾದಕಿ ಸರೋಜಾ ಅರಿಗೆ ಅವರ ಇಷ್ಟಾರ್ಥಗಳನ್ನು ಸಿದ್ಧಿಯಾಗುವ ಅನುಷ್ಠಾನದ ಕುರಿತು ಶ್ರೀ ಮಹೇಶ್ ಗುರೂಜಿ ಅವರ ತಮ್ಮ ಅನಿಸಿಕೆಗಳನ್ನು ಹೇಳುವ ಮುಖಾಂತರ ಸರೋಜಿನಿ ಅರಗ ಅವರಿಗೆ ಒಳ್ಳೆಯದಾಗಲಿ ಮತ್ತು ಅವರ ಸ್ನೇಹಿತರಾದ ಪತ್ರಕರ್ತರು ಮಹಾಂತೇಶ್ ಪಟ್ಟಣಶೆಟ್ಟಿ ದಿದ್ದಿಗಿ ಹಾಗೂ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಹಾಗೂ ಗಂಗಾವತಿಯ ವೆಂಕಟೇಶ್ ಮಾಂತ ಪತ್ರಕರ್ತ ಸಂಪಾದಕರಿಗೂ ಸನ್ಮಾನಿಸಿದರು. ಈ ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಶ್ರೀ ಚಿದಾನಂದ ಗುರೂಜಿ ಅವಧೂತರು ಅವರ ಪತ್ನಿ ಮಾನವತಿ ಅಮ್ಮನವರ ನೇತೃತ್ವದಲ್ಲಿ ಪೂಜೆ ಕಾರ್ಯಕ್ರಮ ನೆರವೇರಿತು ಶ್ರೀ ಮಹೇಶ್ ಗುರೂಜಿ ಶಿವಯೋಗಿಗಳಿಂದ ಆಶೀರ್ವಾದ ಪಡೆದ ಸರೋಜಾ ಹರಿಗೆ, ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ, ಮಹಾಂತೇಶ್ ಪಟ್ಟಣಶೆಟ್ಟಿ ವೆಂಕಟೇಶ್ ಅವರಿಗೆ ಶ್ರೀಗಳಿಂದ ಸನ್ಮಾನಿಸಲಾಯಿತು. ಅಂಬಾದೇವಿ ಅರ್ಚಕರಿಂದ ಅಮರೇಶ್ ಅರ್ಚಕರಿಂದ ಶ್ರೀಗಳಿಗೆ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿರೂಪಾಕ್ಷಯ್ಯ ಸ್ವಾಮಿ ಮಹಾಂತೇಶ್ ಅವರಿಗೆ ಒಳ್ಳೆಯದಾಗಲೆಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಶ್ರೀಮತಿ ಸುನಂದ, ಭಾರತಿ ರಘು ಶ್ರೀ ಚಿದಾನಂದ ಅವಧೂತ ಶರಣರು ಹಾಗೂ ಶ್ರೀ ಮಹೇಶ್ ಗುರೂಜಿ, ಗಂಗಾವತಿಯ ವೆಂಕಟೇಶ್, ಮಂತ ಸಂಪಾದಕ ಮಹಾಂತೇಶ್ ಪಟ್ಟಣಶೆಟ್ಟಿ, ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಸೇರಿದಂತೆ ಇನ್ನಿತರ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು